<p>ನಗರದ ಬಹಿರಂಗ ಪೇಟೆಗೆ 2000 ಟನ್ ಅಕ್ಕಿ ಬಿಡುಗಡೆ </p>.<p>ಬೆಂಗಳೂರು, ಆ. 23– ನಗರದ ಅಕ್ಕಿ ಸಗಟು ವ್ಯಾಪಾರಿಗಳಲ್ಲಿ ಸಂಗ್ರಹ ಕಡಿಮೆಯಾಗಿರುವುದರ ಪರಿಣಾಮವಾಗಿ ಉಂಟಾಗಿರುವ ಕೊರತೆ ನಿವಾರಿಸಲು, ಆಹಾರ ಇಲಾಖೆಯು ನಾಳೆ 2000 ಟನ್ಗಳಷ್ಟು ಅಕ್ಕಿಯನ್ನು ಬಹಿರಂಗ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.</p>.<p> ಈ ಅಕ್ಕಿಯ ವಿಶೇಷ ಮಾರಾಟವು, ಕೆಂಪೇಗೌಡ ರಸ್ತೆ ಮತ್ತು ನರಸಿಂಹ ರಾಜಾ ರಸ್ತೆಯಲ್ಲಿರುವ ಜನತಾ ಬಜಾರ್ ಶಾಖೆಗಳಲ್ಲಿ ನಡೆಯುವುದು.</p>.<p>ಪ್ರತಿ ರೇಷನ್ ಕಾರ್ಡಿಗೆ ತಲಾ ಐದು ಕೆ.ಜಿ.ಯಂತೆ ಅಕ್ಕಿ ದೊರೆಯುವುದು. ಬೆಲೆ ಈ ರೀತಿ ಇದೆ: ಉತ್ತಮ ಅಕ್ಕಿ ಕೆ.ಜಿ.ಗೆ 1= 45 ರೂ. ಮಧ್ಯಮ ಉತ್ತಮ 1= 35, ಮಧ್ಯಮ 1= 25 ರೂ. ದಪ್ಪಕ್ಕಿ 1= 15.</p>.<p>ಉದ್ಯೋಗ ಯೋಜನೆಗೆ ಮಿತವ್ಯಯದ ಕತ್ತರಿ ಇಲ್ಲ– ಧಾರಿಯಾ</p>.<p>ನವದೆಹಲಿ, ಆ. 23– ಮಿತವ್ಯಯದ ಕ್ರಮಗಳನ್ನು ಜಾರಿಗೆ ತಂದರೂ ಸರಕಾರ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲವೆಂದು ಯೋಜನಾ ಶಾಖೆ ರಾಜ್ಯ ಸಚಿವ ಮೋಹನ ಧಾರಿಯಾ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.</p>.<p>ಕೃಷ್ಣಕಾಂತ್ ಅವರ ಪ್ರಶ್ನೆಗೆ ಧಾರಿಯಾ ಅವರು ಉತ್ತರ ಕೊಟ್ಟು, ಒಂದು ಲಕ್ಷ ಜನರಿಗೆ ಉದ್ಯೋಗ ಒದಗಿಸುವ 100 ಕೋಟಿ ರೂ.ಗಳ ಕಾರ್ಯಕ್ರಮವನ್ನು ಸರಕಾರ ಕಾರ್ಯಗತಗೊಳಿಸುವುದೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಗರದ ಬಹಿರಂಗ ಪೇಟೆಗೆ 2000 ಟನ್ ಅಕ್ಕಿ ಬಿಡುಗಡೆ </p>.<p>ಬೆಂಗಳೂರು, ಆ. 23– ನಗರದ ಅಕ್ಕಿ ಸಗಟು ವ್ಯಾಪಾರಿಗಳಲ್ಲಿ ಸಂಗ್ರಹ ಕಡಿಮೆಯಾಗಿರುವುದರ ಪರಿಣಾಮವಾಗಿ ಉಂಟಾಗಿರುವ ಕೊರತೆ ನಿವಾರಿಸಲು, ಆಹಾರ ಇಲಾಖೆಯು ನಾಳೆ 2000 ಟನ್ಗಳಷ್ಟು ಅಕ್ಕಿಯನ್ನು ಬಹಿರಂಗ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.</p>.<p> ಈ ಅಕ್ಕಿಯ ವಿಶೇಷ ಮಾರಾಟವು, ಕೆಂಪೇಗೌಡ ರಸ್ತೆ ಮತ್ತು ನರಸಿಂಹ ರಾಜಾ ರಸ್ತೆಯಲ್ಲಿರುವ ಜನತಾ ಬಜಾರ್ ಶಾಖೆಗಳಲ್ಲಿ ನಡೆಯುವುದು.</p>.<p>ಪ್ರತಿ ರೇಷನ್ ಕಾರ್ಡಿಗೆ ತಲಾ ಐದು ಕೆ.ಜಿ.ಯಂತೆ ಅಕ್ಕಿ ದೊರೆಯುವುದು. ಬೆಲೆ ಈ ರೀತಿ ಇದೆ: ಉತ್ತಮ ಅಕ್ಕಿ ಕೆ.ಜಿ.ಗೆ 1= 45 ರೂ. ಮಧ್ಯಮ ಉತ್ತಮ 1= 35, ಮಧ್ಯಮ 1= 25 ರೂ. ದಪ್ಪಕ್ಕಿ 1= 15.</p>.<p>ಉದ್ಯೋಗ ಯೋಜನೆಗೆ ಮಿತವ್ಯಯದ ಕತ್ತರಿ ಇಲ್ಲ– ಧಾರಿಯಾ</p>.<p>ನವದೆಹಲಿ, ಆ. 23– ಮಿತವ್ಯಯದ ಕ್ರಮಗಳನ್ನು ಜಾರಿಗೆ ತಂದರೂ ಸರಕಾರ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲವೆಂದು ಯೋಜನಾ ಶಾಖೆ ರಾಜ್ಯ ಸಚಿವ ಮೋಹನ ಧಾರಿಯಾ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.</p>.<p>ಕೃಷ್ಣಕಾಂತ್ ಅವರ ಪ್ರಶ್ನೆಗೆ ಧಾರಿಯಾ ಅವರು ಉತ್ತರ ಕೊಟ್ಟು, ಒಂದು ಲಕ್ಷ ಜನರಿಗೆ ಉದ್ಯೋಗ ಒದಗಿಸುವ 100 ಕೋಟಿ ರೂ.ಗಳ ಕಾರ್ಯಕ್ರಮವನ್ನು ಸರಕಾರ ಕಾರ್ಯಗತಗೊಳಿಸುವುದೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>