<p><strong>ನವದೆಹಲಿ, ಜೂನ್ 2–</strong> ಜಿನೀವಾ ಸಮ್ಮೇಳನದ ಸದಸ್ಯತ್ವ ವ್ಯಾಪ್ತಿ ಹಿಗ್ಗಿಸಿ ಅಲಿಪ್ತ ರಾಷ್ಟ್ರಗಳಿಗೂ ಪ್ರಾತಿನಿಧ್ಯ ನೀಡಿದಲ್ಲಿ ಪಶ್ಚಿಮ ಏಷ್ಯಾ ಸಮಸ್ಯೆಗಳ ನ್ಯಾಯಸಮ್ಮತ ಇತ್ಯರ್ಥಕ್ಕೆ ಭಾರತ ರಚನಾತ್ಮಕ ಕಾಣಿಕೆ ನೀಡುವುದೆಂದು ವಿದೇಶಾಂಗ ವ್ಯವಹಾರಗಳ ಸಚಿವ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ತಿಳಿಸಿದರು.</p><p>ಈಜಿಪ್ಟ್, ಸಿರಿಯಾದಲ್ಲಿ ಪ್ರವಾಸ ಮುಗಿಸಿ ಇಂದು ವಾಪಸಾದ ಅವರು, ಸುದ್ದಿಗಾರರ ಜತೆ ಮಾತನಾಡುತ್ತ ಈ ಎರಡೂ ರಾಷ್ಟ್ರಗಳ ನಾಯಕರ ಜೊತೆ ಮುಕ್ತ ಮನಸ್ಸಿನ ಚರ್ಚೆ ನಡೆಸಿದ್ದಾಗಿ ಹೇಳಿದರು.</p><p>ಪಶ್ಚಿಮ ಏಷ್ಯಾ ಸಮಸ್ಯೆ ತುಂಬ ಜಟಿಲವಾದದ್ದೆಂದು ನುಡಿದ ಅವರು, ಜಿನೀವಾ ಸಮ್ಮೇಳನದ ಸದಸ್ಯತ್ವ ವ್ಯಾಪ್ತಿ ಹಿಗ್ಗಬೇಕೆಂದು ಈಜಿಪ್ಟ್, ಸಿರಿಯಾ ಅಭಿಪ್ರಾಯಪಟ್ಟಿವೆ ಎಂದರು.</p><p><strong>ಪ್ರಾಚ್ಯವಸ್ತು ಕಳವು ತಡೆಗೆ ಕ್ರಮ</strong></p><p><strong>ಬೆಂಗಳೂರು, ಜೂನ್ 2–</strong> ಹೊಸದಾಗಿ ರೂಪುಗೊಂಡ ಪ್ರಾಚ್ಯವಸ್ತು ಸಂಶೋಧನಾ ವಲಯವು ಕರ್ನಾಟಕದಲ್ಲಿ ಪ್ರಾಚ್ಯವಸ್ತುಗಳು ಕಳವಾಗುವುದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು <br>ಕೈಗೊಳ್ಳುವುದಕ್ಕೆ ಅಗ್ರ ಪ್ರಾಶಸ್ತ್ಯ ನೀಡಿದೆ.</p><p>ಬೇರ್ಪಟ್ಟಿರುವ ಶಿಲ್ಪ ಕಲಾಕೃತಿಗಳನ್ನು ಇರಿಸುವುದಕ್ಕಾಗಿ ಗ್ಯಾಲರಿಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಈಗಾಗಲೇ ಐಹೊಳೆ, ಬಾದಾಮಿ ಮತ್ತು ಲಕ್ಕುಂಡಿಯಲ್ಲಿ ಇಂಥ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ ಎಂದು ವಲಯದ ಡೈರೆಕ್ಟರ್ ಎಸ್.ಆರ್.ರಾವ್ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p><p>ಐಹೊಳೆ, ಬಾದಾಮಿ ಮತ್ತು ಲಕ್ಕುಂಡಿಯಲ್ಲಿ ಕೈಗೊಂಡಿರುವ ಕ್ರಮಗಳಿಂದಾಗಿ 500ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳನ್ನು ಸಂರಕ್ಷಿಸಲು ಸಾಧ್ಯವಾಗಿದ್ದು, ಅಲ್ಲಿ ನಿರ್ಮಿಸಲಾದ ಗ್ಯಾಲರಿಗಳನ್ನು ಇಷ್ಟರಲ್ಲೇ ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಾಗುವುದು. ಇದೇ ರೀತಿಯ ಗ್ಯಾಲರಿಗಳನ್ನು ಪಟ್ಟದಕಲ್ಲು ಮತ್ತು ಬೆಳ್ಳಿಗಾಮಿಯಲ್ಲೂ ನಿರ್ಮಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಜೂನ್ 