<p><strong>ಬಂಗ್ಲಾ ಸಮಸ್ಯೆ: ಶೀಘ್ರ ರಾಜಕೀಯ ಪರಿಹಾರಕ್ಕೆ ಇಂದಿರಾ–ಟಿಟೋ ಕರೆ</strong></p>.<p>ನವದೆಹಲಿ, ಅ. 20– ಬಂಗ್ಲಾದೇಶದ ಸಮಸ್ಯೆ ಬಗ್ಗೆ ಪೂರ್ವ ಬಂಗಾಳದ ಜನರ ಚುನಾಯಿತ ಪ್ರತಿನಿಧಿಗಳಿಗೆ ಒಪ್ಪಿಗೆಯಾಗುವಂಥ ರಾಜಕೀಯ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯವೆಂದು ಇಂದು ಬೆಳಿಗ್ಗೆ ಇಲ್ಲಿ ನೀಡಿದ ಭಾರತ– ಯುಗೋಸ್ಲಾವಿಯಾ ಜಂಟಿ ಪ್ರಕಟಣೆ ಕರೆ ಇತ್ತಿದೆ.</p>.<p>ಈ ರಾಜಕೀಯ ಪರಿಹಾರವು ಪೂರ್ವ ಬಂಗಾಳದ ಜನರ ಆಸೆ– ಆಕಾಂಕ್ಷೆಗಳು ಹಕ್ಕುಗಳು ಹಾಗೂ ಕಾನೂನು ಬದ್ಧ ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕೆಂದೂ ಆ ಪ್ರಕಟಣೆ ತಿಳಿಸಿದೆ.</p>.<p>ಬಂಗ್ಲಾ ದೇಶದ ನಿರಾಶ್ರಿತರ ಸಮಸ್ಯೆಗೆ ಪರಿಹಾರ ಹುಡುಕುವುದನ್ನು ಮುಂದಕ್ಕೆ ಹಾಕಿದರೆ ’ಪರಿಸ್ಥಿತಿಯ ತೀವ್ರ ಉಲ್ಬಣಕ್ಕೆ’ ಅವಕಾಶವಾಗುವ ಸಂಭವವಿದೆ ಎಂದು ಎಚ್ಚರಿಸಿದೆ.</p>.<p><strong>ಉಕ್ಕು ಕಾರ್ಖಾನೆಯಿಂದ ಬಾರಿ ಲಾಭ ಗಳಿಕೆ ನಿರೀಕ್ಷೆ</strong></p>.<p>ಬೆಂಗಳೂರು, ಅ. 20– ಇದುವರೆಗೆ ನಷ್ಟದಲ್ಲಿ ನಡೆಯುತ್ತಿದ್ದ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಈ ವರ್ಷ ಒಂದು ಕೋಟಿ ರೂ. ಲಾಭ ಸಂಪಾದಿಸುವ ನಿರೀಕ್ಷೆ ಇದೆ.</p>.<p>ಕಳೆದ ಆರು ತಿಂಗಳ ಅವಧಿಯಲ್ಲಿ ಕಾರ್ಖಾನೆ 35 ಲಕ್ಷ ಲಾಭ ಗಳಿಸಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಅದು ಎರಡು ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿತ್ತು.</p>.<p>ಮಂಗಳೂರಿನ ರಾಸಾಯನಿಕ ಗೊಬ್ಬರ ಕಾರ್ಖಾನೆಯಲ್ಲಿ ಇನ್ನು ಒಂದೆರಡು ತಿಂಗಳಲ್ಲಿ ಯಂತ್ರಗಳ ಸ್ಥಾಪನೆ ಕಾರ್ಯಾರಂಭವಾಗುವನಿರೀಕ್ಷೆ ಇದೆ.</p>.<p>ಸರ್ಕಾರಿ ಉದ್ಯಮಗಳಲ್ಲಿ ಮಂಡ್ಯದ ಮೈಸೂರು ಅಸಿಟೇಟ್ ಆಂಡ್ ಕೆಮಿಕಲ್ಸ್ ಸಂಸ್ಥೆಯನ್ನುಳಿದು ಇತರ ಕಾರ್ಖಾನೆಗಳು ಲಾಭ ಗಳಿಸುವ ಹಾದಿಯಲ್ಲಿ ಮುನ್ನಡೆ ಸಾಧಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗ್ಲಾ ಸಮಸ್ಯೆ: ಶೀಘ್ರ ರಾಜಕೀಯ ಪರಿಹಾರಕ್ಕೆ ಇಂದಿರಾ–ಟಿಟೋ ಕರೆ</strong></p>.