<p><strong>ದೆಹಲಿ ಅರಬ್ಲೀಗ್ ಕಟ್ಟಡ ಪ್ಯಾಲೆಸ್ಟೀನ್ ವಿದ್ಯಾರ್ಥಿಗಳ ವಶಕ್ಕೆ</strong></p><p>ನವದೆಹಲಿ, ಫೆ. 6– ಇಲ್ಲಿನ ಗಾಲ್ಫ್ಲಿಂಕ್ಸ್ ಪ್ರದೇಶದಲ್ಲಿರುವ ಅರಬ್ಲೀಗ್ ಕಚೇರಿಯನ್ನು ಐವತ್ತಕ್ಕೂ ಹೆಚ್ಚು ಪ್ಯಾಲೆಸ್ಟೀನ್ ವಿದ್ಯಾರ್ಥಿಗಳು ಇಂದು ಆಕ್ರಮಿಸಿಕೊಂಡರು.</p><p>ಅರಬ್– ಇಸ್ರೇಲಿ ಸೈನಿಕರ ವಾಪಸಾತಿಗೆ ಜಿನೀವಾದಲ್ಲಿ ಮೂಡಿದ ಒಪ್ಪಂದವನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಈ ಕ್ರಮ ಕೈಗೊಂಡಿದ್ದಾರೆ.</p><p>ಅರಬ್ಲೀಗ್ ರಾಜತಾಂತ್ರಿಕ ಆಯೋಗದ ಪ್ರಮುಖ ಪ್ರತಿನಿಧಿ ಇಬ್ರಾಹಿಂ ಅವರ ನಿವಾಸವು ಇದೇ ಕಟ್ಟಡದಲ್ಲಿದ್ದು, ಒಂದು ಗಂಟೆಯ ನಂತರ ಅವರು ಅದನ್ನು ಬಿಟ್ಟು ಹೊರಟರು.</p>.<p><strong>ಗುಜರಾತ್ ಹಿಂಸಾಕಾಂಡ ಅಂತ್ಯಕ್ಕೆ ಇಂದಿರಾ ಕರೆ</strong></p><p>ರುಡೌಲಿ, (ಉತ್ತರ ಪ್ರದೇಶ) ಫೆ. 6– ‘ಶಾಂತಿ ಸ್ಥಾಪನೆಯಾದಾಗ ಮಾತ್ರ ಜನರ ಕುಂದು<br>ಕೊರತೆಗಳನ್ನು ಸರಿಪಡಿಸಬಹುದಾದುದರಿಂದ ಗುಜರಾತಿನಲ್ಲಿ ಹಿಂಸಾಚಾರ ನಿಲ್ಲಿಸಬೇಕು’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಕರೆ ಕೊಟ್ಟರು.</p><p>ಬಹಿರಂಗ ಸಭೆಯಲ್ಲಿ ಮಾತನಾಡಿದ ಶ್ರೀಮತಿ ಗಾಂಧಿ, ಶಾಂತಿ ಸ್ಥಾಪನೆಯಾದಾಗ ಸರ್ಕಾರ ವಿವಿಧ ಜನಾಭಿಪ್ರಾಯಗಳನ್ನು ಕೇಳಿ ಅದಕ್ಕನುಗುಣವಾಗಿ ವರ್ತಿಸಬಹುದು. ಕಾನೂನುಬಾಹಿರ ಚಟುವಟಿಕೆ ಮತ್ತು ಹಿಂಸಾಚಾರ ಮುಂದುವರಿಯುತ್ತಿದ್ದರೆ ನಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೆಹಲಿ ಅರಬ್ಲೀಗ್ ಕಟ್ಟಡ ಪ್ಯಾಲೆಸ್ಟೀನ್ ವಿದ್ಯಾರ್ಥಿಗಳ ವಶಕ್ಕೆ</strong></p><p>ನವದೆಹಲಿ, ಫೆ. 6– ಇಲ್ಲಿನ ಗಾಲ್ಫ್ಲಿಂಕ್ಸ್ ಪ್ರದೇಶದಲ್ಲಿರುವ ಅರಬ್ಲೀಗ್ ಕಚೇರಿಯನ್ನು ಐವತ್ತಕ್ಕೂ ಹೆಚ್ಚು ಪ್ಯಾಲೆಸ್ಟೀನ್ ವಿದ್ಯಾರ್ಥಿಗಳು ಇಂದು ಆಕ್ರಮಿಸಿಕೊಂಡರು.</p><p>ಅರಬ್– ಇಸ್ರೇಲಿ ಸೈನಿಕರ ವಾಪಸಾತಿಗೆ ಜಿನೀವಾದಲ್ಲಿ ಮೂಡಿದ ಒಪ್ಪಂದವನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಈ ಕ್ರಮ ಕೈಗೊಂಡಿದ್ದಾರೆ.</p><p>ಅರಬ್ಲೀಗ್ ರಾಜತಾಂತ್ರಿಕ ಆಯೋಗದ ಪ್ರಮುಖ ಪ್ರತಿನಿಧಿ ಇಬ್ರಾಹಿಂ ಅವರ ನಿವಾಸವು ಇದೇ ಕಟ್ಟಡದಲ್ಲಿದ್ದು, ಒಂದು ಗಂಟೆಯ ನಂತರ ಅವರು ಅದನ್ನು ಬಿಟ್ಟು ಹೊರಟರು.</p>.<p><strong>ಗುಜರಾತ್ ಹಿಂಸಾಕಾಂಡ ಅಂತ್ಯಕ್ಕೆ ಇಂದಿರಾ ಕರೆ</strong></p><p>ರುಡೌಲಿ, (ಉತ್ತರ ಪ್ರದೇಶ) ಫೆ. 6– ‘ಶಾಂತಿ ಸ್ಥಾಪನೆಯಾದಾಗ ಮಾತ್ರ ಜನರ ಕುಂದು<br>ಕೊರತೆಗಳನ್ನು ಸರಿಪಡಿಸಬಹುದಾದುದರಿಂದ ಗುಜರಾತಿನಲ್ಲಿ ಹಿಂಸಾಚಾರ ನಿಲ್ಲಿಸಬೇಕು’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಕರೆ ಕೊಟ್ಟರು.</p><p>ಬಹಿರಂಗ ಸಭೆಯಲ್ಲಿ ಮಾತನಾಡಿದ ಶ್ರೀಮತಿ ಗಾಂಧಿ, ಶಾಂತಿ ಸ್ಥಾಪನೆಯಾದಾಗ ಸರ್ಕಾರ ವಿವಿಧ ಜನಾಭಿಪ್ರಾಯಗಳನ್ನು ಕೇಳಿ ಅದಕ್ಕನುಗುಣವಾಗಿ ವರ್ತಿಸಬಹುದು. ಕಾನೂನುಬಾಹಿರ ಚಟುವಟಿಕೆ ಮತ್ತು ಹಿಂಸಾಚಾರ ಮುಂದುವರಿಯುತ್ತಿದ್ದರೆ ನಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>