<p>ಕೃತಕ ಮಳೆ ತರಿಸಲು ಸಿದ್ಧತೆ</p>.<p>ಬೆಂಗಳೂರು, ಜೂನ್ 28– ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ವಿಫಲವಾಗಿ, ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗುವಂತಾದರೆ, ಲಿಂಗನಮಕ್ಕಿ ಮತ್ತಿತರ ಅಗತ್ಯ ಪ್ರದೇಶಗಳಲ್ಲಿ ‘ಕೃತಕ ಮಳೆ’ ತರಿಸುವ ಕಾರ್ಯಕ್ರಮವನ್ನು ರಾಜ್ಯ ವಿದ್ಯುತ್ ಮಂಡಳಿಯು ರೂಪಿಸುತ್ತಿದೆ.</p>.<p>ದೆಹಲಿಯಿಂದ ಬೆಂಗಳೂರಿಗೆ ಮರಳಿದ ಮಂಡಳಿಯ ಅಧ್ಯಕ್ಷ ಶ್ರೀ ಶಿವಪ್ರಕಾಶಂ ಅವರು, ಈ ಸಂಬಂಧದಲ್ಲಿ ಈಗಾಗಲೇ ಕೇಂದ್ರ ಹವಾಮಾನ ಇಲಾಖೆಯ ಡೈರೆಕ್ಟರ್ ಜನರಲ್ ಅವರೊಡನೆ ಮಾತುಕತೆ ನಡೆಸಿದ್ದಾರೆ.</p>.<p>ಶ್ರೀಲಂಕೆಗೆ ಕಛತೀವು ‘ಭೂದಾನ’ದ ವಿರುದ್ಧ ಜನಸಂಘದ ರಿಟ್</p>.<p>ಮುಂಬೈ, ಜೂನ್ 28– ಕಛತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಕೇಂದ್ರದ ವಿರುದ್ಧ ಜನಸಂಘವು ವಿವಾದ ಎಬ್ಬಿಸಿದೆ.</p>.<p>ಆಯಕಟ್ಟಿನಲ್ಲಿರುವ ಈ ದ್ವೀಪದ ಪರಮಾಧಿಕಾರ ಬಿಟ್ಟುಕೊಡುವುದರ ವಿರುದ್ಧ ಮದ್ರಾಸ್ ಶ್ರೇಷ್ಠ ನ್ಯಾಯಾಲಯದಲ್ಲಿ ರಿಟ್ ಹಾಕುವಂತೆ ಆ ರಾಜ್ಯದ ಘಟಕಕ್ಕೆ ಆದೇಶ ನೀಡಿರುವುದನ್ನು ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೃತಕ ಮಳೆ ತರಿಸಲು ಸಿದ್ಧತೆ</p>.<p>ಬೆಂಗಳೂರು, ಜೂನ್ 28– ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ವಿಫಲವಾಗಿ, ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗುವಂತಾದರೆ, ಲಿಂಗನಮಕ್ಕಿ ಮತ್ತಿತರ ಅಗತ್ಯ ಪ್ರದೇಶಗಳಲ್ಲಿ ‘ಕೃತಕ ಮಳೆ’ ತರಿಸುವ ಕಾರ್ಯಕ್ರಮವನ್ನು ರಾಜ್ಯ ವಿದ್ಯುತ್ ಮಂಡಳಿಯು ರೂಪಿಸುತ್ತಿದೆ.</p>.<p>ದೆಹಲಿಯಿಂದ ಬೆಂಗಳೂರಿಗೆ ಮರಳಿದ ಮಂಡಳಿಯ ಅಧ್ಯಕ್ಷ ಶ್ರೀ ಶಿವಪ್ರಕಾಶಂ ಅವರು, ಈ ಸಂಬಂಧದಲ್ಲಿ ಈಗಾಗಲೇ ಕೇಂದ್ರ ಹವಾಮಾನ ಇಲಾಖೆಯ ಡೈರೆಕ್ಟರ್ ಜನರಲ್ ಅವರೊಡನೆ ಮಾತುಕತೆ ನಡೆಸಿದ್ದಾರೆ.</p>.<p>ಶ್ರೀಲಂಕೆಗೆ ಕಛತೀವು ‘ಭೂದಾನ’ದ ವಿರುದ್ಧ ಜನಸಂಘದ ರಿಟ್</p>.<p>ಮುಂಬೈ, ಜೂನ್ 28– ಕಛತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಕೇಂದ್ರದ ವಿರುದ್ಧ ಜನಸಂಘವು ವಿವಾದ ಎಬ್ಬಿಸಿದೆ.</p>.<p>ಆಯಕಟ್ಟಿನಲ್ಲಿರುವ ಈ ದ್ವೀಪದ ಪರಮಾಧಿಕಾರ ಬಿಟ್ಟುಕೊಡುವುದರ ವಿರುದ್ಧ ಮದ್ರಾಸ್ ಶ್ರೇಷ್ಠ ನ್ಯಾಯಾಲಯದಲ್ಲಿ ರಿಟ್ ಹಾಕುವಂತೆ ಆ ರಾಜ್ಯದ ಘಟಕಕ್ಕೆ ಆದೇಶ ನೀಡಿರುವುದನ್ನು ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>