<p><strong>ತೆಲಂಗಾಣ ಸದಸ್ಯರಿಂದ ಆಂಧ್ರ ಕಾಂಗ್ರೆಸ್ ಶಾಸಕ ಪಕ್ಷದ ಸಭೆಗೆ ಬಹಿಷ್ಕಾರ</strong></p>.<p><strong>ಹೈದರಾಬಾದ್, ಜುಲೈ 5–</strong> ಆಂಧ್ರ ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿ ಅವರ ‘ರಾಜೀನಾಮೆಯನ್ನು’ ಪರಿಶೀಲಿಸುವುದಕ್ಕಾಗಿ ನಾಳೆ ಇಲ್ಲಿ ಸಭೆ ಸೇರಲಿರುವ ಕಾಂಗ್ರೆಸ್ ಶಾಸಕ ಪಕ್ಷದ ಸಭೆಯನ್ನು ಬಹಿಷ್ಕರಿಸಲು ತೆಲಂಗಾಣ ಪ್ರದೇಶದ 38 ಮಂದಿ ಕಾಂಗ್ರೆಸ್ ಶಾಸಕರು ಇಂದು ನಿರ್ಧರಿಸಿದರು.ಇಂದು ಬೆಳಿಗ್ಗೆ ಇಲ್ಲಿ ನಡೆದ ಶಾಸಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಗೊತ್ತಾಗಿದೆ.</p>.<p>ಈ ಬೆಳಿಗ್ಗೆ ನಡೆದ ಸಭೆಯಲ್ಲಿ ಆಂಧ್ರ ವಿಧಾನ ಸಭೆಯ 30 ಮಂದಿ ಸದಸ್ಯರೂ ಮತ್ತು ವಿಧಾನ ಪರಿಷತ್ತಿನ 8 ಮಂದಿ ಸದಸ್ಯರೂ ಈ ಸಭೆಯಲ್ಲಿ ಭಾಗವಹಿಸಿದ್ದರೆಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ವೃತ್ತಗಳು ತಿಳಿಸಿವೆ.</p>.<p><strong>ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು: ವೀರೇಂದ್ರರ ಕರೆ</strong></p>.<p><strong>ಮೈಸೂರು, ಜುಲೈ 5– </strong>ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶಿಸದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಎಚ್ಚರಿಸಿದರು.‘ಶಿಕ್ಷಣ ಕ್ಷೇತ್ರದಲ್ಲಿ ಯಾವಾಗ ರಾಜಕೀಯ ಬರುತ್ತದೋ ಆಗ ಶಿಕ್ಷಣ ಕುಂಠಿತಗೊಳ್ಳುತ್ತದೆ’ ಎಂದರು ಅವರು.</p>.<p>‘ಆದ್ದರಿಂದ ಶಿಕ್ಷಣ ರಾಜಕಾರಣಿಗಳ ಕೈಗೆ ಹೋಗದ ಹಾಗೆ ನೋಡಿಕೊಳ್ಳಬೇಕು. ಹಾಗೆ ಆದಾಗ ಮಾತ್ರ ಶಿಕ್ಷಣದ ಬೆಳವಣಿಗೆ ಸುಸೂತ್ರವಾಗಿ ಆಗುತ್ತದೆ’ ಎಂದೂ ಅವರು ಹೇಳಿದರು.</p>.<p><strong>ಬಿ.ಎಸ್ಸಿ; 10ರಲ್ಲಿ 9 ರ್ಯಾಂಕ್ ನ್ಯಾಷನಲ್ ಕಾಲೇಜಿಗೆ</strong></p>.<p><strong>ಬೆಂಗಳೂರು, ಜುಲೈ 5–</strong> 1969ರಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪದವಿ ಪರೀಕ್ಷೆಯ 10 ರ್ಯಾಂಕುಗಳಲ್ಲಿ ನ್ಯಾಷನಲ್ ಕಾಲೇಜ್ ಪ್ರಥಮ ರ್ಯಾಂಕೂ ಸೇರಿ ಒಟ್ಟು 9 ರ್ಯಾಂಕ್ಗಳನ್ನು ಪಡೆದು ವಿಕ್ರಮ ಸ್ಥಾಪಿಸಿದೆ.</p>.<p>ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಇಷ್ಟು ಸಂಖ್ಯೆಯಲ್ಲಿ ರ್ಯಾಂಕುಗಳನ್ನು ಒಂದು ಕಾಲೇಜ್ ಪಡೆದಿರುವುದು ಇದೇ ಪ್ರಥಮ. 10 ರ್ಯಾಂಕುಗಳಲ್ಲಿ ಏಳನೇ ರ್ಯಾಂಕನ್ನು ಸೆಂಟ್ ಜೋಸೆಫ್ ಕಾಲೇಜ್ ಗಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಲಂಗಾಣ ಸದಸ್ಯರಿಂದ ಆಂಧ್ರ ಕಾಂಗ್ರೆಸ್ ಶಾಸಕ ಪಕ್ಷದ ಸಭೆಗೆ ಬಹಿಷ್ಕಾರ</strong></p>.