<p>ನವದೆಹಲಿ, ಮೇ 2– ಅಖಿಲ ಭಾರತ ರೈಲ್ವೆ ನೌಕರರ ಫೆಡರೇಷನ್ನಿನ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರನ್ನು ಲಖನೌ ರೈಲು ನಿಲ್ದಾಣದಲ್ಲಿ ಇಂದು ಬೆಳಗಿನ ಜಾವದ ವೇಳೆಯಲ್ಲಿ ಬಂಧಿಸಲಾಯಿತು.</p><p>ಆಂತರಿಕ ಭದ್ರತಾ ಶಾಸನದ ಮೇರೆಗೆ ಬಂಧಿಸಲಾಗಿರುವ ಫರ್ನಾಂಡಿಸ್ ಅವರನ್ನು ದೆಹಲಿಗೆ ಕರೆತರಲಾಗಿದೆ. ದೆಹಲಿ ಆಡಳಿತವು ನೀಡಿದ ವಾರಂಟ್ ಮೇರೆಗೆ ದೆಹಲಿ ಪೊಲೀಸರು ಅವರನ್ನು ಬಂಧಿಸಿದರು ಎಂದು ಉತ್ತರ ಪ್ರದೇಶ ಸರ್ಕಾರದ ಗೃಹಖಾತೆ ಕಾರ್ಯದರ್ಶಿ ಆರ್.ಕೆ. ಕೌಲ್ ಅವರು ಲಖನೌನಲ್ಲಿ ತಿಳಿಸಿದರು.</p><p>ಮೇ ದಿನಾಚರಣೆ ಸಂಬಂಧದಲ್ಲಿ ನಿನ್ನೆ ರಾತ್ರಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಬಳಿಕ ಲಖನೌ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗಿದ್ದ ಫರ್ನಾಂಡಿಸ್ ಅವರನ್ನು ಬಂಧಿಸಲಾಯಿತು ಎಂದು ಎ.ಐ.ಆರ್.ಎಫ್.ನ ಪ್ರಧಾನ ಕಾರ್ಯದರ್ಶಿ ಪ್ರಿಯ ಗುಪ್ತಾ ಹೇಳಿದರು.</p><p><strong>ಭದ್ರಾವತಿ ಕಾರ್ಖಾನೆಯಲ್ಲಿ ಯಂತ್ರೋಪಕರಣ ನಾಪತ್ತೆ; ವಿಧಾನಸಭೆಯಲ್ಲಿ ಆರೋಪ</strong></p><p>ಬೆಂಗಳೂರು, ಮೇ 2– ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಾಗಿ ಖರೀದಿಸಿದ್ದ 12 ಲಕ್ಷ ರೂ. ಬೆಲೆಯ ಯಂತ್ರದಲ್ಲಿ ಒಂದೆರಡು ಬಿಡಿಭಾಗ ಬಿಟ್ಟರೆ ಯಂತ್ರೋಪಕರಣಗಳೆಲ್ಲ ನಾಪತ್ತೆಯಾಗಿವೆ ಎಂದು ವಿಧಾನ ಸಭೆಯಲ್ಲಿ ಇಂದು ಪಕ್ಷೇತರ ಸದಸ್ಯ ಶ್ರೀ ಎಸ್. ಬಂಗಾರಪ್ಪ ಅವರು ಆಪಾದಿಸಿದರು.</p><p>ಭದ್ರಾವತಿ ಕಾರ್ಖಾನೆ ನಷ್ಟ ಅನುಭವಿಸಲು ಕಾರ್ಖಾನೆಯ ಉನ್ನತ ಅಧಿಕಾರಿಗಳು ನಡೆಸಿದ ಅವ್ಯವಹಾರವೇ ಕಾರಣ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ, ಮೇ 2– ಅಖಿಲ ಭಾರತ ರೈಲ್ವೆ ನೌಕರರ ಫೆಡರೇಷನ್ನಿನ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರನ್ನು ಲಖನೌ ರೈಲು ನಿಲ್ದಾಣದಲ್ಲಿ ಇಂದು ಬೆಳಗಿನ ಜಾವದ ವೇಳೆಯಲ್ಲಿ ಬಂಧಿಸಲಾಯಿತು.</p><p>ಆಂತರಿಕ ಭದ್ರತಾ ಶಾಸನದ ಮೇರೆಗೆ ಬಂಧಿಸಲಾಗಿರುವ ಫರ್ನಾಂಡಿಸ್ ಅವರನ್ನು ದೆಹಲಿಗೆ ಕರೆತರಲಾಗಿದೆ. ದೆಹಲಿ ಆಡಳಿತವು ನೀಡಿದ ವಾರಂಟ್ ಮೇರೆಗೆ ದೆಹಲಿ ಪೊಲೀಸರು ಅವರನ್ನು ಬಂಧಿಸಿದರು ಎಂದು ಉತ್ತರ ಪ್ರದೇಶ ಸರ್ಕಾರದ ಗೃಹಖಾತೆ ಕಾರ್ಯದರ್ಶಿ ಆರ್.ಕೆ. ಕೌಲ್ ಅವರು ಲಖನೌನಲ್ಲಿ ತಿಳಿಸಿದರು.</p><p>ಮೇ ದಿನಾಚರಣೆ ಸಂಬಂಧದಲ್ಲಿ ನಿನ್ನೆ ರಾತ್ರಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಬಳಿಕ ಲಖನೌ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗಿದ್ದ ಫರ್ನಾಂಡಿಸ್ ಅವರನ್ನು ಬಂಧಿಸಲಾಯಿತು ಎಂದು ಎ.ಐ.ಆರ್.ಎಫ್.ನ ಪ್ರಧಾನ ಕಾರ್ಯದರ್ಶಿ ಪ್ರಿಯ ಗುಪ್ತಾ ಹೇಳಿದರು.</p><p><strong>ಭದ್ರಾವತಿ ಕಾರ್ಖಾನೆಯಲ್ಲಿ ಯಂತ್ರೋಪಕರಣ ನಾಪತ್ತೆ; ವಿಧಾನಸಭೆಯಲ್ಲಿ ಆರೋಪ</strong></p><p>ಬೆಂಗಳೂರು, ಮೇ 2– ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಾಗಿ ಖರೀದಿಸಿದ್ದ 12 ಲಕ್ಷ ರೂ. ಬೆಲೆಯ ಯಂತ್ರದಲ್ಲಿ ಒಂದೆರಡು ಬಿಡಿಭಾಗ ಬಿಟ್ಟರೆ ಯಂತ್ರೋಪಕರಣಗಳೆಲ್ಲ ನಾಪತ್ತೆಯಾಗಿವೆ ಎಂದು ವಿಧಾನ ಸಭೆಯಲ್ಲಿ ಇಂದು ಪಕ್ಷೇತರ ಸದಸ್ಯ ಶ್ರೀ ಎಸ್. ಬಂಗಾರಪ್ಪ ಅವರು ಆಪಾದಿಸಿದರು.</p><p>ಭದ್ರಾವತಿ ಕಾರ್ಖಾನೆ ನಷ್ಟ ಅನುಭವಿಸಲು ಕಾರ್ಖಾನೆಯ ಉನ್ನತ ಅಧಿಕಾರಿಗಳು ನಡೆಸಿದ ಅವ್ಯವಹಾರವೇ ಕಾರಣ. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>