<p><strong>ಎಪ್ಪತ್ತರ ದಶಕದಾದ್ಯಂತ ಉಕ್ಕಿನ ತೀವ್ರ ಅಭಾವ<br />ನವದೆಹಲಿ, ಡಿ. 30–</strong> ಎಪ್ಪತ್ತರ ದಶಕದಾದ್ಯಂತ ದೇಶವು ಉಕ್ಕಿನ ತೀವ್ರ ಅಭಾವವನ್ನು ಎದುರಿಸಬೇಕಾಗುವುದೆಂದು ಕೇಂದ್ರ ಸರ್ಕಾರದ ಉಕ್ಕು ಮತ್ತು ಭಾರಿ ಎಂಜಿನಿಯರಿಂಗ್ ಶಾಖೆ ಸಚಿವ ಶ್ರೀ ಬಲಿರಾಂ ಭಗತ್ ಅವರು ಇಂದು ಇಲ್ಲಿ ಹೇಳಿದರು.</p>.<p>ಉಕ್ಕಿನ ಬಗ್ಗೆ ಈಗ ಉಂಟಾಗಿರುವ ಅಭಾವ ತಾತ್ಕಾಲಿಕವಾದುದೇನಲ್ಲ ಎಂಬುದು ರಹಸ್ಯದ ವಿಷಯವೇನಲ್ಲ ಎಂದೂ ಅವರು ಎಂಜಿನಿಯರಿಂಗ್ ರಫ್ತು ಅಭಿವೃದ್ಧಿ ಮಂಡಲಿಯ ಹದಿನೈದನೇ ವಾರ್ಷಿಕ ಸಭೆಯನ್ನು ಉದ್ಘಾಟಿಸುತ್ತಾ ಹೇಳಿದರು.</p>.<p>ಉಕ್ಕಿನ ಅಭಾವದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನೆದುರಿಸಲು ಸರ್ಕಾರ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾರ್ಖಾನೆಗಳು ಸಾಧ್ಯವಾದಷ್ಟು ಉಕ್ಕನ್ನು ತಯಾರಿಸುವಂತೆ ಮಾಡಲಾಗಿದೆ. ಅದೂ ಅಲ್ಲದೆ ಈಗಿರತಕ್ಕ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಸಚಿವರು ಹೇಳಿದರು.</p>.<p><strong>ಭಾರತೀಯ ವಿಜ್ಞಾನ ಕಾಂಗ್ರೆಸ್ ಮಹಾಧಿವೇಶನ: ನಗರದಲ್ಲಿ ಸಿದ್ಧತೆ<br />ಬೆಂಗಳೂರು, ಡಿ. 30–</strong> ಇಪ್ಪತ್ತು ವರ್ಷಗಳ ನಂತರ ಮತ್ತೆ ನಗರದಲ್ಲಿ ಸಮಾವೇಶಗೊಳ್ಳುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ ಮಹಾಧಿವೇಶನಕ್ಕೆ ಸೆಂಟ್ರಲ್ ಕಾಲೇಜು ಆವರಣದಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.</p>.<p>ಪ್ರಪಂಚದ ನಾನಾ ಭಾಗಗಳಿಂದ ವಿಶೇಷ ಆಹ್ವಾನದ ಮೇಲೆ ಆಗಮಿಸಲಿರುವ 30 ಮಂದಿ ವಿಜ್ಞಾನಿಗಳೂ ಸೇರಿ ಸುಮಾರು 3,500 ಮಂದಿ ವಿಜ್ಞಾನದ ವಿವಿಧ ಭಾಗಗಳ ಪ್ರತಿನಿಧಿಗಳು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಪ್ಪತ್ತರ ದಶಕದಾದ್ಯಂತ ಉಕ್ಕಿನ ತೀವ್ರ ಅಭಾವ<br />ನವದೆಹಲಿ, ಡಿ. 30–</strong> ಎಪ್ಪತ್ತರ ದಶಕದಾದ್ಯಂತ ದೇಶವು ಉಕ್ಕಿನ ತೀವ್ರ ಅಭಾವವನ್ನು ಎದುರಿಸಬೇಕಾಗುವುದೆಂದು ಕೇಂದ್ರ ಸರ್ಕಾರದ ಉಕ್ಕು ಮತ್ತು ಭಾರಿ ಎಂಜಿನಿಯರಿಂಗ್ ಶಾಖೆ ಸಚಿವ ಶ್ರೀ ಬಲಿರಾಂ ಭಗತ್ ಅವರು ಇಂದು ಇಲ್ಲಿ ಹೇಳಿದರು.</p>.<p>ಉಕ್ಕಿನ ಬಗ್ಗೆ ಈಗ ಉಂಟಾಗಿರುವ ಅಭಾವ ತಾತ್ಕಾಲಿಕವಾದುದೇನಲ್ಲ ಎಂಬುದು ರಹಸ್ಯದ ವಿಷಯವೇನಲ್ಲ ಎಂದೂ ಅವರು ಎಂಜಿನಿಯರಿಂಗ್ ರಫ್ತು ಅಭಿವೃದ್ಧಿ ಮಂಡಲಿಯ ಹದಿನೈದನೇ ವಾರ್ಷಿಕ ಸಭೆಯನ್ನು ಉದ್ಘಾಟಿಸುತ್ತಾ ಹೇಳಿದರು.</p>.<p>ಉಕ್ಕಿನ ಅಭಾವದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನೆದುರಿಸಲು ಸರ್ಕಾರ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾರ್ಖಾನೆಗಳು ಸಾಧ್ಯವಾದಷ್ಟು ಉಕ್ಕನ್ನು ತಯಾರಿಸುವಂತೆ ಮಾಡಲಾಗಿದೆ. ಅದೂ ಅಲ್ಲದೆ ಈಗಿರತಕ್ಕ ಕಾರ್ಖಾನೆಯಲ್ಲಿ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಸಚಿವರು ಹೇಳಿದರು.</p>.<p><strong>ಭಾರತೀಯ ವಿಜ್ಞಾನ ಕಾಂಗ್ರೆಸ್ ಮಹಾಧಿವೇಶನ: ನಗರದಲ್ಲಿ ಸಿದ್ಧತೆ<br />ಬೆಂಗಳೂರು, ಡಿ. 30–</strong> ಇಪ್ಪತ್ತು ವರ್ಷಗಳ ನಂತರ ಮತ್ತೆ ನಗರದಲ್ಲಿ ಸಮಾವೇಶಗೊಳ್ಳುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ ಮಹಾಧಿವೇಶನಕ್ಕೆ ಸೆಂಟ್ರಲ್ ಕಾಲೇಜು ಆವರಣದಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.</p>.<p>ಪ್ರಪಂಚದ ನಾನಾ ಭಾಗಗಳಿಂದ ವಿಶೇಷ ಆಹ್ವಾನದ ಮೇಲೆ ಆಗಮಿಸಲಿರುವ 30 ಮಂದಿ ವಿಜ್ಞಾನಿಗಳೂ ಸೇರಿ ಸುಮಾರು 3,500 ಮಂದಿ ವಿಜ್ಞಾನದ ವಿವಿಧ ಭಾಗಗಳ ಪ್ರತಿನಿಧಿಗಳು ಅದರಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>