<p><strong>ಆಳವಾದ ಶೋಧನೆಗೆ ವಿಶೇಷ ಅಧಿಕಾರಿ ನೇಮಕ ಸಂಭವ</strong></p>.<p>ಬೆಂಗಳೂರು, ಆ. 11– ಭದ್ರಾವತಿ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಕೆಲವು ವ್ಯವಹಾರಗಳ ಬಗ್ಗೆ ‘ಆಳವಾದ ಶೋಧನೆ’ ಅಗತ್ಯವೆಂದು ಶ್ರೀ ಆರ್.ಸಿ.ದತ್ ಅವರು ಹೇಳಿರುವ ವಿಷಯಗಳನ್ನು ಪರಿಶೀಲಿಸಲು ವಿಶೇಷ ಅಧಿಕಾರಿಯೊಬ್ಬರನ್ನು ಸರ್ಕಾರ ನೇಮಿಸುವ ಸಂಭವವಿದೆ.</p>.<p>ಕೈಗಾರಿಕಾ ಸಚಿವ ಶ್ರೀ ಎಸ್.ಎಂ.ಕೃಷ್ಣ ಅವರು ಇಂದು ಈ ಸೂಚನೆಯನ್ನು ವರದಿಗಾರರಿಗೆ ನೀಡಿದರು.</p>.<p>‘ದತ್ ಸಮಿತಿಯ ವರದಿಯನ್ನು ಮಂತ್ರಿಮಂಡಲದ ಮುಂದೆ ಮಂಡಿಸುತ್ತೇನೆ. ಅವರ ಶಿಫಾರುಗಳ ಬಗ್ಗೆ ಮಂತ್ರಿಮಂಡಲ ತೀರ್ಮಾನ ಕೈಗೊಳ್ಳುವುದು’ ಎಂದು ದತ್ ವರದಿಯನ್ನು ವರದಿಗಾರರಿಗೆ ಬಿಡುಗಡೆ ಮಾಡಿದಾಗ ಸಚಿವರು ಹೇಳಿದರು.</p>.<p><strong>ನ್ಯಾಯಾಂಗ ಕಾರ್ಯಾಂಗದ ಕೈಗೊಂಬೆ ಆಗುವ ಭಯ</strong></p>.<p>ನವದೆಹಲಿ, ಆ. 11– ನ್ಯಾಯಾಧೀಶರನ್ನು ನೇಮಿಸುವ ಬಗೆಗೆ ಸರ್ಕಾರ ಅನುಸರಿಸುತ್ತಿರುವ ನೀತಿಯನ್ನು ನೋಡಿದರೆ ‘ನ್ಯಾಯಾಂಗವನ್ನು ಕಾರ್ಯಾಂಗದ ಕೈಗೊಂಬೆಯನ್ನಾಗಿ ಮಾಡುವ’ ಮತ್ತು ‘ಪ್ರಜಾಸತ್ತಾತ್ಮಕ ವ್ಯವಸ್ಥೆ ಪ್ರತಿಪಾದಿಸುವುದನ್ನೆಲ್ಲಾ ತಲೆಕೆಳಗು ಮಾಡುವ’ ಭಯ ತಲೆದೋರಿದೆ.</p>.<p>ಅಖಿಲ ಭಾರತ ವಕೀಲರ ಸಮ್ಮೇಳನದಲ್ಲಿ ಮಾತನಾಡಿದ ಹಿರಿಯ ವಕೀಲರು ಇಂದು ಈ ಭಯ ವ್ಯಕ್ತಪಡಿಸಿದರು.</p>.<p>ಸರ್ಕಾರ ಹೊಂದಿರುವ ಧೋರಣೆಯನ್ನು ತಳೆದಿರುವ ವ್ಯಕ್ತಿಗಳನ್ನೇ ನ್ಯಾಯಾಧೀಶರ ಹಿರಿಯ ಸ್ಥಾನಗಳಿಗೆ ಆಯ್ಕೆ ಮಾಡುವ ಸರ್ಕಾರದ ನೀತಿಯನ್ನು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಾಜಿ ಅಟಾರ್ನಿ ಜನರಲ್ ಎಂ.ಸಿ.