<p><strong>ರಾಷ್ಟ್ರದಾದ್ಯಂತ ರೈಲ್ವೆ ಮುಷ್ಕರ: ಸಂಚಾರ ಅಸ್ತವ್ಯಸ್ತ</strong></p><p>ನವದೆಹಲಿ, ಮೇ 8– ರಾಷ್ಟ್ರದಾದ್ಯಂತ ಇಂದು ಬೆಳಿಗ್ಗೆ ಆರು ಗಂಟೆಗೆ ರೈಲ್ವೆ ಮುಷ್ಕರ ಪ್ರಾರಂಭವಾದಂತೆ ರೈಲು ಸಂಚಾರ ವ್ಯಾಪಕವಾಗಿ ಅಸ್ತವ್ಯಸ್ತಗೊಂಡಿತು.</p><p>ಸ್ವಾತಂತ್ರ್ಯ ಬಂದ ನಂತರ ಇದು ಮೂರನೇ ರೈಲ್ವೆ ಮುಷ್ಕರ. ರಾಷ್ಟ್ರದ ವಿವಿಧ ಭಾಗಗಳಿಂದ ಬಂದಿರುವ ವರದಿಗಳ ಪ್ರಕಾರ ಮುಷ್ಕರದ ಕರೆಗೆ ಸಿಕ್ಕಿರುವ ಪ್ರತಿಕ್ರಿಯೆ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿದೆ. ಮುಖ್ಯ ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆಗೆ ತೀವ್ರ ಧಕ್ಕೆ ತಟ್ಟಿತು.</p><p><strong>100 ಮಂದಿ ನೌಕರರ ವಜಾ</strong></p><p>ಮದರಾಸು, ಮೇ 8– ರೈಲ್ವೆ ಮುಷ್ಕರ ಆರಂಭ ಆಗುತ್ತಿದ್ದಂತೆ ಹಲವಾರು ಕಡೆಗಳಿಂದ ನೌಕರರ ವಜಾ ವರದಿಗಳು ಬರುತ್ತಿವೆ. </p><p>ದಕ್ಷಿಣ ರೈಲ್ವೆಯ 48 ಮಂದಿ ಉದ್ಯೋಗಿಗಳನ್ನು ಬೆದರಿಕೆ, ಪ್ರಚೋದನೆ ಮತ್ತು ಮಾಮೂಲು ಕರ್ತವ್ಯ ನಿರ್ವಹಣೆ ನಿರಾಕರಿಸಿದ್ದಕ್ಕಾಗಿ ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಜನರಲ್ ಮ್ಯಾನೇಜರ್<br>ಹೇಳಿದ್ದಾರೆ.</p><p>ನಿಷ್ಠಾವಂತ ಕೆಲಸಗಾರರಿಗೆ ಬೆದರಿಕೆ ಹಾಕಿದ ಮತ್ತು ರೈಲ್ವೆ ಸಂಚಾರಕ್ಕೂ ತಡೆ ಉಂಟುಮಾಡಿದ ಆಪಾದನೆಗಾಗಿ ಪೂರ್ವ ರೈಲ್ವೆಯಲ್ಲಿ 40 ನೌಕರರನ್ನು ವಜಾ ಮಾಡಲಾಗಿದೆ. ಇದೇ ಕಾರಣಕ್ಕಾಗಿ ದಕ್ಷಿಣ ಮಧ್ಯ ರೈಲ್ವೆಯ 12 ಮಂದಿ ನೌಕರರನ್ನು ವಜಾ ಮಾಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಷ್ಟ್ರದಾದ್ಯಂತ ರೈಲ್ವೆ ಮುಷ್ಕರ: ಸಂಚಾರ ಅಸ್ತವ್ಯಸ್ತ</strong></p><p>ನವದೆಹಲಿ, ಮೇ 8– ರಾಷ್ಟ್ರದಾದ್ಯಂತ ಇಂದು ಬೆಳಿಗ್ಗೆ ಆರು ಗಂಟೆಗೆ ರೈಲ್ವೆ ಮುಷ್ಕರ ಪ್ರಾರಂಭವಾದಂತೆ ರೈಲು ಸಂಚಾರ ವ್ಯಾಪಕವಾಗಿ ಅಸ್ತವ್ಯಸ್ತಗೊಂಡಿತು.</p><p>ಸ್ವಾತಂತ್ರ್ಯ ಬಂದ ನಂತರ ಇದು ಮೂರನೇ ರೈಲ್ವೆ ಮುಷ್ಕರ. ರಾಷ್ಟ್ರದ ವಿವಿಧ ಭಾಗಗಳಿಂದ ಬಂದಿರುವ ವರದಿಗಳ ಪ್ರಕಾರ ಮುಷ್ಕರದ ಕರೆಗೆ ಸಿಕ್ಕಿರುವ ಪ್ರತಿಕ್ರಿಯೆ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿದೆ. ಮುಖ್ಯ ಮಾರ್ಗಗಳಲ್ಲಿ ಸಂಚಾರ ವ್ಯವಸ್ಥೆಗೆ ತೀವ್ರ ಧಕ್ಕೆ ತಟ್ಟಿತು.</p><p><strong>100 ಮಂದಿ ನೌಕರರ ವಜಾ</strong></p><p>ಮದರಾಸು, ಮೇ 8– ರೈಲ್ವೆ ಮುಷ್ಕರ ಆರಂಭ ಆಗುತ್ತಿದ್ದಂತೆ ಹಲವಾರು ಕಡೆಗಳಿಂದ ನೌಕರರ ವಜಾ ವರದಿಗಳು ಬರುತ್ತಿವೆ. </p><p>ದಕ್ಷಿಣ ರೈಲ್ವೆಯ 48 ಮಂದಿ ಉದ್ಯೋಗಿಗಳನ್ನು ಬೆದರಿಕೆ, ಪ್ರಚೋದನೆ ಮತ್ತು ಮಾಮೂಲು ಕರ್ತವ್ಯ ನಿರ್ವಹಣೆ ನಿರಾಕರಿಸಿದ್ದಕ್ಕಾಗಿ ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಜನರಲ್ ಮ್ಯಾನೇಜರ್<br>ಹೇಳಿದ್ದಾರೆ.</p><p>ನಿಷ್ಠಾವಂತ ಕೆಲಸಗಾರರಿಗೆ ಬೆದರಿಕೆ ಹಾಕಿದ ಮತ್ತು ರೈಲ್ವೆ ಸಂಚಾರಕ್ಕೂ ತಡೆ ಉಂಟುಮಾಡಿದ ಆಪಾದನೆಗಾಗಿ ಪೂರ್ವ ರೈಲ್ವೆಯಲ್ಲಿ 40 ನೌಕರರನ್ನು ವಜಾ ಮಾಡಲಾಗಿದೆ. ಇದೇ ಕಾರಣಕ್ಕಾಗಿ ದಕ್ಷಿಣ ಮಧ್ಯ ರೈಲ್ವೆಯ 12 ಮಂದಿ ನೌಕರರನ್ನು ವಜಾ ಮಾಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>