ಶತಾಯಗತಾಯ ಮಹಾಜನ್ ವರದಿ ಕಾರ್ಯಗತವಾಗಲಿ: ಒತ್ತಾಯ
ಬೆಳಗಾವಿ, ಜ. 6– ‘ಏನೇ ಆಗಲಿ ಮಹಾಜನ್ ಆಯೋಗದ ವರದಿಯನ್ನು ಕಾರ್ಯಗತ ಮಾಡಲೇಬೇಕು. ಈ ಬಗ್ಗೆ ಅಚಲ ನಿರ್ಧಾರ ಇರಬೇಕು’ ಎಂದು ಹಲವಾರು ನಿಯೋಗಗಳು ಇಂದು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಆಗ್ರಹಪಡಿಸಿದವು.
ಸಂಸತ್ ಸದಸ್ಯರ ಸಭೆ ನಡೆಯಲಿದ್ದ ಸರ್ಕ್ಯೂಟ್ಹೌಸ್ ಆವರಣ ನಾನಾ ನಿಯೋಗಗಳ ಪ್ರತಿನಿಧಿಗಳಿಂದ ತುಂಬಿ ಸಂತೆಯಂತೆ ಕಾಣುತ್ತಿತ್ತು. ಅರಸು ಅವರು ಬಂದ ಕೂಡಲೆ ಪ್ರತಿನಿಧಿಗಳು ಅವರನ್ನು ಮುತ್ತಿದರು.