ಸಟೆಲ್ವಾಡ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳವಾದ ಶೋಧನೆಗೆ ವಿಶೇಷ ಅಧಿಕಾರಿ ನೇಮಕ ಸಂಭವ</strong></p>.<p>ಬೆಂಗಳೂರು, ಆ. 11– ಭದ್ರಾವತಿ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಕೆಲವು ವ್ಯವಹಾರಗಳ ಬಗ್ಗೆ ‘ಆಳವಾದ ಶೋಧನೆ’ ಅಗತ್ಯವೆಂದು ಶ್ರೀ ಆರ್.ಸಿ.ದತ್ ಅವರು ಹೇಳಿರುವ ವಿಷಯಗಳನ್ನು ಪರಿಶೀಲಿಸಲು ವಿಶೇಷ ಅಧಿಕಾರಿಯೊಬ್ಬರನ್ನು ಸರ್ಕಾರ ನೇಮಿಸುವ ಸಂಭವವಿದೆ.</p>.<p>ಕೈಗಾರಿಕಾ ಸಚಿವ ಶ್ರೀ ಎಸ್.ಎಂ.ಕೃಷ್ಣ ಅವರು ಇಂದು ಈ ಸೂಚನೆಯನ್ನು ವರದಿಗಾರರಿಗೆ ನೀಡಿದರು.</p>.<p>‘ದತ್ ಸಮಿತಿಯ ವರದಿಯನ್ನು ಮಂತ್ರಿಮಂಡಲದ ಮುಂದೆ ಮಂಡಿಸುತ್ತೇನೆ. ಅವರ ಶಿಫಾರುಗಳ ಬಗ್ಗೆ ಮಂತ್ರಿಮಂಡಲ ತೀರ್ಮಾನ ಕೈಗೊಳ್ಳುವುದು’ ಎಂದು ದತ್ ವರದಿಯನ್ನು ವರದಿಗಾರರಿಗೆ ಬಿಡುಗಡೆ ಮಾಡಿದಾಗ ಸಚಿವರು ಹೇಳಿದರು.</p>.<p><strong>ನ್ಯಾಯಾಂಗ ಕಾರ್ಯಾಂಗದ ಕೈಗೊಂಬೆ ಆಗುವ ಭಯ</strong></p>.<p>ನವದೆಹಲಿ, ಆ. 11– ನ್ಯಾಯಾಧೀಶರನ್ನು ನೇಮಿಸುವ ಬಗೆಗೆ ಸರ್ಕಾರ ಅನುಸರಿಸುತ್ತಿರುವ ನೀತಿಯನ್ನು ನೋಡಿದರೆ ‘ನ್ಯಾಯಾಂಗವನ್ನು ಕಾರ್ಯಾಂಗದ ಕೈಗೊಂಬೆಯನ್ನಾಗಿ ಮಾಡುವ’ ಮತ್ತು ‘ಪ್ರಜಾಸತ್ತಾತ್ಮಕ ವ್ಯವಸ್ಥೆ ಪ್ರತಿಪಾದಿಸುವುದನ್ನೆಲ್ಲಾ ತಲೆಕೆಳಗು ಮಾಡುವ’ ಭಯ ತಲೆದೋರಿದೆ.</p>.<p>ಅಖಿಲ ಭಾರತ ವಕೀಲರ ಸಮ್ಮೇಳನದಲ್ಲಿ ಮಾತನಾಡಿದ ಹಿರಿಯ ವಕೀಲರು ಇಂದು ಈ ಭಯ ವ್ಯಕ್ತಪಡಿಸಿದರು.</p>.<p>ಸರ್ಕಾರ ಹೊಂದಿರುವ ಧೋರಣೆಯನ್ನು ತಳೆದಿರುವ ವ್ಯಕ್ತಿಗಳನ್ನೇ ನ್ಯಾಯಾಧೀಶರ ಹಿರಿಯ ಸ್ಥಾನಗಳಿಗೆ ಆಯ್ಕೆ ಮಾಡುವ ಸರ್ಕಾರದ ನೀತಿಯನ್ನು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಾಜಿ ಅಟಾರ್ನಿ ಜನರಲ್ ಎಂ.ಸಿ.ಸಟೆಲ್ವಾಡ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>