<p><strong>ಮೊರಾರ್ಜಿ ಉಪವಾಸ ಅಂತ್ಯ; ಜೂನ್ನಲ್ಲಿ ಗುರಾತ್ ಚುನಾವಣೆ</strong></p>.<p><strong>ನವದೆಹಲಿ, ಏ. 13–</strong> ಗುಜರಾತ್ ವಿಧಾನಸಭೆಗೆ ಜೂನ್ 7ರಂದು ಅಥವಾ ಆ ಸುಮಾರಿಗೆ ಚುನಾವಣೆ ನಡೆಸುವುದಾಗಿ ಪ್ರಧಾನಿಯಿಂದ ಪತ್ರ ಬಂದ ನಂತರ ಇಂದು ಸಂಜೆ 5 ಗಂಟೆಗೆ ಸಂಸ್ಥಾ ಕಾಂಗ್ರೆಸ್ ನಾಯಕ ಮೊರಾರ್ಜಿ ದೇಸಾಯಿ ತಮ್ಮ ನಿರಶನ ಅಂತ್ಯಗೊಳಿಸಿದರು.</p>.<p>ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ನೀಡಿದ ನಿಂಬೆಹಣ್ಣಿನ ಪಾನಕ ಕುಡಿದು 79 ವರ್ಷದ ಮೊರಾರ್ಜಿ ಅವರು, ವಿರೋಧ ಪಕ್ಷದ ಮತ್ತು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಿರಶನ ಮುರಿದರು.</p>.<p>ಸಂಜೆ 4ರ ಸಮಯದಲ್ಲಿ ಅವರಿಗೆ ಪ್ರಧಾನಿಯ ಪತ್ರ ತಲುಪಿಸಲಾಯಿತು. ನಂತರ ‘ಮೊರಾರ್ಜಿ ಭಾಯಿ ಜಿಂದಾ ಬಾದ್’ ಘೋಷಣೆಗಳ ನಡುವೆ ಅವರು ಮೂಸಂಬಿ ಹಣ್ಣಿನ ರಸ್ವನ್ನು ಕುಡಿದರು.</p>.<p>ಚರಣ್ಸಿಂಗ್, ಪಿಲೂಮೋದಿ, ಪಿ.ಕೆ.ದೇವ್, ಸಮರ್ಗುಹಾ, ಬಿಜುಪಟ್ನಾಯಕ್, ತ್ರಿದಿಬ್ ಚೌಧುರಿ, ನಿರೇನ್ ಘೋಷ್, ಮನುಭಾಯಿ ಪಟೇಲ್, ರಾಜನಾರಾಯಣ್, ಎಸ್.ಎನ್.ಮಿಶ್ರಾ, ಅಶೋಕ ಮೆಹ್ತಾ, ಮೋಹನ್ ಧಾರಿಯಾ ನಂದಾ, ಚಂದ್ರಶೇಖರ್, ಅದ್ವಾನಿ, ಕಾಮರಾಜ್ ಮುಂತಾದವರು ಈ ಸಮಯದಲ್ಲಿ ಹಾಜರಿದ್ದು, ಹರ್ಷ ವ್ಯಕ್ತಪಡಿಸಿದರು.</p>.<p><strong>ಜಲವಿವಾದ ಇತ್ಯರ್ಥಕ್ಕೆ ಕಾಲಮಿತಿ ಅಸಾಧ್ಯ</strong></p>.<p><strong>ನವದೆಹಲಿ,</strong> ಏ. 13– ಯಾವುದೇ ಅಂತರರಾಜ್ಯ ನದಿ ಜಲ ವಿವಾದವನ್ನು ಮಧ್ಯಸ್ಥಿಕೆಯಿಂದ ಇತ್ಯರ್ಥಪಡಿಸಲು 3 ವರ್ಷಗಳ ಕಾಲ ಮಿತಿ ಇರಬೇಕೆಂದೂ, ಅನಂತರ ಅದನ್ನು ನ್ಯಾಯಮಂಡಳಿಯೊಂದರಿಂದ ಕಡ್ಡಾಯ ಪಂಚಾಯ್ತಿಗಾಗಿ ಒಪ್ಪಿಸಬೇಕೆಂದೂ ಆಡಳಿತ ಸುಧಾರಣಾ ಆಯೋಗ ಮಾಡಿದ್ದ ಶಿಫಾರಸನ್ನು ಸರ್ಕಾರ ತಿರಸ್ಕರಿಸಿದೆ.</p>.<p>ಅಂತಹ ಯಾವುದೇ ಕಾಲಮಿತಿಯನ್ನು ನಿಗದಿ ಮಾಡುವುದು ‘ಕಾರ್ಯ ಸಾಧ್ಯವಾಗುವುದಿಲ್ಲ’ ಎಂಬ ಅಭಿಪ್ರಾಯವನ್ನು ಸರ್ಕಾರ ತಳೆದಿದೆ.</p>.<p>ಕೇಂದ್ರ– ರಾಜ್ಯ ಬಾಂಧವ್ಯ ಕುರಿತ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಈ ಶಿಫಾರಸನ್ನು ಮಾಡಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊರಾರ್ಜಿ ಉಪವಾಸ ಅಂತ್ಯ; ಜೂನ್ನಲ್ಲಿ ಗುರಾತ್ ಚುನಾವಣೆ</strong></p>.