<p>ನವದೆಹಲಿ, ಅ. 20– ಬಂಗ್ಲಾದೇಶದ ಸಮಸ್ಯೆ ಬಗ್ಗೆ ಪೂರ್ವ ಬಂಗಾಳದ ಜನರ ಚುನಾಯಿತ ಪ್ರತಿನಿಧಿಗಳಿಗೆ ಒಪ್ಪಿಗೆಯಾಗುವಂಥ ರಾಜಕೀಯ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯವೆಂದು ಇಂದು ಬೆಳಿಗ್ಗೆ ಇಲ್ಲಿ ನೀಡಿದ ಭಾರತ– ಯುಗೋಸ್ಲಾವಿಯಾ ಜಂಟಿ ಪ್ರಕಟಣೆ ಕರೆ ಇತ್ತಿದೆ.</p>.<p>ಈ ರಾಜಕೀಯ ಪರಿಹಾರವು ಪೂರ್ವ ಬಂಗಾಳದ ಜನರ ಆಸೆ– ಆಕಾಂಕ್ಷೆಗಳು ಹಕ್ಕುಗಳು ಹಾಗೂ ಕಾನೂನು ಬದ್ಧ ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕೆಂದೂ ಆ ಪ್ರಕಟಣೆ ತಿಳಿಸಿದೆ.</p>.<p>ಬಂಗ್ಲಾ ದೇಶದ ನಿರಾಶ್ರಿತರ ಸಮಸ್ಯೆಗೆ ಪರಿಹಾರ ಹುಡುಕುವುದನ್ನು ಮುಂದಕ್ಕೆ ಹಾಕಿದರೆ ’ಪರಿಸ್ಥಿತಿಯ ತೀವ್ರ ಉಲ್ಬಣಕ್ಕೆ’ ಅವಕಾಶವಾಗುವ ಸಂಭವವಿದೆ ಎಂದು ಎಚ್ಚರಿಸಿದೆ.</p>.<p><strong>ಉಕ್ಕು ಕಾರ್ಖಾನೆಯಿಂದ ಬಾರಿ ಲಾಭ ಗಳಿಕೆ ನಿರೀಕ್ಷೆ</strong></p>.<p>ಬೆಂಗಳೂರು, ಅ. 20– ಇದುವರೆಗೆ ನಷ್ಟದಲ್ಲಿ ನಡೆಯುತ್ತಿದ್ದ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಈ ವರ್ಷ ಒಂದು ಕೋಟಿ ರೂ. ಲಾಭ ಸಂಪಾದಿಸುವ ನಿರೀಕ್ಷೆ ಇದೆ.</p>.<p>ಕಳೆದ ಆರು ತಿಂಗಳ ಅವಧಿಯಲ್ಲಿ ಕಾರ್ಖಾನೆ 35 ಲಕ್ಷ ಲಾಭ ಗಳಿಸಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಅದು ಎರಡು ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿತ್ತು.</p>.<p>ಮಂಗಳೂರಿನ ರಾಸಾಯನಿಕ ಗೊಬ್ಬರ ಕಾರ್ಖಾನೆಯಲ್ಲಿ ಇನ್ನು ಒಂದೆರಡು ತಿಂಗಳಲ್ಲಿ ಯಂತ್ರಗಳ ಸ್ಥಾಪನೆ ಕಾರ್ಯಾರಂಭವಾಗುವನಿರೀಕ್ಷೆ ಇದೆ.</p>.<p>ಸರ್ಕಾರಿ ಉದ್ಯಮಗಳಲ್ಲಿ ಮಂಡ್ಯದ ಮೈಸೂರು ಅಸಿಟೇಟ್ ಆಂಡ್ ಕೆಮಿಕಲ್ಸ್ ಸಂಸ್ಥೆಯನ್ನುಳಿದು ಇತರ ಕಾರ್ಖಾನೆಗಳು ಲಾಭ ಗಳಿಸುವ ಹಾದಿಯಲ್ಲಿ ಮುನ್ನಡೆ ಸಾಧಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>