ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಕಾವೇರಿ ಯೋಜನೆ ಜನಕ ನಿಜಲಿಂಗಪ್ಪಗೆ ಹಾರ್ದಿಕ ಸನ್ಮಾನ

Published 6 ಫೆಬ್ರುವರಿ 2024, 0:54 IST
Last Updated 6 ಫೆಬ್ರುವರಿ 2024, 0:54 IST
ಅಕ್ಷರ ಗಾತ್ರ

ಕಾವೇರಿ ಯೋಜನೆ ಜನಕ ನಿಜಲಿಂಗಪ್ಪಗೆ ಹಾರ್ದಿಕ ಸನ್ಮಾನ

ಬೆಂಗಳೂರು, ಫೆ. 5– ‘ಸದ್ಯದ ಸರ್ಕಾರ ಹೋಗಿ, ಜನತೆಗೆ ಉಪಕಾರ ಮಾಡುವ ಸರ್ಕಾರ ಆದಷ್ಟು ಬೇಗನೆ ಬಂದಲ್ಲಿ, ಅದೇ ನನಗೊಂದು ತೃಪ್ತಿ ಹಾಗೂ ಅದೇ ನನಗೆ ಸನ್ಮಾನ ಮಾಡಿದಂತೆ’

–ಕಾವೇರಿ ಯೋಜನೆಯನ್ನು ತಮ್ಮ ಅಧಿಕಾರಾವಧಿಯಲ್ಲಿ ಮಂಜೂರು ಮಾಡಿದ್ದಕ್ಕಾಗಿ ಬೆಂಗಳೂರು ಕಾರ್ಪೊರೇಷನ್ ಜಿಲ್ಲಾ (ಸಂಸ್ಥಾ) ಸಮಿತಿಯ ಆಶ್ರಯದಲ್ಲಿ ತಮಗೆ ಏರ್ಪಡಿಸ
ಲಾಗಿದ್ದ ಸನ್ಮಾನಕ್ಕೆ ನೀಡಿದ ಉತ್ತರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಈ ಮಾತನ್ನು ಹೇಳಿದರು. 

ಈಚೆಗೆ ನಗರದಲ್ಲಿ ‘ಕಾವೇರಿ’ಗೆ ಸ್ವಾಗತ ನೀಡಿ ನಡೆದ ಸಮಾರಂಭದಲ್ಲಿ, ಬೆಂಗಳೂರು ನಗರಕ್ಕೆ ಕಾವೇರಿ ನೀರನ್ನು ಒದಗಿಸುವ ಯೋಜನೆಗೆ ಮಂಜೂರಾತಿ ನೀಡಿದ ಹಿಂದಿನ ಸರ್ಕಾರ ಹಾಗೂ ನಾಯಕರನ್ನು ಸ್ಮರಿಸಲಿಲ್ಲ ಎಂಬುದರ ಬಗ್ಗೆ ಪ್ರಸ್ತಾಪಿಸಿದ ಅವರು, ‘ಉಪಕಾರ ಮಾಡಿದೆ ಅಂತ ಅದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುವುದು ತಪ್ಪು’ ಎಂದರು. 

ಸುಳಿವಿತ್ತರೆ ಬಹುಮಾನ

ಬೆಂಗಳೂರು, ಫೆ. 5– ಆಹಾರಧಾನ್ಯಗಳ ಅಕ್ರಮ ಸಂಗ್ರಹದ ಬಗ್ಗೆ ಸ್ಪಷ್ಟ ಸುಳಿವು ಕೊಡು
ವವರಿಗೆ 25ರಿಂದ 100 ರೂಪಾಯಿಗಳವರೆಗೆ ಬಹುಮಾನ ಕೊಡುವುದಾಗಿ ಆಹಾರ ಮಂತ್ರಿ ಕೆ.ಎಚ್. ಪಾಟೀಲರು ಪ್ರಕಟಿಸಿದ್ದಾರೆ. 

‘ಅಂಥವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು’ ಎಂದು ಸಚಿವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ರಾಜ್ಯದ ಹಲವೆಡೆ ಅಕ್ರಮ ಸಂಗ್ರಹಗಳ ಮೇಲೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಈ ವಿಷಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT