<p><strong>ನವದೆಹಲಿ</strong>, ಆ. 30– ಕೃಷ್ಣಾ ನೀರಿನ ಹಂಚಿಕೆಯ ವಿವಾದದ ಬಗ್ಗೆ ಪಂಚಾಯ್ತಿ ನೀಡುವ ಅಂತಿಮ ತೀರ್ಪನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಂಗೀಕರಿಸಬೇಕು ಎಂದು ನೀರಾವರಿ ಮತ್ತು ವಿದ್ಯುತ್ ಸಚಿವ ಕೆ.ಸಿ. ಪಂತ್ ಇಂದು ರಾಜ್ಯಸಭೆಯಲ್ಲಿ ಸೂಚಿಸಿದ್ದಾರೆ.</p><p>ಪಂಚಾಯ್ತಿಯ ತೀರ್ಪನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವಂತೆ ಅಗತ್ಯ ವಾತಾವರಣವನ್ನು ಉಂಟು ಮಾಡುವಂತೆ ಅವರು ಮೂರು ರಾಜ್ಯಗಳ ಸಂಸತ್ ಸದಸ್ಯರನ್ನು ಕೋರಿದರು.</p><p>ಪಂಚಾಯ್ತಿಯ ಕಲಾಪದಿಂದ ಕರ್ನಾಟಕದ ಪ್ರತಿನಿಧಿಗಳು ಹೊರ ಹೋದರೆಂಬ ವರದಿಗಳ ಬಗ್ಗೆ ಗಮನ ಸೆಳೆವ ಮಂಡನೆಯ ಚರ್ಚೆಗೆ ಉತ್ತರಿಸುತ್ತಿದ್ದ ಸಚಿವ ಪಂತ್, ತಾವು ಶೀಘ್ರವೇ ಸಂಬಂಧಪಟ್ಟ ರಾಜ್ಯಗಳ ಸಂಸತ್ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.</p><p>ಶಿಕ್ಷಕರ ನಿವೃತ್ತಿ ವಯಸ್ಸು ಇಳಿಸುವ ಸರ್ಕಾರದ ಅಧಿಕಾರಕ್ಕೆ ಹೈಕೋರ್ಟ್ ಬಹುಮತದ ಸಮರ್ಥನೆ</p><p>ಬೆಂಗಳೂರು, ಆ. 30– ಶಿಕ್ಷಕರ ನಿವೃತ್ತಿ ವಯಸ್ಸನ್ನು 58ರಿಂದ 55ಕ್ಕೆ ಇಳಿಸಲು ರಾಜ್ಯ ಸರ್ಕಾರಕ್ಕೆ ಇರುವ ಹಕ್ಕನ್ನು ಕರ್ನಾಟಕ ಹೈಕೋರ್ಟ್ ಸಮರ್ಥಿಸಿದೆ.</p><p>ಹೈಕೋರ್ಟಿನ ಪೂರ್ಣ ಪೀಠದ ನ್ಯಾಯಾಧೀಶರು ಈ ಬಹುಮತದ ತೀರ್ಪನ್ನು ನೀಡಿದ್ದಾರೆ.</p><p>ರಾಜ್ಯ ಪುನರ್ರಚನಾ ಶಾಸನದನ್ವಯ ಶಿಕ್ಷಕರ ನಿವೃತ್ತಿ ವಯಸ್ಸನ್ನು ಇಳಿಸಲು ರಾಜ್ಯ ಸರ್ಕಾರಕ್ಕೆ ಇರುವ ಹಕ್ಕನ್ನು ಸಮರ್ಥಿಸಿ ನ್ಯಾಯ ಮೂರ್ತಿಗಳಾದ ಬಿ. ವೆಂಕಟಸ್ವಾಮಿ ಮತ್ತು ಕೆ. ಜಗನ್ನಾಥ ಶೆಟ್ಟಿ ತೀರ್ಪು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>, ಆ. 