<p><strong>ದಕ್ಷಿಣ ಕನ್ನಡದಲ್ಲಿ 5,300 ಮನೆ ಕುಸಿತ</strong></p><p>ಮಂಗಳೂರು, ಜುಲೈ 31– ಇತ್ತೀಚಿನ ಪ್ರವಾಹದಿಂದ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿನ ಒಟ್ಟು 192 ಗ್ರಾಮಗಳಲ್ಲಿ 5,300 ಮನೆ, ಕಟ್ಟಡಗಳು ಕುಸಿದು 1.25 ಕೋಟಿ ರೂಪಾಯಿ ನಷ್ಟವಾಗಿದೆಯೆಂದು ಅಧಿಕಾರಿಗಳ ಪ್ರಾಥಮಿಕ ಅಂದಾಜಿನಿಂದ ತಿಳಿದುಬಂದಿದೆ.</p><p><strong>ಶ್ರೀಸಾಮಾನ್ಯ ಮುಕ್ತ; ಮಧ್ಯಮ, ಮೇಲುವರ್ಗಗಳು ಭಾರಕ್ಕೆ ಬಲಿ</strong></p><p>ನವದೆಹಲಿ, ಜುಲೈ 31– ಜನಸಾಮಾನ್ಯರ ನಿತ್ಯಬಳಕೆ ವಸ್ತುಗಳಿಗೆ ವಿನಾಯಿತಿ ನೀಡಿರುವುದಾಗಿ ಹೇಳಿ ಅರ್ಥಸಚಿವ ವೈ.ಬಿ. ಚವಾಣರು ಇಂದು ಲೋಕಸಭೆಯಲ್ಲಿ ಮಂಡಿಸಿದ ಪೂರಕ ಆಯವ್ಯಯ ಮಧ್ಯಮ ವರ್ಗದ ಜನರ ಕರಭಾರವನ್ನು ಹೆಚ್ಚಿಸಿದೆ.</p><p>ಅತ್ಯುತ್ಕೃಷ್ಟ ಹಾಗೂ ಉತ್ಕೃಷ್ಟ ದರ್ಜೆಯ ಬಟ್ಟೆ, ಸಿಗರೇಟ್, ಸಿಮೆಂಟ್ ಮತ್ತು ಗೃಹ ನಿರ್ಮಾಣ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಚವಾಣರು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಜನರ ಮೇಲೆ ತೆರಿಗೆಯ ಪ್ರಹಾರ ನಡೆಸಿದ್ದಾರೆ.</p><p><strong>ಉಪರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧಿ ಜತ್ತಿ</strong></p><p>ನವದೆಹಲಿ, ಜುಲೈ 31– ಉಪರಾಷ್ಟ್ರಪತಿ ಸ್ಥಾನಕ್ಕೆ ಒರಿಸ್ಸಾ ರಾಜ್ಯಪಾಲ ಬಿ.ಡಿ. ಜತ್ತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ನಿಲ್ಲಿಸಬೇಕೆಂದು ಪಕ್ಷದ ಕೇಂದ್ರ ಸಂಸದೀಯ ಮಂಡಳಿಯು ಗುರುವಾರ ವಿಧ್ಯುಕ್ತವಾಗಿ ನಿರ್ಧರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಕ್ಷಿಣ ಕನ್ನಡದಲ್ಲಿ 5,300 ಮನೆ ಕುಸಿತ</strong></p><p>ಮಂಗಳೂರು, ಜುಲೈ 31– ಇತ್ತೀಚಿನ ಪ್ರವಾಹದಿಂದ ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿನ ಒಟ್ಟು 192 ಗ್ರಾಮಗಳಲ್ಲಿ 5,300 ಮನೆ, ಕಟ್ಟಡಗಳು ಕುಸಿದು 1.25 ಕೋಟಿ ರೂಪಾಯಿ ನಷ್ಟವಾಗಿದೆಯೆಂದು ಅಧಿಕಾರಿಗಳ ಪ್ರಾಥಮಿಕ ಅಂದಾಜಿನಿಂದ ತಿಳಿದುಬಂದಿದೆ.</p><p><strong>ಶ್ರೀಸಾಮಾನ್ಯ ಮುಕ್ತ; ಮಧ್ಯಮ, ಮೇಲುವರ್ಗಗಳು ಭಾರಕ್ಕೆ ಬಲಿ</strong></p><p>ನವದೆಹಲಿ, ಜುಲೈ 31– ಜನಸಾಮಾನ್ಯರ ನಿತ್ಯಬಳಕೆ ವಸ್ತುಗಳಿಗೆ ವಿನಾಯಿತಿ ನೀಡಿರುವುದಾಗಿ ಹೇಳಿ ಅರ್ಥಸಚಿವ ವೈ.ಬಿ. ಚವಾಣರು ಇಂದು ಲೋಕಸಭೆಯಲ್ಲಿ ಮಂಡಿಸಿದ ಪೂರಕ ಆಯವ್ಯಯ ಮಧ್ಯಮ ವರ್ಗದ ಜನರ ಕರಭಾರವನ್ನು ಹೆಚ್ಚಿಸಿದೆ.</p><p>ಅತ್ಯುತ್ಕೃಷ್ಟ ಹಾಗೂ ಉತ್ಕೃಷ್ಟ ದರ್ಜೆಯ ಬಟ್ಟೆ, ಸಿಗರೇಟ್, ಸಿಮೆಂಟ್ ಮತ್ತು ಗೃಹ ನಿರ್ಮಾಣ ವಸ್ತುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ಚವಾಣರು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಜನರ ಮೇಲೆ ತೆರಿಗೆಯ ಪ್ರಹಾರ ನಡೆಸಿದ್ದಾರೆ.</p><p><strong>ಉಪರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧಿ ಜತ್ತಿ</strong></p><p>ನವದೆಹಲಿ, ಜುಲೈ 31– ಉಪರಾಷ್ಟ್ರಪತಿ ಸ್ಥಾನಕ್ಕೆ ಒರಿಸ್ಸಾ ರಾಜ್ಯಪಾಲ ಬಿ.ಡಿ. ಜತ್ತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ನಿಲ್ಲಿಸಬೇಕೆಂದು ಪಕ್ಷದ ಕೇಂದ್ರ ಸಂಸದೀಯ ಮಂಡಳಿಯು ಗುರುವಾರ ವಿಧ್ಯುಕ್ತವಾಗಿ ನಿರ್ಧರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>