<p><strong>ಜನಸಂಘದಿಂದ ಬಲರಾಜ ಮಧೋಕ್ ಉಚ್ಚಾಟನೆ<br />ನವದೆಹಲಿ, ಮಾರ್ಚ್ 13–</strong> ಜನಸಂಘದ ಮಾಜಿ ಅಧ್ಯಕ್ಷ ಬಲರಾಜ ಮಧೋಕ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮೂರು ವರ್ಷಗಳ ಕಾಲ ತೆಗೆದು ಹಾಕಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್.ಎನ್.ಭಂಡಾರಿ ಅವರು ಇಂದು ಇಲ್ಲಿ ಪ್ರಕಟಿಸಿದರು.</p>.<p>‘ಪಕ್ಷ ವಿರುದ್ಧದ ಚಟುವಟಿಕೆಗಳು ಮತ್ತು ಹೇಳಿಕೆಗಳಲ್ಲಿ’ ಮಧೋಕ್ ತೊಡಗಿದ್ದುದೇ ಅವರ ಉಚ್ಚಾಟನೆಗೆ ಕಾರಣವೆಂದು ಭಂಡಾರಿ ಹೇಳಿದರು.</p>.<p>ಕಳೆದ ತಿಂಗಳು ಕಾನ್ಪುರದಲ್ಲಿ ಪಕ್ಷದ ಜನರಲ್ ಕೌನ್ಸಿಲ್ ಅಂಗೀಕರಿಸಿದ ನಿರ್ಣಯವನ್ನನುಸರಿಸಿ ಪಕ್ಷದ ಅಧ್ಯಕ್ಷ ಎಲ್.ಕೆ. ಅಡ್ವಾಣಿಯವರು ಈ ಕ್ರಮ ಕೈಗೊಂಡಿರುವುದಾಗಿ ಪ್ರಧಾನ ಕಾರ್ಯದರ್ಶಿಯ ಪ್ರಕಟಣೆ ತಿಳಿಸಿದೆ.</p>.<p><strong>ಪಾಕ್ಗೆ ಅಮೆರಿಕ ಶಸ್ತ್ರಾಸ್ತ್ರ: ಲೋಕಸಭೆ ಸದಸ್ಯರ ಕಳವಳ<br />ನವದೆಹಲಿ, ಮಾರ್ಚ್ 13–</strong> ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಪುನರಾರಂಭಿಸಲು ಅಮೆರಿಕ ಆಲೋಚಿಸುತ್ತಿದೆಯೆಂಬ ವರದಿ ಕುರಿತು ಲೋಕಸಭೆಯಲ್ಲಿ ಇಂದು ಎಲ್ಲ ಪಕ್ಷಗಳ ಸದಸ್ಯರೂ ತೀವ್ರ ಕಳವಳ ವ್ಯಕ್ತಪಡಿಸಿ, ಈ ವಿಷಯದಲ್ಲಿ ಸರ್ಕಾರ ಶೀಘ್ರವೇ ಹೇಳಿಕೆ ಕೊಡುವಂತೆ ಒತ್ತಾಯ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನಸಂಘದಿಂದ ಬಲರಾಜ ಮಧೋಕ್ ಉಚ್ಚಾಟನೆ<br />ನವದೆಹಲಿ, ಮಾರ್ಚ್ 13–</strong> ಜನಸಂಘದ ಮಾಜಿ ಅಧ್ಯಕ್ಷ ಬಲರಾಜ ಮಧೋಕ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮೂರು ವರ್ಷಗಳ ಕಾಲ ತೆಗೆದು ಹಾಕಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್.ಎನ್.ಭಂಡಾರಿ ಅವರು ಇಂದು ಇಲ್ಲಿ ಪ್ರಕಟಿಸಿದರು.</p>.<p>‘ಪಕ್ಷ ವಿರುದ್ಧದ ಚಟುವಟಿಕೆಗಳು ಮತ್ತು ಹೇಳಿಕೆಗಳಲ್ಲಿ’ ಮಧೋಕ್ ತೊಡಗಿದ್ದುದೇ ಅವರ ಉಚ್ಚಾಟನೆಗೆ ಕಾರಣವೆಂದು ಭಂಡಾರಿ ಹೇಳಿದರು.</p>.<p>ಕಳೆದ ತಿಂಗಳು ಕಾನ್ಪುರದಲ್ಲಿ ಪಕ್ಷದ ಜನರಲ್ ಕೌನ್ಸಿಲ್ ಅಂಗೀಕರಿಸಿದ ನಿರ್ಣಯವನ್ನನುಸರಿಸಿ ಪಕ್ಷದ ಅಧ್ಯಕ್ಷ ಎಲ್.ಕೆ. ಅಡ್ವಾಣಿಯವರು ಈ ಕ್ರಮ ಕೈಗೊಂಡಿರುವುದಾಗಿ ಪ್ರಧಾನ ಕಾರ್ಯದರ್ಶಿಯ ಪ್ರಕಟಣೆ ತಿಳಿಸಿದೆ.</p>.<p><strong>ಪಾಕ್ಗೆ ಅಮೆರಿಕ ಶಸ್ತ್ರಾಸ್ತ್ರ: ಲೋಕಸಭೆ ಸದಸ್ಯರ ಕಳವಳ<br />ನವದೆಹಲಿ, ಮಾರ್ಚ್ 13–</strong> ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಪುನರಾರಂಭಿಸಲು ಅಮೆರಿಕ ಆಲೋಚಿಸುತ್ತಿದೆಯೆಂಬ ವರದಿ ಕುರಿತು ಲೋಕಸಭೆಯಲ್ಲಿ ಇಂದು ಎಲ್ಲ ಪಕ್ಷಗಳ ಸದಸ್ಯರೂ ತೀವ್ರ ಕಳವಳ ವ್ಯಕ್ತಪಡಿಸಿ, ಈ ವಿಷಯದಲ್ಲಿ ಸರ್ಕಾರ ಶೀಘ್ರವೇ ಹೇಳಿಕೆ ಕೊಡುವಂತೆ ಒತ್ತಾಯ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>