ಸಂಸ್ಥಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪಿ.ವೆಂಕಟಸುಬ್ಬಯ್ಯನವರು ಇಲ್ಲಿ ಇಂದು ಈ ವಿಚಾರವನ್ನು ವ್ಯಂಗ್ಯವಾಗಿ ಪ್ರಸ್ತಾಪಿಸಿ, ‘ಕೇಂದ್ರ ಗೃಹ ಸಚಿವರಾಗಿದ್ದಾಗ ಚವಾಣರು ಭಾರಿ ಪ್ರತಿಷ್ಠೆ ಮತ್ತು ಜನಪ್ರಿಯತೆ ಹೊಂದಿದ್ದರು. ಆದರೆ, ಹಿಂಬಡ್ತಿಯ ನಂತರವೂ ಇಂದಿರಾಗೆ ಸೇವಾಕರ್ತರಾಗಿ ಉಳಿಯಲು ನಿರ್ಧರಿಸಿ ಅದನ್ನು ಕಳೆದುಕೊಂಡಿದ್ದಾರೆ’ ಎಂದರು.