<h3><strong>ಬೆಲೆ ಸ್ಥಿರತೆ ಸಾಧನೆಗೆ ಉತ್ತಮ ವಾತಾವರಣ </strong></h3>.<p>ನವದೆಹಲಿ, ಏ. 28– ಕಳೆದ ಆರು ತಿಂಗಳಲ್ಲಿ ಸಾಮಾನ್ಯ ಬೆಲೆ ಮಟ್ಟ ಇಳಿಮುಖವಾಗುತ್ತಿದ್ದರೂ ಬೆಲೆ ಸ್ಥಿರತೆ ಸಾಧಿಸಲು ಮುಂದಿನ ವರ್ಷದಲ್ಲಿ ದೃಢ ಪ್ರಯತ್ನಗಳು ಅವಶ್ಯವೆಂದು ಅಧಿಕೃತ ವಲಯಗಳು ಭಾವಿಸಿವೆ. </p>.<p>ರಾಷ್ಟ್ರದಲ್ಲಿನ ಬೆಲೆ ಪರಿಸ್ಥಿತಿ ಕುರಿತು ಹಣಕಾಸು ಸಚಿವ ಶಾಖೆ ಈಚೆಗೆ ಸಿದ್ಧಪಡಿಸಿದ ಒಂದು ವರದಿಯಲ್ಲಿ ಒಟ್ಟು ಸರಬರಾಜು ಮತ್ತು ಬೇಡಿಕೆ ನಡುವಣ ಅಂತರ ನಿವಾರಣೆಯಾಗುವವರೆಗೆ ಹಣದುಬ್ಬರ ನಿರೋಧಕ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕಾದುದು ಅಗತ್ಯವೆಂದು ತಿಳಿಸಿದೆ. </p>.<h3><strong>ಕನ್ನಡ ಶಾಲೆಗಳನ್ನು ಮುಚ್ಚಲು ಕೇರಳ ಸರ್ಕಾರ ಆಜ್ಞೆ ಮಾಡಿಲ್ಲ </strong></h3>.<p>ಮಂಗಳೂರು, ಏ. 28 – ಕಾಸರಗೋಡು ತಾಲ್ಲೂಕಿನ ಕನ್ನಡ ಶಾಲೆಗಳನ್ನು ಮುಚ್ಚಲು ಕೇರಳ ಸರ್ಕಾರ ಯಾವ ಆಜ್ಞೆಯನ್ನೂ ಹೊರಡಿಸಿಲ್ಲವೆಂದು ಕೇರಳ ವಿಧಾನಸಭೆಯ ಮಂಜೇಶ್ವರ ಕ್ಷೇತ್ರದ ಸದಸ್ಯ ಎಂ.ರಾಮಪ್ಪ ಅವರು ಇಂದು ಇಲ್ಲಿ ತಿಳಿಸಿದರು. </p>.<p>ಈ ಬಗ್ಗೆ ಕರ್ನಾಟಕದ ವಿಧಾನ ಮಂಡಲದಲ್ಲಿ ವ್ಯಕ್ತಪಡಿಸಲಾದ ಕಳವಳ ಮತ್ತು ಪತ್ರಿಕಾ ವರದಿಗಳನ್ನು ಕೇರಳದ ಮುಖ್ಯಮಂತ್ರಿ ಅಚ್ಯುತಮೆನನ್ ಅವರ ಗಮನಕ್ಕೆ ತಂದಾಗ ಅವರು ವರದಿಗಳನ್ನು ನಿರಾಕರಿಸಿದರೆಂದು ರಾಮಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. </p>.<p>‘ಕಾಸರಗೋಡು ತಲ್ಲೂಕಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಬದಲು ಕಳೆದ ವರ್ಷ ಕನ್ನಡ ಮಾಧ್ಯಮದ ಐದು ಪ್ರೌಢ ಶಾಲೆಗಳು ಮತ್ತು ಎರಡು ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ’ ಎಂದು ಅಚ್ಯುತಮೆನನ್ ಅವರು ಹೇಳಿದರೆಂದು ಅವರು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h3><strong>ಬೆಲೆ ಸ್ಥಿರತೆ ಸಾಧನೆಗೆ ಉತ್ತಮ ವಾತಾವರಣ </strong></h3>.