<p><strong>ಫೋರ್ಟ್ಸೈಯದ್, ಜೂನ್ 5–</strong> ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾದತ್ ಅವರು ಇಂದು ಅರಬ್– ಇಸ್ರೇಲ್ ಸಮರದ ಎಂಟನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸೂಯೆಜ್ ಕಾಲುವೆಯನ್ನು ಔಪಚಾರಿಕವಾಗಿ ಮತ್ತೆ ತೆರೆದರು.</p><p>1967ರಲ್ಲಿ ಸಮರ ಆರಂಭ ಕಾಲದಲ್ಲಿ ಮುಚ್ಚಿದ ಈ ಜಲ ಮಾರ್ಗವು ‘ಶಾಂತಿಯ ಉಪನದಿ ಮತ್ತು ಜನತೆಯ ನಡುವೆ ಸಹಕಾರ ಮತ್ತು ಅಭಿವೃದ್ಧಿಯ ಕಾಲುವೆಯಾಗಿದೆ’ ಎಂದು ಸಾದತ್ ಅವರು ತಿಳಿಸಿದರು.</p><p><strong>ಕಳ್ಳಬಟ್ಟಿ ಕುಡಿದು ಸತ್ತವರ ಸಂಖ್ಯೆ 25</strong></p><p><strong>ಮದರಾಸ್, ಜೂನ್ 5–</strong> ಇಲ್ಲಿ ‘ಮಾರಕ ಪಾನೀಯ’ ವಾರ್ನಿಷ್ ಕುಡಿದು ಸತ್ತವರ ಸಂಖ್ಯೆ ಇಂದು 25ಕ್ಕೆ ಏರಿತು.</p><p>ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಇಂದು ಇನ್ನೂ 6 ಮಂದಿ ಸತ್ತರು. ವಿಷ ಮಿಶ್ರಿತ ವಾರ್ನಿಷ್ ಕುಡಿದ 50 ಮಂದಿಯನ್ನು ಮಂಗಳವಾರ ಆಸ್ಪತ್ರೆಗೆ ಸೇರಿಸಲಾಗಿತ್ತು.</p><p>‘ಆರ್.ಎಸ್. ಮಿಲ್ಲಿ’ ಎಂಬ ಹೆಸರಿನ ಕಳ್ಳಬಟ್ಟಿ ಮದ್ಯವನ್ನು ಆಂಧ್ರಪ್ರದೇಶದಿಂದ ಕಳ್ಳತನದಲ್ಲಿ ತರಲಾಗಿತ್ತು. ವಿಷಮಿಶ್ರಿತ ಪಾನೀಯ ಕುಡಿದ ಇನ್ನೂ 19 ಮಂದಿಯನ್ನು ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಫೋರ್ಟ್ಸೈಯದ್, ಜೂನ್ 5–</strong> ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾದತ್ ಅವರು ಇಂದು ಅರಬ್– ಇಸ್ರೇಲ್ ಸಮರದ ಎಂಟನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸೂಯೆಜ್ ಕಾಲುವೆಯನ್ನು ಔಪಚಾರಿಕವಾಗಿ ಮತ್ತೆ ತೆರೆದರು.</p><p>1967ರಲ್ಲಿ ಸಮರ ಆರಂಭ ಕಾಲದಲ್ಲಿ ಮುಚ್ಚಿದ ಈ ಜಲ ಮಾರ್ಗವು ‘ಶಾಂತಿಯ ಉಪನದಿ ಮತ್ತು ಜನತೆಯ ನಡುವೆ ಸಹಕಾರ ಮತ್ತು ಅಭಿವೃದ್ಧಿಯ ಕಾಲುವೆಯಾಗಿದೆ’ ಎಂದು ಸಾದತ್ ಅವರು ತಿಳಿಸಿದರು.</p><p><strong>ಕಳ್ಳಬಟ್ಟಿ ಕುಡಿದು ಸತ್ತವರ ಸಂಖ್ಯೆ 25</strong></p><p><strong>ಮದರಾಸ್, ಜೂನ್ 5–</strong> ಇಲ್ಲಿ ‘ಮಾರಕ ಪಾನೀಯ’ ವಾರ್ನಿಷ್ ಕುಡಿದು ಸತ್ತವರ ಸಂಖ್ಯೆ ಇಂದು 25ಕ್ಕೆ ಏರಿತು.</p><p>ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಇಂದು ಇನ್ನೂ 6 ಮಂದಿ ಸತ್ತರು. ವಿಷ ಮಿಶ್ರಿತ ವಾರ್ನಿಷ್ ಕುಡಿದ 50 ಮಂದಿಯನ್ನು ಮಂಗಳವಾರ ಆಸ್ಪತ್ರೆಗೆ ಸೇರಿಸಲಾಗಿತ್ತು.</p><p>‘ಆರ್.ಎಸ್. ಮಿಲ್ಲಿ’ ಎಂಬ ಹೆಸರಿನ ಕಳ್ಳಬಟ್ಟಿ ಮದ್ಯವನ್ನು ಆಂಧ್ರಪ್ರದೇಶದಿಂದ ಕಳ್ಳತನದಲ್ಲಿ ತರಲಾಗಿತ್ತು. ವಿಷಮಿಶ್ರಿತ ಪಾನೀಯ ಕುಡಿದ ಇನ್ನೂ 19 ಮಂದಿಯನ್ನು ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>