<p><strong>ಜಾತಿ–ಸಮಾಜ ಸೂತ್ರ ಆಧರಿಸಿ ಹಿಂದುಳಿದವರ ವರ್ಗೀಕರಣಕ್ಕೆ ಒತ್ತಾಯ</strong></p>.<p><strong>ಬೆಂಗಳೂರು, ನ. 8–</strong> ಹಿಂದುಳಿದ ವರ್ಗದವರು ಯಾರು ಎಂಬುದನ್ನು ನಿರ್ಧರಿಸಲು ಆರ್ಥಿಕ ಸ್ಥಿತಿಗತಿಗಳ ಆಧಾರ ಅನುಸರಿಸುವ ಬದಲು ‘ದೇಶದ ಪರಿಸ್ಥಿತಿಗೆ ಅನುಗುಣವಾದ ಜಾತಿ ಮತ್ತು ಸಮಾಜ ಸೂತ್ರವನ್ನು’ ತಕ್ಷಣ ಜಾರಿಗೆ ತರಬೇಕು ಎಂದು ರಾಜ್ಯದ ದುರ್ಬಲ ವರ್ಗಗಳ ಪ್ರತಿನಿಧಿಗಳ ಸಮ್ಮೇಳನವು ಸರ್ಕಾರಕ್ಕೆ ಕರೆ ನೀಡಿದೆ.</p>.<p>ಸಂವಿಧಾನಗಳ ಪ್ರಕಾರ ಸೌಕರ್ಯ, ಸವಲತ್ತು ದೊರೆಯಬೇಕಾಗಿರುವ ರಾಜ್ಯದ ಹಿಂದುಳಿದ ವರ್ಗದ ಜನರಿಗೆ ರಾಜ್ಯದಲ್ಲಿ ಈಗ ಅನುಸರಣೆಯಾಗುತ್ತಿರುವ ಆರ್ಥಿಕ ಸ್ಥಿತಿಗತಿಯ ಸೂತ್ರದಿಂದ ಅಪಾರವಾಗಿ ಹಾನಿ ತಟ್ಟಿದೆ ಎಂದು ಸಮ್ಮೇಳನವು ಅಂಗೀಕರಿಸಿರುವ ನಿರ್ಣಯವು ಹೇಳಿದೆ.</p>.<p><strong>ಮಾಯವಾದ ‘ಯಶ, ಬಲ’</strong></p>.<p><strong>ಹೈದರಾಬಾದ್, ನ. 8– </strong>ಕೇಂದ್ರ ಹಣಕಾಸು ಸಚಿವ ಚವಾಣ್ರು ತಮ್ಮ ಹೆಸರಿನಲ್ಲಿರುವ ಯಶ ಮತ್ತು ಬಲ ಎರಡನ್ನೂ ಕಳೆದುಕೊಂಡ ವ್ಯಕ್ತಿ ಈಗ. (ಚವಾಣರ ಪೂರ್ತಿ ಹೆಸರು: ಯಶವಂತರಾವ್ ಬಲವಂತರಾವ್ ಚವಾಣ್).</p>.<p>ಸಂಸ್ಥಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪಿ.ವೆಂಕಟಸುಬ್ಬಯ್ಯನವರು ಇಲ್ಲಿ ಇಂದು ಈ ವಿಚಾರವನ್ನು ವ್ಯಂಗ್ಯವಾಗಿ ಪ್ರಸ್ತಾಪಿಸಿ, ‘ಕೇಂದ್ರ ಗೃಹ ಸಚಿವರಾಗಿದ್ದಾಗ ಚವಾಣರು ಭಾರಿ ಪ್ರತಿಷ್ಠೆ ಮತ್ತು ಜನಪ್ರಿಯತೆ ಹೊಂದಿದ್ದರು. ಆದರೆ, ಹಿಂಬಡ್ತಿಯ ನಂತರವೂ ಇಂದಿರಾಗೆ ಸೇವಾಕರ್ತರಾಗಿ ಉಳಿಯಲು ನಿರ್ಧರಿಸಿ ಅದನ್ನು ಕಳೆದುಕೊಂಡಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾತಿ–ಸಮಾಜ ಸೂತ್ರ ಆಧರಿಸಿ ಹಿಂದುಳಿದವರ ವರ್ಗೀಕರಣಕ್ಕೆ ಒತ್ತಾಯ</strong></p>.