<p><strong>ನವದೆಹಲಿ, ಏ. 10–</strong> ಸೋಮವಾರದಿಂದ ಉಪವಾಸ ನಡೆಸುತ್ತಿರುವ ಮೊರಾರ್ಜಿ ದೇಸಾಯಿ ಅವರ ಮೈ ತೂಕ ಇಂದು ಮಧ್ಯಾಹ್ನದ ಹೊತ್ತಿಗೆ ಒಟ್ಟು 4 ಕಿಲೊ ಗ್ರಾಂ (ಎಂಟೂ ಮುಕ್ಕಾಲು ಪೌಂಡ್ಗೂ ಸ್ವಲ್ಪ ಹೆಚ್ಚು) ಇಳಿಯಿತೆಂದು ವೈದ್ಯರು ತಿಳಿಸಿದ್ದಾರೆ.</p><p>ಕಳೆದ 24 ಗಂಟೆಗಳಲ್ಲಿ ಅವರು ಒಂದು ಕಿಲೊ ಗ್ರಾಂನಷ್ಟು (ಸುಮಾರು ಎರಡು ಪೌಂಡ್ ಮೂರು ಔನ್ಸ್) ಇಳಿದುಹೋದರು.</p><p>ಮೊರಾರ್ಜಿಯವರು ಇಂದು ಸ್ವಲ್ಪ ಬಳಲಿದಂತೆ ಕಂಡರು. ಆದರೂ ಅವರು ಹಸನ್ಮುಖರಾಗಿದ್ದರು.</p><p>ಮೇ ಅಂತ್ಯದೊಳಗಾಗಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಹಾಗೂ ತುರ್ತು ಪರಿಸ್ಥಿತಿ ರದ್ದುಗೊಳಿಸುವಂತೆ ಒತ್ತಾಯಿಸಿ ಮೊರಾರ್ಜಿ ಅವರು ಈ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.</p><p><strong>ಪರಿಹಾರ ಸಾಧ್ಯ:</strong> ಸಂಸ್ಥಾ ಕಾಂಗ್ರೆಸ್ ನಾಯಕ ಮೊರಾರ್ಜಿ ದೇಸಾಯಿ ‘ಹಟ ಹಿಡಿಯದಿರುವಂತೆ’ ವಿರೋಧಿ ನಾಯಕರು ಅವರ ಮನಸ್ಸನ್ನು ಒಲಿಸಿಕೊಳ್ಳುವುದಾದರೆ ಮೊರಾರ್ಜಿ ಅವರ ನಿರಶನ ಸತ್ಯಾಗ್ರಹ ನಿಲ್ಲಿಸುವ ಮಾರ್ಗ ಹುಡುಕಲು ಸಾಧ್ಯವೆನ್ನುವ ಸೂಚನೆಯನ್ನು ಕೇಂದ್ರ ಗೃಹಮಂತ್ರಿ ಬ್ರಹ್ಮಾನಂದ ರೆಡ್ಡಿ ಅವರು ಇಂದು ಲೋಕಸಭೆಯಲ್ಲಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಏ. 10–</strong> ಸೋಮವಾರದಿಂದ ಉಪವಾಸ ನಡೆಸುತ್ತಿರುವ ಮೊರಾರ್ಜಿ ದೇಸಾಯಿ ಅವರ ಮೈ ತೂಕ ಇಂದು ಮಧ್ಯಾಹ್ನದ ಹೊತ್ತಿಗೆ ಒಟ್ಟು 4 ಕಿಲೊ ಗ್ರಾಂ (ಎಂಟೂ ಮುಕ್ಕಾಲು ಪೌಂಡ್ಗೂ ಸ್ವಲ್ಪ ಹೆಚ್ಚು) ಇಳಿಯಿತೆಂದು ವೈದ್ಯರು ತಿಳಿಸಿದ್ದಾರೆ.</p><p>ಕಳೆದ 24 ಗಂಟೆಗಳಲ್ಲಿ ಅವರು ಒಂದು ಕಿಲೊ ಗ್ರಾಂನಷ್ಟು (ಸುಮಾರು ಎರಡು ಪೌಂಡ್ ಮೂರು ಔನ್ಸ್) ಇಳಿದುಹೋದರು.</p><p>ಮೊರಾರ್ಜಿಯವರು ಇಂದು ಸ್ವಲ್ಪ ಬಳಲಿದಂತೆ ಕಂಡರು. ಆದರೂ ಅವರು ಹಸನ್ಮುಖರಾಗಿದ್ದರು.</p><p>ಮೇ ಅಂತ್ಯದೊಳಗಾಗಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಹಾಗೂ ತುರ್ತು ಪರಿಸ್ಥಿತಿ ರದ್ದುಗೊಳಿಸುವಂತೆ ಒತ್ತಾಯಿಸಿ ಮೊರಾರ್ಜಿ ಅವರು ಈ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.</p><p><strong>ಪರಿಹಾರ ಸಾಧ್ಯ:</strong> ಸಂಸ್ಥಾ ಕಾಂಗ್ರೆಸ್ ನಾಯಕ ಮೊರಾರ್ಜಿ ದೇಸಾಯಿ ‘ಹಟ ಹಿಡಿಯದಿರುವಂತೆ’ ವಿರೋಧಿ ನಾಯಕರು ಅವರ ಮನಸ್ಸನ್ನು ಒಲಿಸಿಕೊಳ್ಳುವುದಾದರೆ ಮೊರಾರ್ಜಿ ಅವರ ನಿರಶನ ಸತ್ಯಾಗ್ರಹ ನಿಲ್ಲಿಸುವ ಮಾರ್ಗ ಹುಡುಕಲು ಸಾಧ್ಯವೆನ್ನುವ ಸೂಚನೆಯನ್ನು ಕೇಂದ್ರ ಗೃಹಮಂತ್ರಿ ಬ್ರಹ್ಮಾನಂದ ರೆಡ್ಡಿ ಅವರು ಇಂದು ಲೋಕಸಭೆಯಲ್ಲಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>