<p><strong>ಲೋಕಸಭೆಗೆ ಇಂದಿರಾ ಗಾಂಧಿ ಆಯ್ಕೆ ರದ್ದು: ಆರು ವರ್ಷ ಅನರ್ಹತೆ</strong></p>.<p>ಅಲಹಾಬಾದ್, ಜೂನ್ 12– ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದೆ. ತೀರ್ಪಿನ ಅನುಷ್ಠಾನಕ್ಕೆ ಇಪ್ಪತ್ತು ದಿನಗಳ ತಡೆಯಾಜ್ಞೆಯನ್ನೂ ನೀಡಲಾಗಿದೆ.</p>.<p>ಇಂದಿರಾ ಗಾಂಧಿ ಅವರ ಆಯ್ಕೆ ಪ್ರಶ್ನಿಸಿ ರಾಜನಾರಾಯಣ್ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ಮೇಲೆ ಇಂದು ನ್ಯಾಯಮೂರ್ತಿ ಸಿನ್ಹಾ ಅವರು ತೀರ್ಪು ನೀಡಿದರು.</p>.<p>ಚುನಾವಣೆಯಲ್ಲಿ ಭ್ರಷ್ಟ ಮಾರ್ಗ ಅನುಸರಿಸಲಾಗಿದೆ ಎಂಬ ಆಪಾದನೆಯನ್ನು ಎತ್ತಿ ಹಿಡಿದಿರುವ ನ್ಯಾಯಮೂರ್ತಿ, ಆರು ವರ್ಷಗಳ ಕಾಲ ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರೆಂದು ಘೋಷಿಸಿದ್ದಾರೆ.</p>.<p><strong>ಎಲ್ಲ ಕಡೆ ಜನತಾ ರಂಗದ ಮೇಲುಗೈ</strong></p>.<p>ಅಹಮದಾಬಾದ್, ಜೂನ್ 12– ಗುಜರಾತ್ ವಿಧಾನಸಭೆಯ ಫಲಿತಾಂಶಗಳು ಹೊರ ಬೀಳುತ್ತಿದ್ದಂತೆ ಜನತಾ ರಂಗ ಮೇಲುಗೈ ಹೊಂದಿರುವುದು ಸ್ಪಷ್ಟವಾಯಿತು.</p>.<p>ಪ್ರಕಟವಾದ ಒಟ್ಟು 42 ಸ್ಥಾನಗಳಲ್ಲಿ ಐದು ಪಕ್ಷಗಳನ್ನು ಒಳಗೊಂಡ ಜನತಾ ರಂಗವು ಒಟ್ಟು 32 ಸ್ಥಾನಗಳನ್ನು ಗಿಟ್ಟಿಸಿಕೊಂಡಿತು. ಕಾಂಗ್ರೆಸ್ಸಿಗೆ ಕೇವಲ 9 ಸ್ಥಾನಗಳು ಲಭಿಸಿವೆ. ಪಕ್ಷೇತರರೊಬ್ಬರು ಜಯಗಳಿಸಿದ್ದಾರೆ.</p>.<p>ಎಣಿಕೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲೂ ಜನತಾ ರಂಗವು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿಗಿಂತ ಮುಂದಿದೆ. ಆಯ್ಕೆಗೊಂಡ ಜನತಾ ರಂಗ ಅಭ್ಯರ್ಥಿಗಳಲ್ಲೂ ಸಂಸ್ಥಾ ಕಾಂಗ್ರೆಸ್ಸಿನದೇ ಮೇಲುಗೈ. ಆನಂತರದ ಸ್ಥಾನ ಜನಸಂಘಕ್ಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೋಕಸಭೆಗೆ ಇಂದಿರಾ ಗಾಂಧಿ ಆಯ್ಕೆ ರದ್ದು: ಆರು ವರ್ಷ ಅನರ್ಹತೆ</strong></p>.<p>ಅಲಹಾಬಾದ್, ಜೂನ್ 12– ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದೆ. ತೀರ್ಪಿನ ಅನುಷ್ಠಾನಕ್ಕೆ ಇಪ್ಪತ್ತು ದಿನಗಳ ತಡೆಯಾಜ್ಞೆಯನ್ನೂ ನೀಡಲಾಗಿದೆ.</p>.<p>ಇಂದಿರಾ ಗಾಂಧಿ ಅವರ ಆಯ್ಕೆ ಪ್ರಶ್ನಿಸಿ ರಾಜನಾರಾಯಣ್ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ಮೇಲೆ ಇಂದು ನ್ಯಾಯಮೂರ್ತಿ ಸಿನ್ಹಾ ಅವರು ತೀರ್ಪು ನೀಡಿದರು.</p>.<p>ಚುನಾವಣೆಯಲ್ಲಿ ಭ್ರಷ್ಟ ಮಾರ್ಗ ಅನುಸರಿಸಲಾಗಿದೆ ಎಂಬ ಆಪಾದನೆಯನ್ನು ಎತ್ತಿ ಹಿಡಿದಿರುವ ನ್ಯಾಯಮೂರ್ತಿ, ಆರು ವರ್ಷಗಳ ಕಾಲ ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರೆಂದು ಘೋಷಿಸಿದ್ದಾರೆ.</p>.<p><strong>ಎಲ್ಲ ಕಡೆ ಜನತಾ ರಂಗದ ಮೇಲುಗೈ</strong></p>.<p>ಅಹಮದಾಬಾದ್, ಜೂನ್ 12– ಗುಜರಾತ್ ವಿಧಾನಸಭೆಯ ಫಲಿತಾಂಶಗಳು ಹೊರ ಬೀಳುತ್ತಿದ್ದಂತೆ ಜನತಾ ರಂಗ ಮೇಲುಗೈ ಹೊಂದಿರುವುದು ಸ್ಪಷ್ಟವಾಯಿತು.</p>.<p>ಪ್ರಕಟವಾದ ಒಟ್ಟು 42 ಸ್ಥಾನಗಳಲ್ಲಿ ಐದು ಪಕ್ಷಗಳನ್ನು ಒಳಗೊಂಡ ಜನತಾ ರಂಗವು ಒಟ್ಟು 32 ಸ್ಥಾನಗಳನ್ನು ಗಿಟ್ಟಿಸಿಕೊಂಡಿತು. ಕಾಂಗ್ರೆಸ್ಸಿಗೆ ಕೇವಲ 9 ಸ್ಥಾನಗಳು ಲಭಿಸಿವೆ. ಪಕ್ಷೇತರರೊಬ್ಬರು ಜಯಗಳಿಸಿದ್ದಾರೆ.</p>.<p>ಎಣಿಕೆ ನಡೆಯುತ್ತಿರುವ ಎಲ್ಲ ಕ್ಷೇತ್ರಗಳಲ್ಲೂ ಜನತಾ ರಂಗವು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿಗಿಂತ ಮುಂದಿದೆ. ಆಯ್ಕೆಗೊಂಡ ಜನತಾ ರಂಗ ಅಭ್ಯರ್ಥಿಗಳಲ್ಲೂ ಸಂಸ್ಥಾ ಕಾಂಗ್ರೆಸ್ಸಿನದೇ ಮೇಲುಗೈ. ಆನಂತರದ ಸ್ಥಾನ ಜನಸಂಘಕ್ಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>