<p><strong>ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ಸಿಗೆ ಸೋಲು</strong></p>.<p>ಬೆಂಗಳೂರು, ಜೂನ್ 25– ವಿಧಾನಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಅಧ್ಯಾಪಕರ ಕ್ಷೇತ್ರಗಳಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಒಂದು ಸ್ಥಾನವನ್ನು ಕಳೆದುಕೊಳ್ಳುವುದರ ಜೊತೆಗೆ ಉಳಿದ ಮೂರು ಕ್ಷೇತ್ರಗಳಲ್ಲೂ ಪರಾಜಯ ಹೊಂದಿದೆ.</p>.<p>ಜನಸಂಘ ಹಾಗೂ ಅದರ ಬೆಂಬಲ ಪಡೆದ ಅಭ್ಯರ್ಥಿಗಳು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.</p>.<p>ಆಡಳಿತ ಕಾಂಗ್ರೆಸ್ಸಿನ ಒಂದು ಸ್ಥಾನವನ್ನು ಸಂಸ್ಥಾ ಕಾಂಗ್ರೆಸ್ ಕಸಿದು ಒಟ್ಟು ಎರಡು ಸ್ಥಾನಗಳನ್ನು ಪಡೆದಿದೆ.</p>.<p><strong>ಹಾಸನ ಜಿಲ್ಲೆಯಲ್ಲಿ ಭೀಕರ ಪರಿಸ್ಥಿತಿ</strong></p>.<p>ಬೆಂಗಳೂರು, ಜೂನ್ 25– ಮುಂಗಾರು ಮಳೆ ಇಲ್ಲ, ಬೆಳೆಯೂ ಇಲ್ಲ. ಆಷಾಢ <br>ಮಾಸದಲ್ಲೂ ಕುಡಿಯುವ ನೀರಿಗೆ ಅಭಾವ.</p>.<p>ಕರ್ನಾಟಕದ ಹಳೆಯ ಮೈಸೂರಿನ ಬಹುತೇಕ ಪ್ರದೇಶ, ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಈ ‘ಭೀಕರ’ ಪರಿಸ್ಥಿತಿ.</p>.<p>ಈ ಪರಿಸ್ಥಿತಿ ಹತೋಟಿ ಮೀರುವ ಮುನ್ನವೇ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಅವರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ಸಿಗೆ ಸೋಲು</strong></p>.<p>ಬೆಂಗಳೂರು, ಜೂನ್ 25– ವಿಧಾನಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಅಧ್ಯಾಪಕರ ಕ್ಷೇತ್ರಗಳಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಒಂದು ಸ್ಥಾನವನ್ನು ಕಳೆದುಕೊಳ್ಳುವುದರ ಜೊತೆಗೆ ಉಳಿದ ಮೂರು ಕ್ಷೇತ್ರಗಳಲ್ಲೂ ಪರಾಜಯ ಹೊಂದಿದೆ.</p>.<p>ಜನಸಂಘ ಹಾಗೂ ಅದರ ಬೆಂಬಲ ಪಡೆದ ಅಭ್ಯರ್ಥಿಗಳು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.</p>.<p>ಆಡಳಿತ ಕಾಂಗ್ರೆಸ್ಸಿನ ಒಂದು ಸ್ಥಾನವನ್ನು ಸಂಸ್ಥಾ ಕಾಂಗ್ರೆಸ್ ಕಸಿದು ಒಟ್ಟು ಎರಡು ಸ್ಥಾನಗಳನ್ನು ಪಡೆದಿದೆ.</p>.<p><strong>ಹಾಸನ ಜಿಲ್ಲೆಯಲ್ಲಿ ಭೀಕರ ಪರಿಸ್ಥಿತಿ</strong></p>.<p>ಬೆಂಗಳೂರು, ಜೂನ್ 25– ಮುಂಗಾರು ಮಳೆ ಇಲ್ಲ, ಬೆಳೆಯೂ ಇಲ್ಲ. ಆಷಾಢ <br>ಮಾಸದಲ್ಲೂ ಕುಡಿಯುವ ನೀರಿಗೆ ಅಭಾವ.</p>.<p>ಕರ್ನಾಟಕದ ಹಳೆಯ ಮೈಸೂರಿನ ಬಹುತೇಕ ಪ್ರದೇಶ, ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಈ ‘ಭೀಕರ’ ಪರಿಸ್ಥಿತಿ.</p>.<p>ಈ ಪರಿಸ್ಥಿತಿ ಹತೋಟಿ ಮೀರುವ ಮುನ್ನವೇ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಅವರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>