ಮಹಾಜನ್ ಶಿಫಾರಸು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಕರೆ
ಬೆಂಗಳೂರು, ಡಿ. 28– ಕೇಂದ್ರ ಸರ್ಕಾರ ಈಗಲಾದರೂ ‘ತಪ್ಪು ತಿದ್ದಿಕೊಂಡು’ ಮಹಾಜನ್ ಆಯೋಗದ ಶಿಫಾರಸುಗಳನ್ನೊಳಗೊಂಡ ವಿಧೇಯಕವನ್ನು ತಂದು ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಶಿಕ್ಷಣ ಸಚಿವರೂ ಸಭಾ ನಾಯಕರೂ ಆದ ಶ್ರೀ ಕೆ.ವಿ.ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.