<p><strong>ಹೆಸರು ಸಾಗರ– ನೀರಿಗೆ ಬರ</strong></p>.<p>ಚಿತ್ರದುರ್ಗ, ಜೂನ್ 11– ಈಚೀಚೆಗೆ ಅದೊಂದು ‘ಮರೀಚಿಕೆ’ ಆಗಿದೆ. ನೀರಿಗಾಗಿ ನಿರ್ಮಾಣವಾದ ಕಟ್ಟೆ. ಮುಕ್ಕಾಲು ಶತಮಾನದ ಹಿಂದೆ ಹಂಚಿಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. ನೀರು ಸಾಕಾಗಿತ್ತು. ಬೆಳೆವ ಬಯಲು ಬೆಳೆಯಿತು, ಬಂಜರಾಯಿತು.</p>.<p>ಜಿಲ್ಲೆಯ ವಾಣಿವಿಲಾಸ ಸಾಗರ ಸುಮಾರು ಮೂರು ದಶಕಗಳಿಂದ ಇದ್ದೂ ಇಲ್ಲದಂತಾಗಿದೆ. ಕಟ್ಟೆ ಇದೆ, ಸಾಕಷ್ಟು ನೀರಿಲ್ಲ. ಈಗ ನೀರನ್ನೂ ತುಂಬುವ ಪ್ರಯತ್ನ. ಹಿರಿಯೂರು ತಾಲ್ಲೂಕಿನ ರೈತರಲ್ಲಿ ಮತ್ತೆ ಆಶಾಭಾವನೆಯನ್ನು ಮೂಡಿಸಿದೆ.</p>.<p><strong>ತೈಲ ರಾಷ್ಟ್ರಗಳಿಗೆ ರಾಜ್ಯದಿಂದ ಮಾಂಸ ರಫ್ತಿಗೆ ಯೋಜನೆ</strong></p>.<p>ಬೆಂಗಳೂರು, ಜೂನ್ 11– ರಾಜ್ಯದಿಂದ ಪರ್ಷಿಯನ್ ಖಾರಿ ರಾಷ್ಟ್ರಗಳಿಗೆ ಮಾಂಸ ರಫ್ತು ಮಾಡಲು ಪರಿಶೀಲಿಸಲಾಗುತ್ತಿದೆ.</p>.<p>ರಾಜ್ಯದಲ್ಲಿ ಆ ಬಗ್ಗೆ ಪರಿಶೀಲಿಸಲು ಇತ್ತೀಚೆಗೆ ಪ್ರವಾಸ ಮಾಡಿದ ವಿಶ್ವಸಂಸ್ಥೆ ತಜ್ಞರ ತಂಡವೊಂದು ಯೋಜನಾ ವರದಿಯೊಂದನ್ನು ಸಿದ್ಧಪಡಿಸಲಿದೆ ಎಂದು ಕೃಷಿ ಸಚಿವ ಎನ್. ಚಿಕ್ಕೇಗೌಡ ಅವರು ಮಂಗಳವಾರ ಇಲ್ಲಿ ತಿಳಿಸಿದರು.</p>.<p>ಬಂಡೂರು ಜಾತಿ ಕುರಿ ಮಾಂಸಕ್ಕೆ ಹೆಚ್ಚು ಬೇಡಿಕೆ ಇದೆಯೆಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಸರು ಸಾಗರ– ನೀರಿಗೆ ಬರ</strong></p>.<p>ಚಿತ್ರದುರ್ಗ, ಜೂನ್ 11– ಈಚೀಚೆಗೆ ಅದೊಂದು ‘ಮರೀಚಿಕೆ’ ಆಗಿದೆ. ನೀರಿಗಾಗಿ ನಿರ್ಮಾಣವಾದ ಕಟ್ಟೆ. ಮುಕ್ಕಾಲು ಶತಮಾನದ ಹಿಂದೆ ಹಂಚಿಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು. ನೀರು ಸಾಕಾಗಿತ್ತು. ಬೆಳೆವ ಬಯಲು ಬೆಳೆಯಿತು, ಬಂಜರಾಯಿತು.</p>.<p>ಜಿಲ್ಲೆಯ ವಾಣಿವಿಲಾಸ ಸಾಗರ ಸುಮಾರು ಮೂರು ದಶಕಗಳಿಂದ ಇದ್ದೂ ಇಲ್ಲದಂತಾಗಿದೆ. ಕಟ್ಟೆ ಇದೆ, ಸಾಕಷ್ಟು ನೀರಿಲ್ಲ. ಈಗ ನೀರನ್ನೂ ತುಂಬುವ ಪ್ರಯತ್ನ. ಹಿರಿಯೂರು ತಾಲ್ಲೂಕಿನ ರೈತರಲ್ಲಿ ಮತ್ತೆ ಆಶಾಭಾವನೆಯನ್ನು ಮೂಡಿಸಿದೆ.</p>.<p><strong>ತೈಲ ರಾಷ್ಟ್ರಗಳಿಗೆ ರಾಜ್ಯದಿಂದ ಮಾಂಸ ರಫ್ತಿಗೆ ಯೋಜನೆ</strong></p>.<p>ಬೆಂಗಳೂರು, ಜೂನ್ 11– ರಾಜ್ಯದಿಂದ ಪರ್ಷಿಯನ್ ಖಾರಿ ರಾಷ್ಟ್ರಗಳಿಗೆ ಮಾಂಸ ರಫ್ತು ಮಾಡಲು ಪರಿಶೀಲಿಸಲಾಗುತ್ತಿದೆ.</p>.<p>ರಾಜ್ಯದಲ್ಲಿ ಆ ಬಗ್ಗೆ ಪರಿಶೀಲಿಸಲು ಇತ್ತೀಚೆಗೆ ಪ್ರವಾಸ ಮಾಡಿದ ವಿಶ್ವಸಂಸ್ಥೆ ತಜ್ಞರ ತಂಡವೊಂದು ಯೋಜನಾ ವರದಿಯೊಂದನ್ನು ಸಿದ್ಧಪಡಿಸಲಿದೆ ಎಂದು ಕೃಷಿ ಸಚಿವ ಎನ್. ಚಿಕ್ಕೇಗೌಡ ಅವರು ಮಂಗಳವಾರ ಇಲ್ಲಿ ತಿಳಿಸಿದರು.</p>.<p>ಬಂಡೂರು ಜಾತಿ ಕುರಿ ಮಾಂಸಕ್ಕೆ ಹೆಚ್ಚು ಬೇಡಿಕೆ ಇದೆಯೆಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>