<p>ಮೊದಲ ಬಾರಿ ಇಂದಿರಾ– ಭುಟ್ಟೊ ನಡುವೆ 40 ನಿಮಿಷ ನೇರ ಚರ್ಚೆ</p>.<p>ಸಿಮ್ಲಾ, ಜೂನ್ 30– ಸಹಾಯಕರ ನೆರವಿಲ್ಲದೆ ಭಾರತದ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಭುಟ್ಟೊ ಅವರಿಬ್ಬರೇ ಇಂದು ಸಂಜೆ ಇಲ್ಲಿಯ ರಾಜಭವನದಲ್ಲಿ ಸುಮಾರು ನಲವತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು.</p>.<p>ಎರಡೂ ರಾಷ್ಟ್ರಗಳ ನಡುವೆ ಶಾಂತಿ ಹಾಗೂ ಮೈತ್ರಿಯುತ ಬಾಂಧವ್ಯ ಸ್ಥಾಪನೆಗೆ ಕರಡು ಒಪ್ಪಂದ ರಚಿಸುವುದರಲ್ಲಿ ಅಧಿಕಾರಿ ಮಟ್ಟದಲ್ಲಿ ಒಪ್ಪಿಗೆಯಾಗದೇ ನನೆಗುದಿಗೆ ಬಿದ್ದ ಅಂಶಗಳನ್ನು ಅವರಿಬ್ಬರೂ ಚರ್ಚಿಸಿದರೆಂದು ಗೊತ್ತಾಗಿದೆ.</p>.<p>ಹಿಂದುಳಿದ ವರ್ಗ ನಿರ್ಧರಿಸುವ ಈಗಿನ ನೀತಿ ಬದಲಾಯಿಸಲು ರಾಜ್ಯ ಸರ್ಕಾರದ ಆಲೋಚನೆ</p>.<p>ಬೆಂಗಳೂರು, ಜೂನ್ 30– ಬಡತನವನ್ನು ಆಧರಿಸಿ, ಹಿಂದುಳಿದ ವರ್ಗದವರನ್ನು<br />ನಿರ್ಧರಿಸುವ ಈಗಿನ ನೀತಿಯನ್ನು ಬದಲಾಯಿಸಿ, ಹಿಂದುಳಿದ ಕೆಲವೊಂದು ಜಾತಿಗಳನ್ನೂ ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ಯೋಚಿಸುತ್ತಿದೆ.</p>.<p>ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ದಲಿತವೆಂದು ಪರಿಗಣಿಸಲಾಗಿರುವ ಕೆಲವು ಜಾತಿಗಳವರ ಹಲವು ವರ್ಷಗಳ ಒತ್ತಾಯವನ್ನು ಅನುಸರಿಸಿ, ಈ ಬದಲಾವಣೆ ಮಾಡಲು ಉದ್ದೇಶಿಸಿರುವ ಸರ್ಕಾರ, ಹಿಂದುಳಿದ ವರ್ಗಗಳ ಹೊಸ ಪಟ್ಟಿಯೊಂದನ್ನು ರಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.</p>.<p>ಪ್ರಶ್ನೋತ್ತರ ಕಾಲದಲ್ಲಿ ಈ ವಿಷಯವನ್ನು ಇಂದು ವಿಧಾನಸಭೆಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ‘ಆದಾಯದ ಮೇಲೆ ಹಿಂದುಳಿದ ವರ್ಗದವರನ್ನು ನಿರ್ಧರಿಸುವ ಈಗಿನ ಕ್ರಮದಿಂದ ನ್ಯಾಯ ದೊರೆಯುತ್ತಿಲ್ಲ ಎಂಬ ಕೆಲವು ಜಾತಿಗಳವರ ಮನವಿಗಳನ್ನು ಸರ್ಕಾರ ಮನಗಂಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೊದಲ ಬಾರಿ ಇಂದಿರಾ– ಭುಟ್ಟೊ ನಡುವೆ 40 ನಿಮಿಷ ನೇರ ಚರ್ಚೆ</p>.<p>ಸಿಮ್ಲಾ, ಜೂನ್ 30– ಸಹಾಯಕರ ನೆರವಿಲ್ಲದೆ ಭಾರತದ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಪಾಕಿಸ್ತಾನದ ಅಧ್ಯಕ್ಷ ಭುಟ್ಟೊ ಅವರಿಬ್ಬರೇ ಇಂದು ಸಂಜೆ ಇಲ್ಲಿಯ ರಾಜಭವನದಲ್ಲಿ ಸುಮಾರು ನಲವತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು.</p>.<p>ಎರಡೂ ರಾಷ್ಟ್ರಗಳ ನಡುವೆ ಶಾಂತಿ ಹಾಗೂ ಮೈತ್ರಿಯುತ ಬಾಂಧವ್ಯ ಸ್ಥಾಪನೆಗೆ ಕರಡು ಒಪ್ಪಂದ ರಚಿಸುವುದರಲ್ಲಿ ಅಧಿಕಾರಿ ಮಟ್ಟದಲ್ಲಿ ಒಪ್ಪಿಗೆಯಾಗದೇ ನನೆಗುದಿಗೆ ಬಿದ್ದ ಅಂಶಗಳನ್ನು ಅವರಿಬ್ಬರೂ ಚರ್ಚಿಸಿದರೆಂದು ಗೊತ್ತಾಗಿದೆ.</p>.<p>ಹಿಂದುಳಿದ ವರ್ಗ ನಿರ್ಧರಿಸುವ ಈಗಿನ ನೀತಿ ಬದಲಾಯಿಸಲು ರಾಜ್ಯ ಸರ್ಕಾರದ ಆಲೋಚನೆ</p>.<p>ಬೆಂಗಳೂರು, ಜೂನ್ 30– ಬಡತನವನ್ನು ಆಧರಿಸಿ, ಹಿಂದುಳಿದ ವರ್ಗದವರನ್ನು<br />ನಿರ್ಧರಿಸುವ ಈಗಿನ ನೀತಿಯನ್ನು ಬದಲಾಯಿಸಿ, ಹಿಂದುಳಿದ ಕೆಲವೊಂದು ಜಾತಿಗಳನ್ನೂ ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ ಯೋಚಿಸುತ್ತಿದೆ.</p>.<p>ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ದಲಿತವೆಂದು ಪರಿಗಣಿಸಲಾಗಿರುವ ಕೆಲವು ಜಾತಿಗಳವರ ಹಲವು ವರ್ಷಗಳ ಒತ್ತಾಯವನ್ನು ಅನುಸರಿಸಿ, ಈ ಬದಲಾವಣೆ ಮಾಡಲು ಉದ್ದೇಶಿಸಿರುವ ಸರ್ಕಾರ, ಹಿಂದುಳಿದ ವರ್ಗಗಳ ಹೊಸ ಪಟ್ಟಿಯೊಂದನ್ನು ರಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ.</p>.<p>ಪ್ರಶ್ನೋತ್ತರ ಕಾಲದಲ್ಲಿ ಈ ವಿಷಯವನ್ನು ಇಂದು ವಿಧಾನಸಭೆಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ‘ಆದಾಯದ ಮೇಲೆ ಹಿಂದುಳಿದ ವರ್ಗದವರನ್ನು ನಿರ್ಧರಿಸುವ ಈಗಿನ ಕ್ರಮದಿಂದ ನ್ಯಾಯ ದೊರೆಯುತ್ತಿಲ್ಲ ಎಂಬ ಕೆಲವು ಜಾತಿಗಳವರ ಮನವಿಗಳನ್ನು ಸರ್ಕಾರ ಮನಗಂಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>