<p><strong>ದಂಡಿನ ದಮನದ ದವಡೆಯಲ್ಲಿ ‘ಸ್ವತಂತ್ರ ಬಾಂಗ್ಲಾದೇಶ’ದ ಉದಯ</strong></p>.<p><strong>ನವದೆಹಲಿ, ಮಾರ್ಚ್ 26–</strong> ಪೂರ್ವ ಪಾಕಿಸ್ತಾನದಲ್ಲಿ ಅಂತರ್ಯುದ್ಧ ಪ್ರಾರಂಭವಾಗಿದ್ದು, ಢಾಕಾ ಮತ್ತು ಪ್ರಾಂತ್ಯದ ಇತರ ಕಡೆಗಳಲ್ಲಿ ಪಾಕಿಸ್ತಾನದ ಸೈನ್ಯ ಹಾಗೂ ಪೂರ್ವ ಪಾಕಿಸ್ತಾನ್ ರೈಫಲ್ ಪಡೆ ಮತ್ತು ಪೊಲೀಸರ ನಡುವೆ ನಡೆಯುತ್ತಿರುವ ಭೀಕರ ಹೋರಾಟದಲ್ಲಿ ಭಾರಿ ಸಾವು–ನೋವು ಉಂಟಾಗಿದೆಯೆಂದು ಇತ್ತೀಚೆಗೆ ಬಂದ ಸುದ್ದಿ ತಿಳಿಸಿದೆ.</p>.<p>‘ಬಂಗಾಳ ದೇಶ ಉದಯವಾಯಿತು’ ಎಂದು ಅವಾಮಿ ಲೀಗ್ ನಾಯಕ ಷೇಖ್ ಮುಜೀಬುರ್ ರೆಹಮಾನ್ ಅವರು ‘ಸ್ವಾಧಿನ್ ಬಾಂಗ್ಲಾ’ (ಸ್ವತಂತ್ರ ಬಂಗಾಳ) ಬೇತರ್ ಕೇಂದ್ರದಿಂದ ಮಾತನಾಡುತ್ತಾ ಘೋಷಿಸಿದರು.</p>.<p><strong>ರಾಜ್ಯಕ್ಕೆ ಸ್ವಲ್ಪ ಸಮಯ ರಾಷ್ಟ್ರಪತಿ ಆಡಳಿತ</strong></p>.<p><strong>ಬೆಂಗಳೂರು, ಮಾರ್ಚ್ 26–</strong> ಮೈಸೂರು ರಾಜ್ಯ ತನ್ನ ಇತಿಹಾಸದಲ್ಲೇ ಪ್ರಥಮವಾಗಿ ಕೆಲ ಕಾಲದವರೆಗೆ ರಾಷ್ಟ್ರಪತಿ ಆಡಳಿತಕ್ಕೆ ಒಳಪಡಲಿದೆ.</p>.<p>ರಾಜ್ಯದ ವಿಧಾನಸಭೆಯನ್ನು ಕೆಲಕಾಲ ಸ್ಥಗಿತಗೊಳಿಸಿ (ಸಸ್ಪೆಂಡ್) ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಮಧ್ಯಾಹ್ನ ರಾಷ್ಟ್ರಪತಿಗೆ ತಮ್ಮ ಶಿಫಾರಸನ್ನು ಕಳುಹಿಸಿಕೊಟ್ಟರು.</p>.<p>ಶ್ರೀ ವೀರೇಂದ್ರ ಪಾಟೀಲ್ ಅವರ ಮಂತ್ರಿಮಂಡಲ ರಾಜೀನಾಮೆ ನೀಡಿದ ನಂತರ ಇಂದಿನವರೆಗೆ ಆಡಳಿತ ಕಾಂಗ್ರೆಸ್ಸಿಗಾಗಲಿ ಮತ್ತಿತರ ಯಾವ ಪಕ್ಷಕ್ಕೇ ಆಗಲಿ ಹೊಸ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಂಡಿನ ದಮನದ ದವಡೆಯಲ್ಲಿ ‘ಸ್ವತಂತ್ರ ಬಾಂಗ್ಲಾದೇಶ’ದ ಉದಯ</strong></p>.