ನವದೆಹಲಿ, ಏ. 3– ದಾರಿದ್ರ್ಯ ನಿವಾರಿಸುವುದಾಗಿ ನೀಡಿರುವ ಪ್ರಮಾಣ ಪೂರೈಸಲು ‘ಸಂವಿಧಾನ, ಶಾಸನ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುವುದಾಗಿ ವ್ಯಾಪಕ ಯೋಜನೆಗಳನ್ನು ಸಿದ್ಧಪಡಿಸುವಂತೆ’ ಅಖಿಲ ಭಾರತ ಆಡಳಿತ ಕಾಂಗ್ರೆಸ್ ಸಮಿತಿಯು ಇಂದು ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ.
‘ಜನತೆಗೆ ಪ್ರಮಾಣ’ ನೀಡುವ ತನ್ನ ನಿರ್ಣಯವೊಂದರಲ್ಲಿ ಸಮಿತಿಯು ಈಚಿನ ಚುನಾವಣೆ ಪ್ರಣಾಳಿಕೆ ಒಳಗೊಂಡಿದ್ದ ಕಾರ್ಯಕ್ರಮಗಳನ್ನು ಈಡೇರಿಸುವುದಾಗಿ ತಿಳಿಸಿದೆ.