<p><strong>ಪಟನಾ, ಜೂನ್ 4–</strong> ಘರ್ವಾನ ಗ್ರಾಮದಲ್ಲಿ ನಕ್ಸಲೀಯರು ಮತ್ತು ಪೊಲೀಸರ ನಡುವೆ ನಡೆದ ಭೀಕರ ಹೋರಾಟದಲ್ಲಿ ಒಟ್ಟು 17 ನಕ್ಸಲೀಯರು ಸತ್ತಿದ್ದಾರೆ. ಹೋರಾಟದಲ್ಲಿ ಇಬ್ಬರು ನಕ್ಸಲೀಯರನ್ನು ಕೈಸೆರೆ ಹಿಡಿಯಲಾಗಿದೆ ಎಂದು ಬಿಹಾರದ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರು ಇಂದು ಇಲ್ಲಿ ತಿಳಿಸಿದ್ದಾರೆ.</p><p>ಪಟನಾ ಜಿಲ್ಲೆಯ ಮಸ್ಸೌರಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟ ಘರ್ವಾನ ಗ್ರಾಮದಲ್ಲಿ ಮಧ್ಯರಾತ್ರಿವರೆಗೂ ಹೋರಾಟ ನಡೆಯಿತು ಎಂದು ಅವರು ಹೇಳಿದರು.</p><p>ಈಗ ಆ ಗ್ರಾಮದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದೂ ಮಿಶ್ರಾ ನುಡಿದರು.</p><p>ಹೋರಾಟದಲ್ಲಿ ಭಾರಿ ಸಾವು– ನೋವು ಉಂಟಾಗಿದ್ದರೂ ಅದಕ್ಕೆ ಲೆಕ್ಕಿಸದೆ ನಕ್ಸಲೀಯರು ಸಮೀಪದ ಗ್ರಾಮದಲ್ಲಿ ಮತ್ತೆ ಗುಂಪುಗೂಡುತ್ತಿದ್ದಾರೆಂದೂ ಅವರನ್ನು ಬಂಧಿಸಲು ಪೊಲೀಸರು <br>ಪ್ರಯತ್ನಿಸುತ್ತಿದ್ದಾರೆಂದೂ ಪಟನಾ ಕಮಿಷನರ್ ಎಫ್. ಅಹ್ಮದ್ ಅವರು ಹೇಳಿದರು.</p><p><strong>ಕಾಫಿ ತೋಟಗಳಲ್ಲಿ ಕೀಟ ಹಾವಳಿ ತಡೆಯಲು ಕ್ರಮ</strong></p><p><strong>ಬೆಂಗಳೂರು, ಜೂನ್ 4–</strong> ವೈನಾಡಿನ ಕಾಫಿ ಎಸ್ಟೇಟುಗಳಲ್ಲಿ ‘ಮಿಲಿ ಬಗ್’ ಕೀಟಗಳ ಹಾವಳಿ ಹೆಚ್ಚಾಗಿರುವುದರಿಂದ ಅದನ್ನು ತಡೆಗಟ್ಟಲು ಸೂಕ್ತ ಕೀಟನಾಶಕಗಳನ್ನು ಬಳಸಲು ಕಾಫಿ ಮಂಡಳಿಯು ಪ್ಲಾಂಟರುಗಳಿಗೆ ಸಲಹೆ ಮಾಡಿದೆ. ಕಾಫಿ ಮಂಡಳಿ ಸಂಶೋಧನಾ ಸಂಸ್ಥೆಯ ಉನ್ನತ ಮಟ್ಟದ ಸಂಶೋಧನಾ ತಂಡವೊಂದು ಇತ್ತೀಚೆಗೆ ಎಸ್ಟೇಟುಗಳಿಗೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟನಾ, ಜೂನ್ 4–</strong> ಘರ್ವಾನ ಗ್ರಾಮದಲ್ಲಿ ನಕ್ಸಲೀಯರು ಮತ್ತು ಪೊಲೀಸರ ನಡುವೆ ನಡೆದ ಭೀಕರ ಹೋರಾಟದಲ್ಲಿ ಒಟ್ಟು 17 ನಕ್ಸಲೀಯರು ಸತ್ತಿದ್ದಾರೆ. ಹೋರಾಟದಲ್ಲಿ ಇಬ್ಬರು ನಕ್ಸಲೀಯರನ್ನು ಕೈಸೆರೆ ಹಿಡಿಯಲಾಗಿದೆ ಎಂದು ಬಿಹಾರದ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರು ಇಂದು ಇಲ್ಲಿ ತಿಳಿಸಿದ್ದಾರೆ.</p><p>ಪಟನಾ ಜಿಲ್ಲೆಯ ಮಸ್ಸೌರಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟ ಘರ್ವಾನ ಗ್ರಾಮದಲ್ಲಿ ಮಧ್ಯರಾತ್ರಿವರೆಗೂ ಹೋರಾಟ ನಡೆಯಿತು ಎಂದು ಅವರು ಹೇಳಿದರು.</p><p>ಈಗ ಆ ಗ್ರಾಮದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದೂ ಮಿಶ್ರಾ ನುಡಿದರು.</p><p>ಹೋರಾಟದಲ್ಲಿ ಭಾರಿ ಸಾವು– ನೋವು ಉಂಟಾಗಿದ್ದರೂ ಅದಕ್ಕೆ ಲೆಕ್ಕಿಸದೆ ನಕ್ಸಲೀಯರು ಸಮೀಪದ ಗ್ರಾಮದಲ್ಲಿ ಮತ್ತೆ ಗುಂಪುಗೂಡುತ್ತಿದ್ದಾರೆಂದೂ ಅವರನ್ನು ಬಂಧಿಸಲು ಪೊಲೀಸರು <br>ಪ್ರಯತ್ನಿಸುತ್ತಿದ್ದಾರೆಂದೂ ಪಟನಾ ಕಮಿಷನರ್ ಎಫ್. ಅಹ್ಮದ್ ಅವರು ಹೇಳಿದರು.</p><p><strong>ಕಾಫಿ ತೋಟಗಳಲ್ಲಿ ಕೀಟ ಹಾವಳಿ ತಡೆಯಲು ಕ್ರಮ</strong></p><p><strong>ಬೆಂಗಳೂರು, ಜೂನ್ 4–</strong> ವೈನಾಡಿನ ಕಾಫಿ ಎಸ್ಟೇಟುಗಳಲ್ಲಿ ‘ಮಿಲಿ ಬಗ್’ ಕೀಟಗಳ ಹಾವಳಿ ಹೆಚ್ಚಾಗಿರುವುದರಿಂದ ಅದನ್ನು ತಡೆಗಟ್ಟಲು ಸೂಕ್ತ ಕೀಟನಾಶಕಗಳನ್ನು ಬಳಸಲು ಕಾಫಿ ಮಂಡಳಿಯು ಪ್ಲಾಂಟರುಗಳಿಗೆ ಸಲಹೆ ಮಾಡಿದೆ. ಕಾಫಿ ಮಂಡಳಿ ಸಂಶೋಧನಾ ಸಂಸ್ಥೆಯ ಉನ್ನತ ಮಟ್ಟದ ಸಂಶೋಧನಾ ತಂಡವೊಂದು ಇತ್ತೀಚೆಗೆ ಎಸ್ಟೇಟುಗಳಿಗೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>