<p><strong>ಕಾವೇರಿ ನೀರಾವರಿ ಯೋಜನೆ ಮಂಜೂರಾತಿಗೆ ಕೋರಿಕೆ: ರಾಜ್ಯಪಾಲರ ಸ್ಪಷ್ಟನೆ<br />ಬೆಂಗಳೂರು, ಮೇ 14– </strong>1924ರ ಒಪ್ಪಂದದ ಸಂಬಂಧವಿಲ್ಲದೆ ಕಾವೇರಿ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಬೇಕೆಂಬುದು ರಾಜ್ಯ ಸರ್ಕಾರದ ನಿಲುವೆಂದು ರಾಜ್ಯಪಾಲ ಶ್ರೀ ಧರ್ಮವೀರರವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.</p>.<p>ಕಾವೇರಿ ನೀರು ಹಂಚಿಕೆಯ 1924ರ ಒಪ್ಪಂದಕ್ಕೆ ರಾಜ್ಯ ಸರ್ಕಾರ ಬದ್ಧವಾಗುವುದೆಂದೂ ಇದನ್ನು ಬರಹದಲ್ಲಿ ನೀಡಲು ತಾವು ಸಿದ್ಧವೆಂದೂ ಕೇಂದ್ರಕ್ಕೆ ಮೈಸೂರಿನ ರಾಜ್ಯಪಾಲರು ಭರವಸೆ ನೀಡಿದ್ದಾರೆಂಬ ಪತ್ರಿಕಾ ವರದಿಯನ್ನು ಶ್ರೀ ಧರ್ಮವೀರರವರು ಪತ್ರಿಕಾಗೋಷ್ಠಿಯಲ್ಲಿ ನಿರಾಕರಿಸಿ, ‘ನಾನು ಯಾರಿಗೂ ಆ ರೀತಿ ಭರವಸೆ ನೀಡಿಲ್ಲ’ ಎಂದರು.</p>.<p>ದೆಹಲಿಯಿಂದ ಹಿಂತಿರುಗಿದ ಶ್ರೀ ಧರ್ಮವೀರರವರು ಕಾವೇರಿ ನೀರಾವರಿ ಯೋಜನೆಗಳ ಬಗ್ಗೆ ಈಗಿರುವ ಸ್ಥಿತಿಯೇ ಮುಂದುವರಿಯುವಂತೆ ಕಂಡುಬರುವುದೆಂದರು.</p>.<p><strong>ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಲು ಸಂಸ್ಥಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒತ್ತಾಯ<br />ಮುನ್ಷಿನಗರ (ಮುಂಬಯಿ), ಮೇ 14–</strong> ಬಾಂಗ್ಲಾ ದೇಶಕ್ಕೆ ಪರಮಾಧಿಕಾರ ವುಳ್ಳ ಪ್ರತ್ಯೇಕ ರಾಷ್ಟ್ರವೆಂದು ಶೀಘ್ರವೇ ಮಾನ್ಯತೆ ನೀಡುವಂತೆ ಸಂಸ್ಥಾ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ ನೀರಾವರಿ ಯೋಜನೆ ಮಂಜೂರಾತಿಗೆ ಕೋರಿಕೆ: ರಾಜ್ಯಪಾಲರ ಸ್ಪಷ್ಟನೆ<br />ಬೆಂಗಳೂರು, ಮೇ 14– </strong>1924ರ ಒಪ್ಪಂದದ ಸಂಬಂಧವಿಲ್ಲದೆ ಕಾವೇರಿ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಬೇಕೆಂಬುದು ರಾಜ್ಯ ಸರ್ಕಾರದ ನಿಲುವೆಂದು ರಾಜ್ಯಪಾಲ ಶ್ರೀ ಧರ್ಮವೀರರವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.</p>.<p>ಕಾವೇರಿ ನೀರು ಹಂಚಿಕೆಯ 1924ರ ಒಪ್ಪಂದಕ್ಕೆ ರಾಜ್ಯ ಸರ್ಕಾರ ಬದ್ಧವಾಗುವುದೆಂದೂ ಇದನ್ನು ಬರಹದಲ್ಲಿ ನೀಡಲು ತಾವು ಸಿದ್ಧವೆಂದೂ ಕೇಂದ್ರಕ್ಕೆ ಮೈಸೂರಿನ ರಾಜ್ಯಪಾಲರು ಭರವಸೆ ನೀಡಿದ್ದಾರೆಂಬ ಪತ್ರಿಕಾ ವರದಿಯನ್ನು ಶ್ರೀ ಧರ್ಮವೀರರವರು ಪತ್ರಿಕಾಗೋಷ್ಠಿಯಲ್ಲಿ ನಿರಾಕರಿಸಿ, ‘ನಾನು ಯಾರಿಗೂ ಆ ರೀತಿ ಭರವಸೆ ನೀಡಿಲ್ಲ’ ಎಂದರು.</p>.<p>ದೆಹಲಿಯಿಂದ ಹಿಂತಿರುಗಿದ ಶ್ರೀ ಧರ್ಮವೀರರವರು ಕಾವೇರಿ ನೀರಾವರಿ ಯೋಜನೆಗಳ ಬಗ್ಗೆ ಈಗಿರುವ ಸ್ಥಿತಿಯೇ ಮುಂದುವರಿಯುವಂತೆ ಕಂಡುಬರುವುದೆಂದರು.</p>.<p><strong>ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಲು ಸಂಸ್ಥಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒತ್ತಾಯ<br />ಮುನ್ಷಿನಗರ (ಮುಂಬಯಿ), ಮೇ 14–</strong> ಬಾಂಗ್ಲಾ ದೇಶಕ್ಕೆ ಪರಮಾಧಿಕಾರ ವುಳ್ಳ ಪ್ರತ್ಯೇಕ ರಾಷ್ಟ್ರವೆಂದು ಶೀಘ್ರವೇ ಮಾನ್ಯತೆ ನೀಡುವಂತೆ ಸಂಸ್ಥಾ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>