<p><strong>ನವದೆಹಲಿ, ಏ. 13–</strong> ಗುಜರಾತ್ ವಿಧಾನಸಭೆಗೆ ಜೂನ್ 7ರಂದು ಅಥವಾ ಆ ಸುಮಾರಿಗೆ ಚುನಾವಣೆ ನಡೆಸುವುದಾಗಿ ಪ್ರಧಾನಿಯಿಂದ ಪತ್ರ ಬಂದ ನಂತರ ಇಂದು ಸಂಜೆ 5 ಗಂಟೆಗೆ ಸಂಸ್ಥಾ ಕಾಂಗ್ರೆಸ್ ನಾಯಕ ಮೊರಾರ್ಜಿ ದೇಸಾಯಿ ತಮ್ಮ ನಿರಶನ ಅಂತ್ಯಗೊಳಿಸಿದರು.</p>.<p>ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ನೀಡಿದ ನಿಂಬೆಹಣ್ಣಿನ ಪಾನಕ ಕುಡಿದು 79 ವರ್ಷದ ಮೊರಾರ್ಜಿ ಅವರು, ವಿರೋಧ ಪಕ್ಷದ ಮತ್ತು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಿರಶನ ಮುರಿದರು.</p>.<p>ಸಂಜೆ 4ರ ಸಮಯದಲ್ಲಿ ಅವರಿಗೆ ಪ್ರಧಾನಿಯ ಪತ್ರ ತಲುಪಿಸಲಾಯಿತು. ನಂತರ ‘ಮೊರಾರ್ಜಿ ಭಾಯಿ ಜಿಂದಾ ಬಾದ್’ ಘೋಷಣೆಗಳ ನಡುವೆ ಅವರು ಮೂಸಂಬಿ ಹಣ್ಣಿನ ರಸ್ವನ್ನು ಕುಡಿದರು.</p>.<p>ಚರಣ್ಸಿಂಗ್, ಪಿಲೂಮೋದಿ, ಪಿ.ಕೆ.ದೇವ್, ಸಮರ್ಗುಹಾ, ಬಿಜುಪಟ್ನಾಯಕ್, ತ್ರಿದಿಬ್ ಚೌಧುರಿ, ನಿರೇನ್ ಘೋಷ್, ಮನುಭಾಯಿ ಪಟೇಲ್, ರಾಜನಾರಾಯಣ್, ಎಸ್.ಎನ್.ಮಿಶ್ರಾ, ಅಶೋಕ ಮೆಹ್ತಾ, ಮೋಹನ್ ಧಾರಿಯಾ ನಂದಾ, ಚಂದ್ರಶೇಖರ್, ಅದ್ವಾನಿ, ಕಾಮರಾಜ್ ಮುಂತಾದವರು ಈ ಸಮಯದಲ್ಲಿ ಹಾಜರಿದ್ದು, ಹರ್ಷ ವ್ಯಕ್ತಪಡಿಸಿದರು.</p>.<p><strong>ಜಲವಿವಾದ ಇತ್ಯರ್ಥಕ್ಕೆ ಕಾಲಮಿತಿ ಅಸಾಧ್ಯ</strong></p>.<p><strong>ನವದೆಹಲಿ,</strong> ಏ. 13– ಯಾವುದೇ ಅಂತರರಾಜ್ಯ ನದಿ ಜಲ ವಿವಾದವನ್ನು ಮಧ್ಯಸ್ಥಿಕೆಯಿಂದ ಇತ್ಯರ್ಥಪಡಿಸಲು 3 ವರ್ಷಗಳ ಕಾಲ ಮಿತಿ ಇರಬೇಕೆಂದೂ, ಅನಂತರ ಅದನ್ನು ನ್ಯಾಯಮಂಡಳಿಯೊಂದರಿಂದ ಕಡ್ಡಾಯ ಪಂಚಾಯ್ತಿಗಾಗಿ ಒಪ್ಪಿಸಬೇಕೆಂದೂ ಆಡಳಿತ ಸುಧಾರಣಾ ಆಯೋಗ ಮಾಡಿದ್ದ ಶಿಫಾರಸನ್ನು ಸರ್ಕಾರ ತಿರಸ್ಕರಿಸಿದೆ.</p>.<p>ಅಂತಹ ಯಾವುದೇ ಕಾಲಮಿತಿಯನ್ನು ನಿಗದಿ ಮಾಡುವುದು ‘ಕಾರ್ಯ ಸಾಧ್ಯವಾಗುವುದಿಲ್ಲ’ ಎಂಬ ಅಭಿಪ್ರಾಯವನ್ನು ಸರ್ಕಾರ ತಳೆದಿದೆ.</p>.<p>ಕೇಂದ್ರ– ರಾಜ್ಯ ಬಾಂಧವ್ಯ ಕುರಿತ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಈ ಶಿಫಾರಸನ್ನು ಮಾಡಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>