<p><strong>ಲೋಕಸಭೆಯಲ್ಲಿ ಭಾರಿ ಕೋಲಾಹಲ ವೇದಿಕೆಗೆ ವಿರೋಧಿಗಳ ಮುತ್ತಿಗೆ</strong></p>.<p>ನವದೆಹಲಿ, ಸೆ. 5– ಆಮದು ಲೈಸೆನ್ಸ್ ಹಗರಣದ ಸಂಬಂಧದಲ್ಲಿ ಸ್ವತಂತ್ರ ಪಕ್ಷದ ನಾಯಕ ಪಿಲೂಮೋದಿ ಅವರು ಮಂಡಿಸಿದ್ದ ನಿರ್ಣಯವನ್ನು ಲೋಕಸಭೆ ತಿರಸ್ಕರಿಸಿತು.</p>.<p>ನಿರ್ಣಯ ತಿರಸ್ಕೃತವಾದ ಬಳಿಕ ಸಭೆಯಲ್ಲಿ ಕೋಲಾಹಲ ಉಂಟಾಯಿತು. ಕೋಪೋದ್ರಿಕ್ತರಾದ ವಿರೋಧ ಪಕ್ಷದ ಸದಸ್ಯರು ವೇದಿಕೆಯತ್ತ ಧಾವಿಸಿದರು. ಅಧ್ಯಕ್ಷರನ್ನು ಸುತ್ತುವರಿಯಲು ಪ್ರಯತ್ನಿಸಿದರು.</p>.<p>ಸಂಸತ್ ಸದಸ್ಯರನ್ನು ಟೀಕಿಸಿದ ಹಿಂದಿ ವಾರಪತ್ರಿಕೆ ‘ಪ್ರತಿಪಕ್ಷ’ದ ವಿರುದ್ಧ ಕಾಂಗ್ರೆಸ್ ಸದಸ್ಯ ವಸಂತ ಎಸ್. ಅವರು ನಿರ್ಣಯವನ್ನು ಮಂಡಿಸುವುದಕ್ಕೆ ವಿರೋಧ ಪಕ್ಷದವರು ವಿರೋಧ ಮಾಡಿದರು. ಸಂಜೆ 6 ಗಂಟೆಯಾಗಿದ್ದರಿಂದ ಸಭೆಯನ್ನು ಮುಂದೂಡುವಂತೆಯೂ ಅವರು ಒತ್ತಾಯಿಸಿದರು.</p>.<p><strong>ಸಿಮೆಂಟ್, ಉಕ್ಕು ಅಕ್ರಮ ಮಾರಾಟ ಕಂಟ್ರಾಕ್ಟರ್ ವಿರುದ್ಧ ಕ್ರಮ</strong></p>.<p>ಬೆಂಗಳೂರು, ಸೆ. 5– ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡು ಹರಿಜನ ವಿದ್ಯಾರ್ಥಿ ನಿಲಯಗಳಿಗೆ ಸೇರಿದ ಸಿಮೆಂಟ್ ಮತ್ತು ಉಕ್ಕು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಕಂಟ್ರಾಕ್ಟರ್ ವಿರುದ್ಧ ವಿಶ್ವಾಸದ್ರೋಹ ಆಪಾದನೆಯ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ.</p>.<p>ದಾಸ್ತಾನು ಮಳಿಗೆಯಲ್ಲಿ 11 ಟನ್ಗಳಷ್ಟು ಉಕ್ಕು ಮತ್ತು 2,902 ಚೀಲ ಸಿಮೆಂಟ್ ಕೊರತೆ ಇದ್ದುದು ಜಾಗೃತ ಆಯೋಗದವರು ನಡೆಸಿದ ತನಿಖೆಯಿಂದ ಗೊತ್ತಾಗಿದೆ ಎಂದು ಲೋಕೋಪಯೋಗಿ ಖಾತೆ ಸಚಿವ <br>ಎಚ್.ಎಂ. ಚನ್ನಬಸಪ್ಪ ಅವರು ಇಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಅವರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೋಕಸಭೆಯಲ್ಲಿ ಭಾರಿ ಕೋಲಾಹಲ ವೇದಿಕೆಗೆ ವಿರೋಧಿಗಳ ಮುತ್ತಿಗೆ</strong></p>.