ಅಹ್ಮದಾಬಾದ್, ಜ. 17–ಗುಜರಾತಿನ ಮೂರು ಪಟ್ಟಣಗಳಲ್ಲಿ ಸರ್ಕಾರಿ ಧಾನ್ಯ ಉಗ್ರಾಣಗಳನ್ನು ಲೂಟಿಮಾಡಿದ ದೊಂಬಿಯನ್ನು ಚದುರಿಸಲು ನಿನ್ನೆ ರಾತ್ರಿ ಮತ್ತು ಈ ದಿನ ಎರಡು ಕಡೆ ಪೋಲೀಸರು ಒಟ್ಟು ಐದು ಸುತ್ತು ಗುಂಡು ಹಾರಿಸಿದರು.
ಪೊಲೀಸ್ ಗೋಲಿಬಾರಿನಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಬಚ್ಚಿಟ್ಟ ಆಹಾರಧಾನ್ಯ ಹೊರತೆಗೆಯಲು ವ್ಯಾಪಕ ಕ್ರಮ
ಬೆಂಗಳೂರು, ಜ.17 – ಇನ್ನು ಆರು ವಾರಗಳಲ್ಲಿ ಉದ್ದೇಶಿತ 2.5 ಲಕ್ಷ ಟನ್ನುಗಳ ಆಹಾರ ಸಂಗ್ರಹ ಗುರಿಯನ್ನು ಸಾಧಿಸಲು ಹಟತೊಟ್ಟಿರುವ ಸರ್ಕಾರವು, ಕಾಳಸಂತೆ ಮತ್ತು ಅಕ್ರಮ ಸಂಗ್ರಹದಲ್ಲಿರುವ ಆಹಾರಧಾನ್ಯಗಳನ್ನು ಹೊರತೆಗೆಯಲು ವ್ಯಾಪಕ ಕ್ರಮಗಳನ್ನು ಕೈಗೂಳ್ಳುತ್ತಿದೆ.
ಆಹಾರ ಸಚಿವ ಕೆ.ಎಚ್. ಪಾಟೀಲರ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಈ ಕಾರ್ಯ ಈಗಾಗಲೇ ಆರಂಭವಾಗಿದ್ದು ಸುಮಾರು ಒಂದು ಕೋಟಿ ರೂ.ಗಳ ಬೆಳೆಬಾಳುವ ಆಹಾರ ಧಾನ್ಯಗಳು ಅಕ್ರಮ ದಾಸ್ತಾನಿನಿಂದ ಹೊರಬಂದಿವೆ.