2–</strong> ಜಿನೀವಾ ಸಮ್ಮೇಳನದ ಸದಸ್ಯತ್ವ ವ್ಯಾಪ್ತಿ ಹಿಗ್ಗಿಸಿ ಅಲಿಪ್ತ ರಾಷ್ಟ್ರಗಳಿಗೂ ಪ್ರಾತಿನಿಧ್ಯ ನೀಡಿದಲ್ಲಿ ಪಶ್ಚಿಮ ಏಷ್ಯಾ ಸಮಸ್ಯೆಗಳ ನ್ಯಾಯಸಮ್ಮತ ಇತ್ಯರ್ಥಕ್ಕೆ ಭಾರತ ರಚನಾತ್ಮಕ ಕಾಣಿಕೆ ನೀಡುವುದೆಂದು ವಿದೇಶಾಂಗ ವ್ಯವಹಾರಗಳ ಸಚಿವ ವೈ.ಬಿ. ಚವಾಣ್ ಅವರು ಇಂದು ಇಲ್ಲಿ ತಿಳಿಸಿದರು.</p><p>ಈಜಿಪ್ಟ್, ಸಿರಿಯಾದಲ್ಲಿ ಪ್ರವಾಸ ಮುಗಿಸಿ ಇಂದು ವಾಪಸಾದ ಅವರು, ಸುದ್ದಿಗಾರರ ಜತೆ ಮಾತನಾಡುತ್ತ ಈ ಎರಡೂ ರಾಷ್ಟ್ರಗಳ ನಾಯಕರ ಜೊತೆ ಮುಕ್ತ ಮನಸ್ಸಿನ ಚರ್ಚೆ ನಡೆಸಿದ್ದಾಗಿ ಹೇಳಿದರು.</p><p>ಪಶ್ಚಿಮ ಏಷ್ಯಾ ಸಮಸ್ಯೆ ತುಂಬ ಜಟಿಲವಾದದ್ದೆಂದು ನುಡಿದ ಅವರು, ಜಿನೀವಾ ಸಮ್ಮೇಳನದ ಸದಸ್ಯತ್ವ ವ್ಯಾಪ್ತಿ ಹಿಗ್ಗಬೇಕೆಂದು ಈಜಿಪ್ಟ್, ಸಿರಿಯಾ ಅಭಿಪ್ರಾಯಪಟ್ಟಿವೆ ಎಂದರು.</p><p><strong>ಪ್ರಾಚ್ಯವಸ್ತು ಕಳವು ತಡೆಗೆ ಕ್ರಮ</strong></p><p><strong>ಬೆಂಗಳೂರು, ಜೂನ್ 2–</strong> ಹೊಸದಾಗಿ ರೂಪುಗೊಂಡ ಪ್ರಾಚ್ಯವಸ್ತು ಸಂಶೋಧನಾ ವಲಯವು ಕರ್ನಾಟಕದಲ್ಲಿ ಪ್ರಾಚ್ಯವಸ್ತುಗಳು ಕಳವಾಗುವುದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು <br>ಕೈಗೊಳ್ಳುವುದಕ್ಕೆ ಅಗ್ರ ಪ್ರಾಶಸ್ತ್ಯ ನೀಡಿದೆ.</p><p>ಬೇರ್ಪಟ್ಟಿರುವ ಶಿಲ್ಪ ಕಲಾಕೃತಿಗಳನ್ನು ಇರಿಸುವುದಕ್ಕಾಗಿ ಗ್ಯಾಲರಿಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಈಗಾಗಲೇ ಐಹೊಳೆ, ಬಾದಾಮಿ ಮತ್ತು ಲಕ್ಕುಂಡಿಯಲ್ಲಿ ಇಂಥ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ ಎಂದು ವಲಯದ ಡೈರೆಕ್ಟರ್ ಎಸ್.ಆರ್.ರಾವ್ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p><p>ಐಹೊಳೆ, ಬಾದಾಮಿ ಮತ್ತು ಲಕ್ಕುಂಡಿಯಲ್ಲಿ ಕೈಗೊಂಡಿರುವ ಕ್ರಮಗಳಿಂದಾಗಿ 500ಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳನ್ನು ಸಂರಕ್ಷಿಸಲು ಸಾಧ್ಯವಾಗಿದ್ದು, ಅಲ್ಲಿ ನಿರ್ಮಿಸಲಾದ ಗ್ಯಾಲರಿಗಳನ್ನು ಇಷ್ಟರಲ್ಲೇ ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಾಗುವುದು. ಇದೇ ರೀತಿಯ ಗ್ಯಾಲರಿಗಳನ್ನು ಪಟ್ಟದಕಲ್ಲು ಮತ್ತು ಬೆಳ್ಳಿಗಾಮಿಯಲ್ಲೂ ನಿರ್ಮಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>