30– ಕೃಷ್ಣಾ ನೀರಿನ ಹಂಚಿಕೆಯ ವಿವಾದದ ಬಗ್ಗೆ ಪಂಚಾಯ್ತಿ ನೀಡುವ ಅಂತಿಮ ತೀರ್ಪನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಅಂಗೀಕರಿಸಬೇಕು ಎಂದು ನೀರಾವರಿ ಮತ್ತು ವಿದ್ಯುತ್ ಸಚಿವ ಕೆ.ಸಿ. ಪಂತ್ ಇಂದು ರಾಜ್ಯಸಭೆಯಲ್ಲಿ ಸೂಚಿಸಿದ್ದಾರೆ.</p><p>ಪಂಚಾಯ್ತಿಯ ತೀರ್ಪನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವಂತೆ ಅಗತ್ಯ ವಾತಾವರಣವನ್ನು ಉಂಟು ಮಾಡುವಂತೆ ಅವರು ಮೂರು ರಾಜ್ಯಗಳ ಸಂಸತ್ ಸದಸ್ಯರನ್ನು ಕೋರಿದರು.</p><p>ಪಂಚಾಯ್ತಿಯ ಕಲಾಪದಿಂದ ಕರ್ನಾಟಕದ ಪ್ರತಿನಿಧಿಗಳು ಹೊರ ಹೋದರೆಂಬ ವರದಿಗಳ ಬಗ್ಗೆ ಗಮನ ಸೆಳೆವ ಮಂಡನೆಯ ಚರ್ಚೆಗೆ ಉತ್ತರಿಸುತ್ತಿದ್ದ ಸಚಿವ ಪಂತ್, ತಾವು ಶೀಘ್ರವೇ ಸಂಬಂಧಪಟ್ಟ ರಾಜ್ಯಗಳ ಸಂಸತ್ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ತಿಳಿಸಿದರು.</p><p>ಶಿಕ್ಷಕರ ನಿವೃತ್ತಿ ವಯಸ್ಸು ಇಳಿಸುವ ಸರ್ಕಾರದ ಅಧಿಕಾರಕ್ಕೆ ಹೈಕೋರ್ಟ್ ಬಹುಮತದ ಸಮರ್ಥನೆ</p><p>ಬೆಂಗಳೂರು, ಆ. 30– ಶಿಕ್ಷಕರ ನಿವೃತ್ತಿ ವಯಸ್ಸನ್ನು 58ರಿಂದ 55ಕ್ಕೆ ಇಳಿಸಲು ರಾಜ್ಯ ಸರ್ಕಾರಕ್ಕೆ ಇರುವ ಹಕ್ಕನ್ನು ಕರ್ನಾಟಕ ಹೈಕೋರ್ಟ್ ಸಮರ್ಥಿಸಿದೆ.</p><p>ಹೈಕೋರ್ಟಿನ ಪೂರ್ಣ ಪೀಠದ ನ್ಯಾಯಾಧೀಶರು ಈ ಬಹುಮತದ ತೀರ್ಪನ್ನು ನೀಡಿದ್ದಾರೆ.</p><p>ರಾಜ್ಯ ಪುನರ್ರಚನಾ ಶಾಸನದನ್ವಯ ಶಿಕ್ಷಕರ ನಿವೃತ್ತಿ ವಯಸ್ಸನ್ನು ಇಳಿಸಲು ರಾಜ್ಯ ಸರ್ಕಾರಕ್ಕೆ ಇರುವ ಹಕ್ಕನ್ನು ಸಮರ್ಥಿಸಿ ನ್ಯಾಯ ಮೂರ್ತಿಗಳಾದ ಬಿ. ವೆಂಕಟಸ್ವಾಮಿ ಮತ್ತು ಕೆ. ಜಗನ್ನಾಥ ಶೆಟ್ಟಿ ತೀರ್ಪು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>