<p>ನವದೆಹಲಿ, ಸೆ. 5– ಆಮದು ಲೈಸೆನ್ಸ್ ಹಗರಣದ ಸಂಬಂಧದಲ್ಲಿ ಸ್ವತಂತ್ರ ಪಕ್ಷದ ನಾಯಕ ಪಿಲೂಮೋದಿ ಅವರು ಮಂಡಿಸಿದ್ದ ನಿರ್ಣಯವನ್ನು ಲೋಕಸಭೆ ತಿರಸ್ಕರಿಸಿತು.</p>.<p>ನಿರ್ಣಯ ತಿರಸ್ಕೃತವಾದ ಬಳಿಕ ಸಭೆಯಲ್ಲಿ ಕೋಲಾಹಲ ಉಂಟಾಯಿತು. ಕೋಪೋದ್ರಿಕ್ತರಾದ ವಿರೋಧ ಪಕ್ಷದ ಸದಸ್ಯರು ವೇದಿಕೆಯತ್ತ ಧಾವಿಸಿದರು. ಅಧ್ಯಕ್ಷರನ್ನು ಸುತ್ತುವರಿಯಲು ಪ್ರಯತ್ನಿಸಿದರು.</p>.<p>ಸಂಸತ್ ಸದಸ್ಯರನ್ನು ಟೀಕಿಸಿದ ಹಿಂದಿ ವಾರಪತ್ರಿಕೆ ‘ಪ್ರತಿಪಕ್ಷ’ದ ವಿರುದ್ಧ ಕಾಂಗ್ರೆಸ್ ಸದಸ್ಯ ವಸಂತ ಎಸ್. ಅವರು ನಿರ್ಣಯವನ್ನು ಮಂಡಿಸುವುದಕ್ಕೆ ವಿರೋಧ ಪಕ್ಷದವರು ವಿರೋಧ ಮಾಡಿದರು. ಸಂಜೆ 6 ಗಂಟೆಯಾಗಿದ್ದರಿಂದ ಸಭೆಯನ್ನು ಮುಂದೂಡುವಂತೆಯೂ ಅವರು ಒತ್ತಾಯಿಸಿದರು.</p>.<p><strong>ಸಿಮೆಂಟ್, ಉಕ್ಕು ಅಕ್ರಮ ಮಾರಾಟ ಕಂಟ್ರಾಕ್ಟರ್ ವಿರುದ್ಧ ಕ್ರಮ</strong></p>.<p>ಬೆಂಗಳೂರು, ಸೆ. 5– ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡು ಹರಿಜನ ವಿದ್ಯಾರ್ಥಿ ನಿಲಯಗಳಿಗೆ ಸೇರಿದ ಸಿಮೆಂಟ್ ಮತ್ತು ಉಕ್ಕು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಕಂಟ್ರಾಕ್ಟರ್ ವಿರುದ್ಧ ವಿಶ್ವಾಸದ್ರೋಹ ಆಪಾದನೆಯ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ.</p>.<p>ದಾಸ್ತಾನು ಮಳಿಗೆಯಲ್ಲಿ 11 ಟನ್ಗಳಷ್ಟು ಉಕ್ಕು ಮತ್ತು 2,902 ಚೀಲ ಸಿಮೆಂಟ್ ಕೊರತೆ ಇದ್ದುದು ಜಾಗೃತ ಆಯೋಗದವರು ನಡೆಸಿದ ತನಿಖೆಯಿಂದ ಗೊತ್ತಾಗಿದೆ ಎಂದು ಲೋಕೋಪಯೋಗಿ ಖಾತೆ ಸಚಿವ <br>ಎಚ್.ಎಂ. ಚನ್ನಬಸಪ್ಪ ಅವರು ಇಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಅವರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>