<p>ನವದೆಹಲಿ, ಏ. 28– ಕಳೆದ ಆರು ತಿಂಗಳಲ್ಲಿ ಸಾಮಾನ್ಯ ಬೆಲೆ ಮಟ್ಟ ಇಳಿಮುಖವಾಗುತ್ತಿದ್ದರೂ ಬೆಲೆ ಸ್ಥಿರತೆ ಸಾಧಿಸಲು ಮುಂದಿನ ವರ್ಷದಲ್ಲಿ ದೃಢ ಪ್ರಯತ್ನಗಳು ಅವಶ್ಯವೆಂದು ಅಧಿಕೃತ ವಲಯಗಳು ಭಾವಿಸಿವೆ. </p>.<p>ರಾಷ್ಟ್ರದಲ್ಲಿನ ಬೆಲೆ ಪರಿಸ್ಥಿತಿ ಕುರಿತು ಹಣಕಾಸು ಸಚಿವ ಶಾಖೆ ಈಚೆಗೆ ಸಿದ್ಧಪಡಿಸಿದ ಒಂದು ವರದಿಯಲ್ಲಿ ಒಟ್ಟು ಸರಬರಾಜು ಮತ್ತು ಬೇಡಿಕೆ ನಡುವಣ ಅಂತರ ನಿವಾರಣೆಯಾಗುವವರೆಗೆ ಹಣದುಬ್ಬರ ನಿರೋಧಕ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕಾದುದು ಅಗತ್ಯವೆಂದು ತಿಳಿಸಿದೆ. </p>.<h3><strong>ಕನ್ನಡ ಶಾಲೆಗಳನ್ನು ಮುಚ್ಚಲು ಕೇರಳ ಸರ್ಕಾರ ಆಜ್ಞೆ ಮಾಡಿಲ್ಲ </strong></h3>.<p>ಮಂಗಳೂರು, ಏ. 28 – ಕಾಸರಗೋಡು ತಾಲ್ಲೂಕಿನ ಕನ್ನಡ ಶಾಲೆಗಳನ್ನು ಮುಚ್ಚಲು ಕೇರಳ ಸರ್ಕಾರ ಯಾವ ಆಜ್ಞೆಯನ್ನೂ ಹೊರಡಿಸಿಲ್ಲವೆಂದು ಕೇರಳ ವಿಧಾನಸಭೆಯ ಮಂಜೇಶ್ವರ ಕ್ಷೇತ್ರದ ಸದಸ್ಯ ಎಂ.ರಾಮಪ್ಪ ಅವರು ಇಂದು ಇಲ್ಲಿ ತಿಳಿಸಿದರು. </p>.<p>ಈ ಬಗ್ಗೆ ಕರ್ನಾಟಕದ ವಿಧಾನ ಮಂಡಲದಲ್ಲಿ ವ್ಯಕ್ತಪಡಿಸಲಾದ ಕಳವಳ ಮತ್ತು ಪತ್ರಿಕಾ ವರದಿಗಳನ್ನು ಕೇರಳದ ಮುಖ್ಯಮಂತ್ರಿ ಅಚ್ಯುತಮೆನನ್ ಅವರ ಗಮನಕ್ಕೆ ತಂದಾಗ ಅವರು ವರದಿಗಳನ್ನು ನಿರಾಕರಿಸಿದರೆಂದು ರಾಮಪ್ಪ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. </p>.<p>‘ಕಾಸರಗೋಡು ತಲ್ಲೂಕಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಬದಲು ಕಳೆದ ವರ್ಷ ಕನ್ನಡ ಮಾಧ್ಯಮದ ಐದು ಪ್ರೌಢ ಶಾಲೆಗಳು ಮತ್ತು ಎರಡು ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ’ ಎಂದು ಅಚ್ಯುತಮೆನನ್ ಅವರು ಹೇಳಿದರೆಂದು ಅವರು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>