ವಡೇನಬೈಲ್ ಸುರಂಗದಲ್ಲಿ ಕಾಂಕ್ರೀಟ್ ಕಿತ್ತು ಬಿರುಕು ಮತ್ತು ಕೊಳ್ಳಗಳಾಗಿ ಜಲ್ಲಿ ಕಬ್ಬಿಣದ ಸರಳು ಎದ್ದು ಬಂದಿರುವ ವಿಚಾರದಲ್ಲಿ ಕಳೆದವಾರ ಸಭೆಗೆ ವಿವರ ನೀಡಿದ ಸಚಿವರು ತಾವು ಆಶ್ವಾಸನೆ ನೀಡಿದಂತೆ ಶರಾವತಿ ವಿಚಾರದಲ್ಲಿ ಪೂರ್ಣ ಹೇಳಿಕೆ ನೀಡಿದರು. ಈವರೆಗೆ ಅಷ್ಟಾಗಿ ಬೆಳಕಿಗೆ ಬರದಿರುವ ಲಿಂಗನಮಕ್ಕಿ ತೂಬು, ವಿದ್ಯುತ್ ಕಾಲುವೆ, ತಲಕಳಲೆ ಆಣೆಕಟ್ಟುಗಳ ದುಸ್ಥಿತಿಯನ್ನು ಅವರು ತಮ್ಮ ಹನ್ನೆರಡು ಪುಟಗಳ ಹೇಳಿಕೆಯಲ್ಲಿ ತಿಳಿಸಿದರು.