<p><strong>ನವದೆಹಲಿ</strong>, ರೈಲ್ವೆಯಲ್ಲಿ ಭಾರಿ ಭ್ರಷ್ಟಾಚಾರ ತುಂಬಿದೆ ಹಾಗೂ ಅದಕ್ಷತೆ ಹೆಚ್ಚಿದೆ ಎಂದು ಇಂದು ರಾಜ್ಯಸಭೆಯಲ್ಲಿ ಆಪಾದಿಸಲಾಯಿತು.</p>.<p>ಕ್ಲಲಿದ್ದಲು ಸಾಗಣೆ ಪ್ರಶ್ನೆಗೆ ಉಪಮಂತ್ರಿ ಮಹಮದ್ ಷಫಿ ಕುರೇಷಿ ಅವರು ನೀಡಿದ ಉತ್ತರ ಕೆಲವು ಮಂದಿ ಸದಸ್ಯರಿಗೆ ಒಪ್ಪಿಗೆಯಾಗಲಿಲ್ಲ.</p>.<p>ಕಲ್ಲಿದ್ದಲು ಕೊರತೆ ಕಾರಣ ಪ್ರಯಾಣಿಕರ ರೈಲನ್ನು ರದ್ದುಪಡಿಸಲಾಗಿದೆ ಎಂಬ ಸದಸ್ಯರ ಪ್ರಶ್ನಗೆ ಅವರು ವ್ಯಾಗನ್ಗಳ ಕೊರತೆಯೇ ಕಲ್ಲಿದ್ದಲು ಕೊರತೆಗೆ ಕಾರಣವೆಂಬುದನ್ನು ನಿರಾಕರಿಸಿದರು. </p>.<h2>ಕೆಳಹುದ್ದೆಗಳಿಗೆ ನೇಮಕಗಳಿಗಾಗಿ ಇಲಾಖಾ ಸಮಿತಿ</h2>.<p><strong>ಬೆಂಗಳೂರು,</strong> ಕೆಳಮಟ್ಟದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಏಪ್ರಿಲ್ 1ರಿಂದ ಇಲಾಖಾ ನೇಮಕಾತಿ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p>ಶ್ರೀಗಳಾದ ಟಿ. ವಿ. ವೆಂಕಟಸ್ವಾಮಿ ಹಾಗೂ ಪಿ. ವೆಂಕಟರಮಣ ಅವರುಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಶ್ರೀ ಅರಸು ಅವರು, 59 ಇಲಾಖಾ ನೇಮಕಾತಿ ಸಮಿತಿಗಳನ್ನು ರಚಿಸಲಾಗಿದೆ ಎಂದೂ, ಇನ್ನು 3–4 ಇಲಾಖೆಗಳಿಗೆ ಸಮಿತಿಗಳನ್ನು ರಚಿಸಬೇಕಾಗಿದೆ ಎಂದೂ ನುಡಿದರು.</p>.<p>ಆ ಸಮಿತಿಗಳಲ್ಲಿ ಹರಿಜನ ಹಾಗೂ ಗಿರಿಜನರಿಗೆ ಪ್ರಾತಿನಿಧ್ಯ ನೀಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>, ರೈಲ್ವೆಯಲ್ಲಿ ಭಾರಿ ಭ್ರಷ್ಟಾಚಾರ ತುಂಬಿದೆ ಹಾಗೂ ಅದಕ್ಷತೆ ಹೆಚ್ಚಿದೆ ಎಂದು ಇಂದು ರಾಜ್ಯಸಭೆಯಲ್ಲಿ ಆಪಾದಿಸಲಾಯಿತು.</p>.<p>ಕ್ಲಲಿದ್ದಲು ಸಾಗಣೆ ಪ್ರಶ್ನೆಗೆ ಉಪಮಂತ್ರಿ ಮಹಮದ್ ಷಫಿ ಕುರೇಷಿ ಅವರು ನೀಡಿದ ಉತ್ತರ ಕೆಲವು ಮಂದಿ ಸದಸ್ಯರಿಗೆ ಒಪ್ಪಿಗೆಯಾಗಲಿಲ್ಲ.</p>.<p>ಕಲ್ಲಿದ್ದಲು ಕೊರತೆ ಕಾರಣ ಪ್ರಯಾಣಿಕರ ರೈಲನ್ನು ರದ್ದುಪಡಿಸಲಾಗಿದೆ ಎಂಬ ಸದಸ್ಯರ ಪ್ರಶ್ನಗೆ ಅವರು ವ್ಯಾಗನ್ಗಳ ಕೊರತೆಯೇ ಕಲ್ಲಿದ್ದಲು ಕೊರತೆಗೆ ಕಾರಣವೆಂಬುದನ್ನು ನಿರಾಕರಿಸಿದರು. </p>.<h2>ಕೆಳಹುದ್ದೆಗಳಿಗೆ ನೇಮಕಗಳಿಗಾಗಿ ಇಲಾಖಾ ಸಮಿತಿ</h2>.<p><strong>ಬೆಂಗಳೂರು,</strong> ಕೆಳಮಟ್ಟದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಏಪ್ರಿಲ್ 1ರಿಂದ ಇಲಾಖಾ ನೇಮಕಾತಿ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p>ಶ್ರೀಗಳಾದ ಟಿ. ವಿ. ವೆಂಕಟಸ್ವಾಮಿ ಹಾಗೂ ಪಿ. ವೆಂಕಟರಮಣ ಅವರುಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಶ್ರೀ ಅರಸು ಅವರು, 59 ಇಲಾಖಾ ನೇಮಕಾತಿ ಸಮಿತಿಗಳನ್ನು ರಚಿಸಲಾಗಿದೆ ಎಂದೂ, ಇನ್ನು 3–4 ಇಲಾಖೆಗಳಿಗೆ ಸಮಿತಿಗಳನ್ನು ರಚಿಸಬೇಕಾಗಿದೆ ಎಂದೂ ನುಡಿದರು.</p>.<p>ಆ ಸಮಿತಿಗಳಲ್ಲಿ ಹರಿಜನ ಹಾಗೂ ಗಿರಿಜನರಿಗೆ ಪ್ರಾತಿನಿಧ್ಯ ನೀಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>