<p><strong>ಸರ್ಕಾರದ ಬಿಗಿ ನಿಲುವು: ಬಂಧಿತರ ಬಿಡುಗಡೆ ಸಂಧಾನಕ್ಕೆ ವಿರೋಧಿಗಳ ಕರೆ</strong></p><p>ನವದೆಹಲಿ, ಮೇ 5– ಮೇ 8ರಿಂದ ಆರಂಭಿಸಲುದ್ದೇಶಿಸಿರುವ ರೈಲ್ವೆ ಮುಷ್ಕರದ ಬಗ್ಗೆ ಸರ್ಕಾರದ ಗಡಸು ಧೋರಣೆ ಮುಂದುವರಿದಿದ್ದು, ಈ ಮಧ್ಯೆ ಇಂದು ಇಲ್ಲಿ ಸಭೆ ಸೇರಿದ್ದ ಐದು ವಿರೋಧ ಪಕ್ಷಗಳ ಪ್ರತಿನಿಧಿಗಳು ಬಂಧಿತ ರೈಲ್ವೆ ನಾಯಕರುಗಳನ್ನು ತಕ್ಷಣ ಬಿಡುಗಡೆ ಮಾಡಿ ಸಂಧಾನ ಪುನರಾರಂಭಿಸುವಂತೆ ಮನವಿ ಮಾಡಿದ್ದಾರೆ.</p><p>ಜನತೆಯನ್ನು ತಪ್ಪು ಹಾದಿಗೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ರೈಲ್ವೆ ನೌಕರರ ಮುಷ್ಕರದ ಬಗ್ಗೆ ಸುಳ್ಳು ಹೇಳಿಕೆಗಳನ್ನು<br>ಮುಂದೊಡ್ಡುತ್ತಿದೆಯೆಂದು ವಿರೋಧ ಪಕ್ಷಗಳ ಪ್ರತಿನಿಧಿಗಳು ಇಂದು ಇಲ್ಲಿ ಆಪಾದಿಸಿದರು.</p><p><strong>ಪ್ರಮುಖ ಬಂದರಾಗಿ ‘ಹೊಸ ಮಂಗಳೂರು’</strong></p><p>ನವದೆಹಲಿ, ಮೇ 5– ಮಂಗಳೂರು ಬಂದರು ಯೋಜನೆ ಪ್ರದೇಶ ಇನ್ನು ಮುಂದೆ ‘ಹೊಸ ಮಂಗಳೂರು’ ಎಂಬ ಅಭಿನಾಮ ಪಡೆದು ಭಾರತದ ಒಂಬತ್ತನೆಯ ಪ್ರಮುಖ ಬಂದರಾಗಿ ಪರಿಗಣಿಸಲ್ಪಡಲಿದೆ.</p><p>ಹೊಸ ಮಂಗಳೂರಿನಲ್ಲಿ ಮೂರು ಹಡಗು ನಿಲ್ದಾಣಗಳಿರುತ್ತವೆ. ಮಾಮೂಲಿ ಸರಕು ಸಾಗಾಣಿಕೆ ಹಡಗುಗಳಿಗಾಗಿ ಒಂದು; ಕಬ್ಬಿಣ, ಮ್ಯಾಂಗನೀಸ್ಗಳ ಅದಿರು, ಕಲ್ಲಿದ್ದಲು ಮತ್ತು ಕಟ್ಟ ಇವುಗಳ ರಫ್ತು ಹಡಗುಗಳಿಗಾಗಿ ಇನ್ನೊಂದು; ಕಚ್ಚಾ ಸಾಮಗ್ರಿ ಹಾಗೂ ಗೊಬ್ಬರಗಳ ಆಮದು ಹಡಗುಗಳಿಗಾಗಿ ಮತ್ತೊಂದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸರ್ಕಾರದ ಬಿಗಿ ನಿಲುವು: ಬಂಧಿತರ ಬಿಡುಗಡೆ ಸಂಧಾನಕ್ಕೆ ವಿರೋಧಿಗಳ ಕರೆ</strong></p><p>ನವದೆಹಲಿ, ಮೇ 5– ಮೇ 8ರಿಂದ ಆರಂಭಿಸಲುದ್ದೇಶಿಸಿರುವ ರೈಲ್ವೆ ಮುಷ್ಕರದ ಬಗ್ಗೆ ಸರ್ಕಾರದ ಗಡಸು ಧೋರಣೆ ಮುಂದುವರಿದಿದ್ದು, ಈ ಮಧ್ಯೆ ಇಂದು ಇಲ್ಲಿ ಸಭೆ ಸೇರಿದ್ದ ಐದು ವಿರೋಧ ಪಕ್ಷಗಳ ಪ್ರತಿನಿಧಿಗಳು ಬಂಧಿತ ರೈಲ್ವೆ ನಾಯಕರುಗಳನ್ನು ತಕ್ಷಣ ಬಿಡುಗಡೆ ಮಾಡಿ ಸಂಧಾನ ಪುನರಾರಂಭಿಸುವಂತೆ ಮನವಿ ಮಾಡಿದ್ದಾರೆ.</p><p>ಜನತೆಯನ್ನು ತಪ್ಪು ಹಾದಿಗೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ರೈಲ್ವೆ ನೌಕರರ ಮುಷ್ಕರದ ಬಗ್ಗೆ ಸುಳ್ಳು ಹೇಳಿಕೆಗಳನ್ನು<br>ಮುಂದೊಡ್ಡುತ್ತಿದೆಯೆಂದು ವಿರೋಧ ಪಕ್ಷಗಳ ಪ್ರತಿನಿಧಿಗಳು ಇಂದು ಇಲ್ಲಿ ಆಪಾದಿಸಿದರು.</p><p><strong>ಪ್ರಮುಖ ಬಂದರಾಗಿ ‘ಹೊಸ ಮಂಗಳೂರು’</strong></p><p>ನವದೆಹಲಿ, ಮೇ 5– ಮಂಗಳೂರು ಬಂದರು ಯೋಜನೆ ಪ್ರದೇಶ ಇನ್ನು ಮುಂದೆ ‘ಹೊಸ ಮಂಗಳೂರು’ ಎಂಬ ಅಭಿನಾಮ ಪಡೆದು ಭಾರತದ ಒಂಬತ್ತನೆಯ ಪ್ರಮುಖ ಬಂದರಾಗಿ ಪರಿಗಣಿಸಲ್ಪಡಲಿದೆ.</p><p>ಹೊಸ ಮಂಗಳೂರಿನಲ್ಲಿ ಮೂರು ಹಡಗು ನಿಲ್ದಾಣಗಳಿರುತ್ತವೆ. ಮಾಮೂಲಿ ಸರಕು ಸಾಗಾಣಿಕೆ ಹಡಗುಗಳಿಗಾಗಿ ಒಂದು; ಕಬ್ಬಿಣ, ಮ್ಯಾಂಗನೀಸ್ಗಳ ಅದಿರು, ಕಲ್ಲಿದ್ದಲು ಮತ್ತು ಕಟ್ಟ ಇವುಗಳ ರಫ್ತು ಹಡಗುಗಳಿಗಾಗಿ ಇನ್ನೊಂದು; ಕಚ್ಚಾ ಸಾಮಗ್ರಿ ಹಾಗೂ ಗೊಬ್ಬರಗಳ ಆಮದು ಹಡಗುಗಳಿಗಾಗಿ ಮತ್ತೊಂದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>