ಇಂದು ಆಯವ್ಯಯ ಮಂಡನೆಗೆ ಅವಕಾಶ ನೀಡದಂತೆ ಮಾಡಲು ಹಕ್ಕಿನ ಲೋಪ, ನಿಲುವಳಿ ಸೂಚನೆ, ಲೆಕ್ಕವಿಲ್ಲದಷ್ಟು ಕ್ರಿಯಾಲೋಪಗಳನ್ನು ಎತ್ತಿ ಹೆಜ್ಜೆ ಹೆಜ್ಜೆಗೂ ಅಡ್ಡಿ ತರಲು ಯತ್ನಿಸಿದ ವಿರೋಧ ಪಕ್ಷದ, ಮುಖ್ಯವಾಗಿ ಆಡಳಿತ ಕಾಂಗ್ರೆಸ್ಸಿನ ಸದಸ್ಯರ ಗದ್ದಲದ ನಡುವೆ, ಅಧ್ಯಕ್ಷರ ಅನುಮತಿಯ ಪ್ರಕಾರ ಸಚಿವ ಶ್ರೀ ಹೆಗಡೆ ಅವರು ಆಯವ್ಯಯ ಮಂಡಿಸಲು ಸಭೆಯ ಅನುಮತಿ ಕೋರಿದರು. ಪ್ರತಿಭಟನೆಯ ನಡುವೆ ಆಡಳಿತ ಕಾಂಗ್ರೆಸ್ ಸದಸ್ಯರು ‘ನಾಚಿಕೆಗೇಡು’ ಎಂದು ಸತತವಾಗಿ ಕೂಗಲಾರಂಭಿಸಿದರು.