<p><strong>ನವದೆಹಲಿ, ಮಾರ್ಚ್ 26–</strong> ಪೂರ್ವ ಪಾಕಿಸ್ತಾನದಲ್ಲಿ ಅಂತರ್ಯುದ್ಧ ಪ್ರಾರಂಭವಾಗಿದ್ದು, ಢಾಕಾ ಮತ್ತು ಪ್ರಾಂತ್ಯದ ಇತರ ಕಡೆಗಳಲ್ಲಿ ಪಾಕಿಸ್ತಾನದ ಸೈನ್ಯ ಹಾಗೂ ಪೂರ್ವ ಪಾಕಿಸ್ತಾನ್ ರೈಫಲ್ ಪಡೆ ಮತ್ತು ಪೊಲೀಸರ ನಡುವೆ ನಡೆಯುತ್ತಿರುವ ಭೀಕರ ಹೋರಾಟದಲ್ಲಿ ಭಾರಿ ಸಾವು–ನೋವು ಉಂಟಾಗಿದೆಯೆಂದು ಇತ್ತೀಚೆಗೆ ಬಂದ ಸುದ್ದಿ ತಿಳಿಸಿದೆ.</p>.<p>‘ಬಂಗಾಳ ದೇಶ ಉದಯವಾಯಿತು’ ಎಂದು ಅವಾಮಿ ಲೀಗ್ ನಾಯಕ ಷೇಖ್ ಮುಜೀಬುರ್ ರೆಹಮಾನ್ ಅವರು ‘ಸ್ವಾಧಿನ್ ಬಾಂಗ್ಲಾ’ (ಸ್ವತಂತ್ರ ಬಂಗಾಳ) ಬೇತರ್ ಕೇಂದ್ರದಿಂದ ಮಾತನಾಡುತ್ತಾ ಘೋಷಿಸಿದರು.</p>.<p><strong>ರಾಜ್ಯಕ್ಕೆ ಸ್ವಲ್ಪ ಸಮಯ ರಾಷ್ಟ್ರಪತಿ ಆಡಳಿತ</strong></p>.<p><strong>ಬೆಂಗಳೂರು, ಮಾರ್ಚ್ 26–</strong> ಮೈಸೂರು ರಾಜ್ಯ ತನ್ನ ಇತಿಹಾಸದಲ್ಲೇ ಪ್ರಥಮವಾಗಿ ಕೆಲ ಕಾಲದವರೆಗೆ ರಾಷ್ಟ್ರಪತಿ ಆಡಳಿತಕ್ಕೆ ಒಳಪಡಲಿದೆ.</p>.<p>ರಾಜ್ಯದ ವಿಧಾನಸಭೆಯನ್ನು ಕೆಲಕಾಲ ಸ್ಥಗಿತಗೊಳಿಸಿ (ಸಸ್ಪೆಂಡ್) ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಮಧ್ಯಾಹ್ನ ರಾಷ್ಟ್ರಪತಿಗೆ ತಮ್ಮ ಶಿಫಾರಸನ್ನು ಕಳುಹಿಸಿಕೊಟ್ಟರು.</p>.<p>ಶ್ರೀ ವೀರೇಂದ್ರ ಪಾಟೀಲ್ ಅವರ ಮಂತ್ರಿಮಂಡಲ ರಾಜೀನಾಮೆ ನೀಡಿದ ನಂತರ ಇಂದಿನವರೆಗೆ ಆಡಳಿತ ಕಾಂಗ್ರೆಸ್ಸಿಗಾಗಲಿ ಮತ್ತಿತರ ಯಾವ ಪಕ್ಷಕ್ಕೇ ಆಗಲಿ ಹೊಸ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>