<p><strong>ಕಂಗು, ತೆಂಗಿನ ಮರಗಳಿಗೆ ಶುಷ್ಕ ಶೀತ ಹವೆಯ ಮಾರಕ ಪ್ರಹಾರ</strong></p>.<p><strong>ಬೆಂಗಳೂರು, ಜ. 5– </strong>ಡಿಸೆಂಬರ್ ತಿಂಗಳ ಮೊದಲ ಭಾಗದಲ್ಲಿ ರಾಜ್ಯದ ಪಶ್ಚಿಮ ಹಾಗೂ ದಕ್ಷಿಣದ ಜಿಲ್ಲೆಗಳನ್ನು ನಡುಗಿಸಿಹೋದ ‘ಶುಷ್ಕ ಶೀತ ಹವೆ’ಯು ಅಲ್ಲಿನ ಸಹಸ್ರಾರು ಎಕರೆಗಳಲ್ಲಿ ಕಂಗು ಹಾಗೂ ತೆಂಗಿನ ಮರಗಳನ್ನು ಸಾಯಿಸತೊಡಗಿದೆ.</p>.<p>‘ಮುಖ್ಯವಾಗಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರು ಮುಂದಿನ ಎರಡು ಮೂರು ವರ್ಷಗಳವರೆಗೆ ಅಡಿಕೆ ಬೆಳೆ ನೋಡುವಂತಿಲ್ಲ. ತೋಟಗಳನ್ನು ಉಳಿಸಿ, ಪುನರುಜ್ಜೀವನಗೊಳಿಸುವುದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ’ ಎಂದು ಆ ಪ್ರದೇಶಗಳಲ್ಲಿ ತಿರುಗಾಡಿ ಬಂದ ತೋಟಗಾರಿಕೆ ಇಲಾಖೆ ಡೈರೆಕ್ಟರ್ ಡಾ. ಎಂ.ಎಚ್.ಮರಿಗೌಡರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ಗ್ರಾಮ ಪ್ರದೇಶಗಳಲ್ಲಿ ನಿರುದ್ಯೋಗ ನಿವಾರಣೆಗೆ ತೀವ್ರ ಕಾರ್ಯಕ್ರಮ</strong></p>.<p><strong>ನವದೆಹಲಿ, ಜ. 5– </strong>ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗ ನಿವಾರಣೆಗಾಗಿ ತತ್ಕ್ಷಣವೇ 50 ಕೋಟಿ ರೂ. ವೆಚ್ಚದ ತೀವ್ರ ಕಾರ್ಯಕ್ರಮ ಕೈಗೊಳ್ಳಲು ಕೇಂದ್ರ ಸಂಪುಟ ಇಂದು ನಿರ್ಧರಿಸಿತು.</p>.<p>ವರ್ಷಂಪ್ರತಿ 50 ಕೋಟಿ ರೂ. ವೆಚ್ಚ ಮಾಡುವ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಉದ್ಯೋಗವಿಲ್ಲದವರ ಸಮಸ್ಯೆಯನ್ನೂ ಬಗೆಹರಿಸಲು ಪ್ರಯತ್ನಿಸಲಾಗುವುದು. ಈ ಕಾರ್ಯಕ್ರಮದಿಂದ 4 ಲಕ್ಷ 20 ಸಾವಿರ ಮಂದಿಗೆ ಪ್ರಯೋಜನವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಗು, ತೆಂಗಿನ ಮರಗಳಿಗೆ ಶುಷ್ಕ ಶೀತ ಹವೆಯ ಮಾರಕ ಪ್ರಹಾರ</strong></p>.<p><strong>ಬೆಂಗಳೂರು, ಜ. 5– </strong>ಡಿಸೆಂಬರ್ ತಿಂಗಳ ಮೊದಲ ಭಾಗದಲ್ಲಿ ರಾಜ್ಯದ ಪಶ್ಚಿಮ ಹಾಗೂ ದಕ್ಷಿಣದ ಜಿಲ್ಲೆಗಳನ್ನು ನಡುಗಿಸಿಹೋದ ‘ಶುಷ್ಕ ಶೀತ ಹವೆ’ಯು ಅಲ್ಲಿನ ಸಹಸ್ರಾರು ಎಕರೆಗಳಲ್ಲಿ ಕಂಗು ಹಾಗೂ ತೆಂಗಿನ ಮರಗಳನ್ನು ಸಾಯಿಸತೊಡಗಿದೆ.</p>.<p>‘ಮುಖ್ಯವಾಗಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರು ಮುಂದಿನ ಎರಡು ಮೂರು ವರ್ಷಗಳವರೆಗೆ ಅಡಿಕೆ ಬೆಳೆ ನೋಡುವಂತಿಲ್ಲ. ತೋಟಗಳನ್ನು ಉಳಿಸಿ, ಪುನರುಜ್ಜೀವನಗೊಳಿಸುವುದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ’ ಎಂದು ಆ ಪ್ರದೇಶಗಳಲ್ಲಿ ತಿರುಗಾಡಿ ಬಂದ ತೋಟಗಾರಿಕೆ ಇಲಾಖೆ ಡೈರೆಕ್ಟರ್ ಡಾ. ಎಂ.ಎಚ್.ಮರಿಗೌಡರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p><strong>ಗ್ರಾಮ ಪ್ರದೇಶಗಳಲ್ಲಿ ನಿರುದ್ಯೋಗ ನಿವಾರಣೆಗೆ ತೀವ್ರ ಕಾರ್ಯಕ್ರಮ</strong></p>.<p><strong>ನವದೆಹಲಿ, ಜ. 5– </strong>ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗ ನಿವಾರಣೆಗಾಗಿ ತತ್ಕ್ಷಣವೇ 50 ಕೋಟಿ ರೂ. ವೆಚ್ಚದ ತೀವ್ರ ಕಾರ್ಯಕ್ರಮ ಕೈಗೊಳ್ಳಲು ಕೇಂದ್ರ ಸಂಪುಟ ಇಂದು ನಿರ್ಧರಿಸಿತು.</p>.<p>ವರ್ಷಂಪ್ರತಿ 50 ಕೋಟಿ ರೂ. ವೆಚ್ಚ ಮಾಡುವ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಉದ್ಯೋಗವಿಲ್ಲದವರ ಸಮಸ್ಯೆಯನ್ನೂ ಬಗೆಹರಿಸಲು ಪ್ರಯತ್ನಿಸಲಾಗುವುದು. ಈ ಕಾರ್ಯಕ್ರಮದಿಂದ 4 ಲಕ್ಷ 20 ಸಾವಿರ ಮಂದಿಗೆ ಪ್ರಯೋಜನವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>