<p><strong>ಎಲ್ಲ ಮಟ್ಟಗಳಲ್ಲಿ ಅಧಿಕೃತ ಭಾಷೆ ಆಗಿ ಕನ್ನಡ</strong></p>.<p><strong>ಹುಬ್ಬಳ್ಳಿ, ನ. 30– </strong>ಮುಂದಿನ ಮೂರು ವರ್ಷಗಳಲ್ಲಿ ಆಡಳಿತದ ಎಲ್ಲ ಮಟ್ಟಗಳಲ್ಲಿ ಕನ್ನಡವು ರಾಜ್ಯದ ಅಧಿಕೃತ ಭಾಷೆಯಾಗುವುದು.</p>.<p>ಈ ವಿಷಯವನ್ನು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ ಶಿಕ್ಷಣ ಸಚಿವ ಶ್ರೀ ಕೆ.ವಿ.ಶಂಕರಗೌಡರು, ಈ ದಿಸೆಯಲ್ಲಿ ಕ್ರಮಗಳನ್ನು ಸಿದ್ಧಪಡಿಸಲು ನೇಮಕಗೊಂಡ ತಜ್ಞರ ಸಮಿತಿ ವರದಿಗಾಗಿ ಸರ್ಕಾರ ಕಾಯುತ್ತಿದೆ ಎಂದರು.</p>.<p>ಎಲ್ಲ ಮಟ್ಟಗಳಲ್ಲೂ ಒಮ್ಮೆ ಕನ್ನಡ ಅಧಿಕೃತ ಭಾಷೆ ಆಯಿತೆಂದರೆ, ಕಾಲೇಜುಗಳಲ್ಲಿ ಶಿಕ್ಷಣ ಮಾಧ್ಯಮ ಕನ್ನಡಕ್ಕೆ ಬದಲಾವಣೆಯಾಗುವುದೆಂಬ ನಂಬಿಕೆ ತಮಗಿದೆಯೆಂದು ನುಡಿದು, ವಿದ್ಯಾರ್ಥಿಗಳೂ ಅದನ್ನು ಆಯ್ದುಕೊಳ್ಳುವರೆಂದರು.</p>.<p><strong>ಮಂಗಳೂರು– ಮುಂಬೈ ಪಶ್ಚಿಮ ಕರಾವಳಿ ರೈಲ್ವೆ ಐದಾರು ವರ್ಷಗಳಲ್ಲಿ ಸಿದ್ಧ</strong></p>.<p><strong>ಬೆಂಗಳೂರು, ನ. 30– </strong>ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ ಇದೀಗ ‘ರಾಷ್ಟ್ರೀಯ ಪ್ರಾಮುಖ್ಯ’ ಪಡೆದಿರುವ ಮಂಗಳೂರು– ಮುಂಬೈ ಪಶ್ಚಿಮ ಕರಾವಳಿ ರೈಲ್ವೆ ಯೋಜನೆಯು ‘ಐದಾರು ವರ್ಷಗಳೊಳಗೆ’ ಓಡಾಟಕ್ಕೆ ಸಿದ್ಧವಾಗುವುದು ಖಚಿತವೆನಿಸಿದೆ.</p>.<p>ಸುಮಾರು ₹200 ಕೋಟಿ ಅಂದಾಜು ವೆಚ್ಚದ 900 ಕಿಲೊಮೀಟರುಗಳುದ್ದದ ಈ ರೈಲ್ವೆ ದಾರಿಯ ನಿರ್ಮಾಣ ಪೂರ್ವ ಸಮೀಕ್ಷೆಯು ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಆರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಲ್ಲ ಮಟ್ಟಗಳಲ್ಲಿ ಅಧಿಕೃತ ಭಾಷೆ ಆಗಿ ಕನ್ನಡ</strong></p>.<p><strong>ಹುಬ್ಬಳ್ಳಿ, ನ. 30– </strong>ಮುಂದಿನ ಮೂರು ವರ್ಷಗಳಲ್ಲಿ ಆಡಳಿತದ ಎಲ್ಲ ಮಟ್ಟಗಳಲ್ಲಿ ಕನ್ನಡವು ರಾಜ್ಯದ ಅಧಿಕೃತ ಭಾಷೆಯಾಗುವುದು.</p>.<p>ಈ ವಿಷಯವನ್ನು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ ಶಿಕ್ಷಣ ಸಚಿವ ಶ್ರೀ ಕೆ.ವಿ.ಶಂಕರಗೌಡರು, ಈ ದಿಸೆಯಲ್ಲಿ ಕ್ರಮಗಳನ್ನು ಸಿದ್ಧಪಡಿಸಲು ನೇಮಕಗೊಂಡ ತಜ್ಞರ ಸಮಿತಿ ವರದಿಗಾಗಿ ಸರ್ಕಾರ ಕಾಯುತ್ತಿದೆ ಎಂದರು.</p>.<p>ಎಲ್ಲ ಮಟ್ಟಗಳಲ್ಲೂ ಒಮ್ಮೆ ಕನ್ನಡ ಅಧಿಕೃತ ಭಾಷೆ ಆಯಿತೆಂದರೆ, ಕಾಲೇಜುಗಳಲ್ಲಿ ಶಿಕ್ಷಣ ಮಾಧ್ಯಮ ಕನ್ನಡಕ್ಕೆ ಬದಲಾವಣೆಯಾಗುವುದೆಂಬ ನಂಬಿಕೆ ತಮಗಿದೆಯೆಂದು ನುಡಿದು, ವಿದ್ಯಾರ್ಥಿಗಳೂ ಅದನ್ನು ಆಯ್ದುಕೊಳ್ಳುವರೆಂದರು.</p>.<p><strong>ಮಂಗಳೂರು– ಮುಂಬೈ ಪಶ್ಚಿಮ ಕರಾವಳಿ ರೈಲ್ವೆ ಐದಾರು ವರ್ಷಗಳಲ್ಲಿ ಸಿದ್ಧ</strong></p>.<p><strong>ಬೆಂಗಳೂರು, ನ. 30– </strong>ಕೇಂದ್ರ ಸರ್ಕಾರದ ದೃಷ್ಟಿಯಲ್ಲಿ ಇದೀಗ ‘ರಾಷ್ಟ್ರೀಯ ಪ್ರಾಮುಖ್ಯ’ ಪಡೆದಿರುವ ಮಂಗಳೂರು– ಮುಂಬೈ ಪಶ್ಚಿಮ ಕರಾವಳಿ ರೈಲ್ವೆ ಯೋಜನೆಯು ‘ಐದಾರು ವರ್ಷಗಳೊಳಗೆ’ ಓಡಾಟಕ್ಕೆ ಸಿದ್ಧವಾಗುವುದು ಖಚಿತವೆನಿಸಿದೆ.</p>.<p>ಸುಮಾರು ₹200 ಕೋಟಿ ಅಂದಾಜು ವೆಚ್ಚದ 900 ಕಿಲೊಮೀಟರುಗಳುದ್ದದ ಈ ರೈಲ್ವೆ ದಾರಿಯ ನಿರ್ಮಾಣ ಪೂರ್ವ ಸಮೀಕ್ಷೆಯು ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಆರಂಭವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>