<p><strong>ಭಾರತ– ಪಾಕ್ ಭಿನ್ನಾಭಿಪ್ರಾಯ ನಿವಾರಣೆಗೆ ಮಾತುಕತೆ ಮದ್ದು, ಯುದ್ಧವಲ್ಲ: ಯಹ್ಯಾಖಾನ್</strong></p>.<p>ಪ್ಯಾರಿಸ್, ಅ. 19– ಪಾಕಿಸ್ತಾನ ಮತ್ತು ಭಾರತದ ನಡುವಣ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಬೇಕೇ ಹೊರತು ಯುದ್ಧದಿಂದಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷ ಯಹ್ಯಾಖಾನ್ರವರು ಇಲ್ಲಿ ಇಂದು ಪ್ರಕಟವಾದ ಸಂದರ್ಶನ ವೊಂದರಲ್ಲಿ ತಿಳಿಸಿದರು.</p>.<p>‘ಯುದ್ಧವು ಎರಡೂ ರಾಷ್ಟ್ರಗಳ ಜನತೆಯ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಿಂದ ನಿರಾಶ್ರಿತರ ಸಮಸ್ಯೆ ಬಗೆಹರಿಯದು’ ಎಂದು ಅವರು ಫ್ರೆಂಚ್ ದಿನಪತ್ರಿಕೆ ‘ಲೇಮಾಂಡ್’ಗೆ ತಿಳಿಸಿದರು.</p>.<p><strong>ಪಕ್ಷದ ಒಗ್ಗಟ್ಟಿನಲ್ಲಿ ತಮಗೆ ಸಂಶಯವಿಲ್ಲ ಎಂದು ಪ್ರಧಾನಿ ಸ್ಪಷ್ಟನೆ</strong></p>.<p>ನವದೆಹಲಿ, ಅ. 19– ಮುಂಬರುವ ಚುನಾವಣೆಗಳನ್ನು ಎದುರಿಸಲು ಮಾತ್ರವೇ ಅಲ್ಲದೇ, ಪಕ್ಷದ ವಾಗ್ದಾನಗಳನ್ನು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದರಲ್ಲಿ ತಮ್ಮ ಪಕ್ಷ ಐಕ್ಯಮತದಿಂದ ಇರುತ್ತದೆಂಬುದರಲ್ಲಿ ತಮಗೆ ಎಳ್ಳಷ್ಟೂ, ಸಂಶಯವಿಲ್ಲವೆಂದೂ ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಿದ್ದ ಪ್ರಧಾನಿ ಅವರು, ‘ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವೈಯಕ್ತಿಕ ಆಕಾಂಕ್ಷಿಗಳು ಮತ್ತುವಿರೋಧಿ ಗುಂಪುಗಳು ಇದ್ದೇ ಇರುತ್ತವೆ. ಅಲ್ಲದೆ ಇವು ಪ್ರಜಾಸತ್ತೆ ವ್ಯವಸ್ಥೆಯ ಅಂಗ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತ– ಪಾಕ್ ಭಿನ್ನಾಭಿಪ್ರಾಯ ನಿವಾರಣೆಗೆ ಮಾತುಕತೆ ಮದ್ದು, ಯುದ್ಧವಲ್ಲ: ಯಹ್ಯಾಖಾನ್</strong></p>.<p>ಪ್ಯಾರಿಸ್, ಅ. 19– ಪಾಕಿಸ್ತಾನ ಮತ್ತು ಭಾರತದ ನಡುವಣ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಬೇಕೇ ಹೊರತು ಯುದ್ಧದಿಂದಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷ ಯಹ್ಯಾಖಾನ್ರವರು ಇಲ್ಲಿ ಇಂದು ಪ್ರಕಟವಾದ ಸಂದರ್ಶನ ವೊಂದರಲ್ಲಿ ತಿಳಿಸಿದರು.</p>.<p>‘ಯುದ್ಧವು ಎರಡೂ ರಾಷ್ಟ್ರಗಳ ಜನತೆಯ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಿಂದ ನಿರಾಶ್ರಿತರ ಸಮಸ್ಯೆ ಬಗೆಹರಿಯದು’ ಎಂದು ಅವರು ಫ್ರೆಂಚ್ ದಿನಪತ್ರಿಕೆ ‘ಲೇಮಾಂಡ್’ಗೆ ತಿಳಿಸಿದರು.</p>.<p><strong>ಪಕ್ಷದ ಒಗ್ಗಟ್ಟಿನಲ್ಲಿ ತಮಗೆ ಸಂಶಯವಿಲ್ಲ ಎಂದು ಪ್ರಧಾನಿ ಸ್ಪಷ್ಟನೆ</strong></p>.<p>ನವದೆಹಲಿ, ಅ. 19– ಮುಂಬರುವ ಚುನಾವಣೆಗಳನ್ನು ಎದುರಿಸಲು ಮಾತ್ರವೇ ಅಲ್ಲದೇ, ಪಕ್ಷದ ವಾಗ್ದಾನಗಳನ್ನು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದರಲ್ಲಿ ತಮ್ಮ ಪಕ್ಷ ಐಕ್ಯಮತದಿಂದ ಇರುತ್ತದೆಂಬುದರಲ್ಲಿ ತಮಗೆ ಎಳ್ಳಷ್ಟೂ, ಸಂಶಯವಿಲ್ಲವೆಂದೂ ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಿದ್ದ ಪ್ರಧಾನಿ ಅವರು, ‘ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವೈಯಕ್ತಿಕ ಆಕಾಂಕ್ಷಿಗಳು ಮತ್ತುವಿರೋಧಿ ಗುಂಪುಗಳು ಇದ್ದೇ ಇರುತ್ತವೆ. ಅಲ್ಲದೆ ಇವು ಪ್ರಜಾಸತ್ತೆ ವ್ಯವಸ್ಥೆಯ ಅಂಗ’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>