<p><strong>ಬೆಂಗಳೂರು, ನ. 8–</strong> ಹಿಂದುಳಿದ ವರ್ಗದವರು ಯಾರು ಎಂಬುದನ್ನು ನಿರ್ಧರಿಸಲು ಆರ್ಥಿಕ ಸ್ಥಿತಿಗತಿಗಳ ಆಧಾರ ಅನುಸರಿಸುವ ಬದಲು ‘ದೇಶದ ಪರಿಸ್ಥಿತಿಗೆ ಅನುಗುಣವಾದ ಜಾತಿ ಮತ್ತು ಸಮಾಜ ಸೂತ್ರವನ್ನು’ ತಕ್ಷಣ ಜಾರಿಗೆ ತರಬೇಕು ಎಂದು ರಾಜ್ಯದ ದುರ್ಬಲ ವರ್ಗಗಳ ಪ್ರತಿನಿಧಿಗಳ ಸಮ್ಮೇಳನವು ಸರ್ಕಾರಕ್ಕೆ ಕರೆ ನೀಡಿದೆ.</p>.<p>ಸಂವಿಧಾನಗಳ ಪ್ರಕಾರ ಸೌಕರ್ಯ, ಸವಲತ್ತು ದೊರೆಯಬೇಕಾಗಿರುವ ರಾಜ್ಯದ ಹಿಂದುಳಿದ ವರ್ಗದ ಜನರಿಗೆ ರಾಜ್ಯದಲ್ಲಿ ಈಗ ಅನುಸರಣೆಯಾಗುತ್ತಿರುವ ಆರ್ಥಿಕ ಸ್ಥಿತಿಗತಿಯ ಸೂತ್ರದಿಂದ ಅಪಾರವಾಗಿ ಹಾನಿ ತಟ್ಟಿದೆ ಎಂದು ಸಮ್ಮೇಳನವು ಅಂಗೀಕರಿಸಿರುವ ನಿರ್ಣಯವು ಹೇಳಿದೆ.</p>.<p><strong>ಮಾಯವಾದ ‘ಯಶ, ಬಲ’</strong></p>.<p><strong>ಹೈದರಾಬಾದ್, ನ. 8– </strong>ಕೇಂದ್ರ ಹಣಕಾಸು ಸಚಿವ ಚವಾಣ್ರು ತಮ್ಮ ಹೆಸರಿನಲ್ಲಿರುವ ಯಶ ಮತ್ತು ಬಲ ಎರಡನ್ನೂ ಕಳೆದುಕೊಂಡ ವ್ಯಕ್ತಿ ಈಗ. (ಚವಾಣರ ಪೂರ್ತಿ ಹೆಸರು: ಯಶವಂತರಾವ್ ಬಲವಂತರಾವ್ ಚವಾಣ್).</p>.<p>ಸಂಸ್ಥಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪಿ.ವೆಂಕಟಸುಬ್ಬಯ್ಯನವರು ಇಲ್ಲಿ ಇಂದು ಈ ವಿಚಾರವನ್ನು ವ್ಯಂಗ್ಯವಾಗಿ ಪ್ರಸ್ತಾಪಿಸಿ, ‘ಕೇಂದ್ರ ಗೃಹ ಸಚಿವರಾಗಿದ್ದಾಗ ಚವಾಣರು ಭಾರಿ ಪ್ರತಿಷ್ಠೆ ಮತ್ತು ಜನಪ್ರಿಯತೆ ಹೊಂದಿದ್ದರು. ಆದರೆ, ಹಿಂಬಡ್ತಿಯ ನಂತರವೂ ಇಂದಿರಾಗೆ ಸೇವಾಕರ್ತರಾಗಿ ಉಳಿಯಲು ನಿರ್ಧರಿಸಿ ಅದನ್ನು ಕಳೆದುಕೊಂಡಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>