<p><strong>ಗಡಿ ವಿವಾದ ಇತ್ಯರ್ಥ ಸೂಕ್ಷ್ಮ ಘಟ್ಟದಲ್ಲಿ</strong></p>.<p>ಮುಂಬೈ, ಏ. 18– ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದವು ‘ಇತ್ಯರ್ಥವಾಗುವುದು ಸೂಕ್ಷ್ಮ ಘಟ್ಟದಲ್ಲಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಎಸ್.ಬಿ. ಚವಾಣ್ ಇಲ್ಲಿ ಇಂದು ತಿಳಿಸಿದರು.</p>.<p>ಈ ವಿಷಯವನ್ನು ಅವರು ಬೆಳಗಾವಿಯಿಂದ ಬಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ 150 ಸ್ವಯಂಸೇವಕರಿಗೆ ತಿಳಿಸುತ್ತಾ ಪರಿಹಾರ ಹಿಂದಕ್ಕೆ ಸರಿಯುವ ವಾತಾವರಣವನ್ನು ಸೃಷ್ಟಿಸಬಾರದೆಂದು ಜನತೆಗೆ ಮನವಿ ಮಾಡಿಕೊಂಡರು.</p>.<p><strong>ದೇವಸ್ಥಾನ ಸಮಿತಿಗಳಲ್ಲಿ ಹರಿಜನ– ಗಿರಿಜನ ಪ್ರತಿನಿಧಿ</strong></p>.<p>ಬೆಂಗಳೂರು, ಏ. 18– ಪ್ರತಿಯೊಂದು ದೇವಸ್ಥಾನ ಸಮಿತಿಗೆ ಹರಿಜನ ಇಲ್ಲವೆ ಗಿರಿಜನರ ಪ್ರತಿನಿಧಿ ನೇಮಕ.</p>.<p>–ಇದು ಸರ್ಕಾರದ ದೃಢನೀತಿ ಎಂದು ಕಂದಾಯ ಸಚಿವ ಎನ್.ಹುಚ್ಚಮಾಸ್ತಿ ಗೌಡರು ಇಂದು ವಿಧಾನಸಭೆಗೆ ತಿಳಿಸಿದರು.</p>.<p>ಮುಂಬೈ ಕರ್ನಾಟಕ, ಹಳೆಯ ಮದ್ರಾಸ್ ಹಾಗೂ ಮೈಸೂರು ಪ್ರದೇಶಗಳಲ್ಲಿ ಇರುವ ಶಾಸನಗಳು ಬೇರೆ ಬೇರೆ ಆಗಿವೆ. ಎಂದೂ ಅದರೂ ದೇವಸ್ಥಾನ ಸಮಿತಿಗೆ ಹರಿಜನ–ಗಿರಿಜನರ ಪ್ರತಿನಿಧಿ ನೇಮಿಸಲು ಸರ್ಕಾರದ ದೃಢ ನಿರ್ಧಾರ ಆಗಿದೆ ಎಂದು ಸಚಿವರು ಎಂ.ಎಚ್.ಜಯಪ್ರಕಾಶ್ ನಾರಾಯಣ ಅವರಿಗೆ ತಿಳಿಸಿದರು.</p>.<p>ಬೆಂಗಳೂರು ಜಿಲ್ಲೆಯ 11 ದೇವಸ್ಥಾನ ಬಿಟ್ಟು ಬಾಕಿ ಎಲ್ಲ ಮುಜರಾಯಿ ದೇವಸ್ಥಾನ ಧರ್ಮದರ್ಶಿಗಳ ಸಮಿತಿಗೆ ಹರಿಜನ– ಗಿರಿಜನರ ಪ್ರತಿನಿಧಿ ನೇಮಿಸಲಾಗಿದೆ ಎಂದು ಸಚಿವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಡಿ ವಿವಾದ ಇತ್ಯರ್ಥ ಸೂಕ್ಷ್ಮ ಘಟ್ಟದಲ್ಲಿ</strong></p>.<p>ಮುಂಬೈ, ಏ. 18– ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದವು ‘ಇತ್ಯರ್ಥವಾಗುವುದು ಸೂಕ್ಷ್ಮ ಘಟ್ಟದಲ್ಲಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಎಸ್.ಬಿ. ಚವಾಣ್ ಇಲ್ಲಿ ಇಂದು ತಿಳಿಸಿದರು.</p>.<p>ಈ ವಿಷಯವನ್ನು ಅವರು ಬೆಳಗಾವಿಯಿಂದ ಬಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ 150 ಸ್ವಯಂಸೇವಕರಿಗೆ ತಿಳಿಸುತ್ತಾ ಪರಿಹಾರ ಹಿಂದಕ್ಕೆ ಸರಿಯುವ ವಾತಾವರಣವನ್ನು ಸೃಷ್ಟಿಸಬಾರದೆಂದು ಜನತೆಗೆ ಮನವಿ ಮಾಡಿಕೊಂಡರು.</p>.<p><strong>ದೇವಸ್ಥಾನ ಸಮಿತಿಗಳಲ್ಲಿ ಹರಿಜನ– ಗಿರಿಜನ ಪ್ರತಿನಿಧಿ</strong></p>.<p>ಬೆಂಗಳೂರು, ಏ. 18– ಪ್ರತಿಯೊಂದು ದೇವಸ್ಥಾನ ಸಮಿತಿಗೆ ಹರಿಜನ ಇಲ್ಲವೆ ಗಿರಿಜನರ ಪ್ರತಿನಿಧಿ ನೇಮಕ.</p>.<p>–ಇದು ಸರ್ಕಾರದ ದೃಢನೀತಿ ಎಂದು ಕಂದಾಯ ಸಚಿವ ಎನ್.ಹುಚ್ಚಮಾಸ್ತಿ ಗೌಡರು ಇಂದು ವಿಧಾನಸಭೆಗೆ ತಿಳಿಸಿದರು.</p>.<p>ಮುಂಬೈ ಕರ್ನಾಟಕ, ಹಳೆಯ ಮದ್ರಾಸ್ ಹಾಗೂ ಮೈಸೂರು ಪ್ರದೇಶಗಳಲ್ಲಿ ಇರುವ ಶಾಸನಗಳು ಬೇರೆ ಬೇರೆ ಆಗಿವೆ. ಎಂದೂ ಅದರೂ ದೇವಸ್ಥಾನ ಸಮಿತಿಗೆ ಹರಿಜನ–ಗಿರಿಜನರ ಪ್ರತಿನಿಧಿ ನೇಮಿಸಲು ಸರ್ಕಾರದ ದೃಢ ನಿರ್ಧಾರ ಆಗಿದೆ ಎಂದು ಸಚಿವರು ಎಂ.ಎಚ್.ಜಯಪ್ರಕಾಶ್ ನಾರಾಯಣ ಅವರಿಗೆ ತಿಳಿಸಿದರು.</p>.<p>ಬೆಂಗಳೂರು ಜಿಲ್ಲೆಯ 11 ದೇವಸ್ಥಾನ ಬಿಟ್ಟು ಬಾಕಿ ಎಲ್ಲ ಮುಜರಾಯಿ ದೇವಸ್ಥಾನ ಧರ್ಮದರ್ಶಿಗಳ ಸಮಿತಿಗೆ ಹರಿಜನ– ಗಿರಿಜನರ ಪ್ರತಿನಿಧಿ ನೇಮಿಸಲಾಗಿದೆ ಎಂದು ಸಚಿವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>