<p><strong>ಹೈದರಾಬಾದ್, ಜುಲೈ 5–</strong> ಆಂಧ್ರ ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿ ಅವರ ‘ರಾಜೀನಾಮೆಯನ್ನು’ ಪರಿಶೀಲಿಸುವುದಕ್ಕಾಗಿ ನಾಳೆ ಇಲ್ಲಿ ಸಭೆ ಸೇರಲಿರುವ ಕಾಂಗ್ರೆಸ್ ಶಾಸಕ ಪಕ್ಷದ ಸಭೆಯನ್ನು ಬಹಿಷ್ಕರಿಸಲು ತೆಲಂಗಾಣ ಪ್ರದೇಶದ 38 ಮಂದಿ ಕಾಂಗ್ರೆಸ್ ಶಾಸಕರು ಇಂದು ನಿರ್ಧರಿಸಿದರು.ಇಂದು ಬೆಳಿಗ್ಗೆ ಇಲ್ಲಿ ನಡೆದ ಶಾಸಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತೆಂದು ಗೊತ್ತಾಗಿದೆ.</p>.<p>ಈ ಬೆಳಿಗ್ಗೆ ನಡೆದ ಸಭೆಯಲ್ಲಿ ಆಂಧ್ರ ವಿಧಾನ ಸಭೆಯ 30 ಮಂದಿ ಸದಸ್ಯರೂ ಮತ್ತು ವಿಧಾನ ಪರಿಷತ್ತಿನ 8 ಮಂದಿ ಸದಸ್ಯರೂ ಈ ಸಭೆಯಲ್ಲಿ ಭಾಗವಹಿಸಿದ್ದರೆಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ವೃತ್ತಗಳು ತಿಳಿಸಿವೆ.</p>.<p><strong>ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು: ವೀರೇಂದ್ರರ ಕರೆ</strong></p>.<p><strong>ಮೈಸೂರು, ಜುಲೈ 5– </strong>ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶಿಸದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಇಲ್ಲಿ ಎಚ್ಚರಿಸಿದರು.‘ಶಿಕ್ಷಣ ಕ್ಷೇತ್ರದಲ್ಲಿ ಯಾವಾಗ ರಾಜಕೀಯ ಬರುತ್ತದೋ ಆಗ ಶಿಕ್ಷಣ ಕುಂಠಿತಗೊಳ್ಳುತ್ತದೆ’ ಎಂದರು ಅವರು.</p>.<p>‘ಆದ್ದರಿಂದ ಶಿಕ್ಷಣ ರಾಜಕಾರಣಿಗಳ ಕೈಗೆ ಹೋಗದ ಹಾಗೆ ನೋಡಿಕೊಳ್ಳಬೇಕು. ಹಾಗೆ ಆದಾಗ ಮಾತ್ರ ಶಿಕ್ಷಣದ ಬೆಳವಣಿಗೆ ಸುಸೂತ್ರವಾಗಿ ಆಗುತ್ತದೆ’ ಎಂದೂ ಅವರು ಹೇಳಿದರು.</p>.<p><strong>ಬಿ.ಎಸ್ಸಿ; 10ರಲ್ಲಿ 9 ರ್ಯಾಂಕ್ ನ್ಯಾಷನಲ್ ಕಾಲೇಜಿಗೆ</strong></p>.<p><strong>ಬೆಂಗಳೂರು, ಜುಲೈ 5–</strong> 1969ರಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಪದವಿ ಪರೀಕ್ಷೆಯ 10 ರ್ಯಾಂಕುಗಳಲ್ಲಿ ನ್ಯಾಷನಲ್ ಕಾಲೇಜ್ ಪ್ರಥಮ ರ್ಯಾಂಕೂ ಸೇರಿ ಒಟ್ಟು 9 ರ್ಯಾಂಕ್ಗಳನ್ನು ಪಡೆದು ವಿಕ್ರಮ ಸ್ಥಾಪಿಸಿದೆ.</p>.<p>ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಇಷ್ಟು ಸಂಖ್ಯೆಯಲ್ಲಿ ರ್ಯಾಂಕುಗಳನ್ನು ಒಂದು ಕಾಲೇಜ್ ಪಡೆದಿರುವುದು ಇದೇ ಪ್ರಥಮ. 10 ರ್ಯಾಂಕುಗಳಲ್ಲಿ ಏಳನೇ ರ್ಯಾಂಕನ್ನು ಸೆಂಟ್ ಜೋಸೆಫ್ ಕಾಲೇಜ್ ಗಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>