<p>ಸೇಲಂ, ಆಗಸ್ಟ್ 1– ಮೈಸೂರು ರಾಜ್ಯ ಕೈಗೊಂಡಿರುವ ಹೇಮಾವತಿ ಮತ್ತಿತರ ಕಾವೇರಿ ಯೋಜನೆಗಳ ನಿರ್ಮಾಣ ಕಾರ್ಯ ನಿಲ್ಲಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವವರೆಗೆ ಕಾವೇರಿ ಜಲವಿವಾದದ ಬಗ್ಗೆ ಯಾವುದೇ ಮಾತುಕತೆಗೂ ತಮಿಳುನಾಡು ಸರ್ಕಾರ ಒಪ್ಪಿಕೊಳ್ಳುವುದಿಲ್ಲವೆಂದು ಮುಖ್ಯಮಂತ್ರಿ ಕರುಣಾನಿಧಿಯವರು ಇಂದು ಇಲ್ಲಿ ತಿಳಿಸಿದರು.</p>.<p>‘ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಲಾಗುವುದು ಎಲ್ಲ ಪ್ರಯತ್ನಗಳೂ ವಿಫಲಗೊಂಡಲ್ಲಿ ವಿವಾದವನ್ನು ಪಂಚಯಿತಿಗೊಪ್ಪಿಸಬಹುದು ಎಂದು ಪ್ರಧಾನ ಮಂತ್ರಿಯವರು ಹಾಗೂ ಕೇಂದ್ರ ನೀರಾವರಿ ಸಚಿವರು ಈ ಹಿಂದೆ ಅನೇಕ ಬಾರಿ ತಿಳಿಸಿದ್ದರು’ ಎಂದು ಕರುಣಾನಿಧಿಯವರು ಅಖಿಲ ಭಾರತ ಖಾದಿ, ಸ್ವದೇಶಿ ಮತ್ತು ಕೈಮಗ್ಗದ ಪ್ರದರ್ಶನ ಉದ್ಘಾಟಿಸುತ್ತ ನುಡಿದರು.</p>.<p>ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಅತೃಪ್ತಿಕರ– ಕೆಂಗಲ್</p>.<p>ಬೆಂಗಳೂರು, ಆಗಸ್ಟ್ 1– ಮೈಸೂರು ರಾಜ್ಯದ ಕೈಗಾರಿಕೆಗಳ ಬಂಡವಾಳ ಹೂಡಿಕೆ, ಬೆಳವಣಿಗೆಯ ಪ್ರಮಾಣದ ಬಗ್ಗೆ ಕೇಂದ್ರದ ರೈಲ್ವೆಮಂತ್ರಿ ಕೆ. ಹನುಮಂತಯ್ಯನವರು ಇಂದು ಇಲ್ಲಿ ಅತೃಪ್ತಿ ವ್ಯಕ್ತಪಡಿಸಿದರು.</p>.<p>ಮೈಸೂರು ರಾಜ್ಯದಲ್ಲಿ ಇತರ ರಾಜ್ಯಗಳಿಗಿಂತ ಮುಂಚೆ ಕೈಗಾರಿಕೆಗಳ ಸ್ಥಾಪನೆಯಾದರೂ ಅದರ ಮುಂದಿನ ಬೆಳವಣಿಗೆ ‘ಹುಟ್ಟುವವರಿಗೆಲ್ಲ ಹಿರಿಯ ಬೆಳೆಯುವವರಿಗೆಲ್ಲ ಕಿರಿಯ’ ಅನ್ನುವಂತಾಗಿದೆಯೆಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೇಲಂ, ಆಗಸ್ಟ್ 1– ಮೈಸೂರು ರಾಜ್ಯ ಕೈಗೊಂಡಿರುವ ಹೇಮಾವತಿ ಮತ್ತಿತರ ಕಾವೇರಿ ಯೋಜನೆಗಳ ನಿರ್ಮಾಣ ಕಾರ್ಯ ನಿಲ್ಲಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವವರೆಗೆ ಕಾವೇರಿ ಜಲವಿವಾದದ ಬಗ್ಗೆ ಯಾವುದೇ ಮಾತುಕತೆಗೂ ತಮಿಳುನಾಡು ಸರ್ಕಾರ ಒಪ್ಪಿಕೊಳ್ಳುವುದಿಲ್ಲವೆಂದು ಮುಖ್ಯಮಂತ್ರಿ ಕರುಣಾನಿಧಿಯವರು ಇಂದು ಇಲ್ಲಿ ತಿಳಿಸಿದರು.</p>.<p>‘ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಲಾಗುವುದು ಎಲ್ಲ ಪ್ರಯತ್ನಗಳೂ ವಿಫಲಗೊಂಡಲ್ಲಿ ವಿವಾದವನ್ನು ಪಂಚಯಿತಿಗೊಪ್ಪಿಸಬಹುದು ಎಂದು ಪ್ರಧಾನ ಮಂತ್ರಿಯವರು ಹಾಗೂ ಕೇಂದ್ರ ನೀರಾವರಿ ಸಚಿವರು ಈ ಹಿಂದೆ ಅನೇಕ ಬಾರಿ ತಿಳಿಸಿದ್ದರು’ ಎಂದು ಕರುಣಾನಿಧಿಯವರು ಅಖಿಲ ಭಾರತ ಖಾದಿ, ಸ್ವದೇಶಿ ಮತ್ತು ಕೈಮಗ್ಗದ ಪ್ರದರ್ಶನ ಉದ್ಘಾಟಿಸುತ್ತ ನುಡಿದರು.</p>.<p>ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಅತೃಪ್ತಿಕರ– ಕೆಂಗಲ್</p>.<p>ಬೆಂಗಳೂರು, ಆಗಸ್ಟ್ 1– ಮೈಸೂರು ರಾಜ್ಯದ ಕೈಗಾರಿಕೆಗಳ ಬಂಡವಾಳ ಹೂಡಿಕೆ, ಬೆಳವಣಿಗೆಯ ಪ್ರಮಾಣದ ಬಗ್ಗೆ ಕೇಂದ್ರದ ರೈಲ್ವೆಮಂತ್ರಿ ಕೆ. ಹನುಮಂತಯ್ಯನವರು ಇಂದು ಇಲ್ಲಿ ಅತೃಪ್ತಿ ವ್ಯಕ್ತಪಡಿಸಿದರು.</p>.<p>ಮೈಸೂರು ರಾಜ್ಯದಲ್ಲಿ ಇತರ ರಾಜ್ಯಗಳಿಗಿಂತ ಮುಂಚೆ ಕೈಗಾರಿಕೆಗಳ ಸ್ಥಾಪನೆಯಾದರೂ ಅದರ ಮುಂದಿನ ಬೆಳವಣಿಗೆ ‘ಹುಟ್ಟುವವರಿಗೆಲ್ಲ ಹಿರಿಯ ಬೆಳೆಯುವವರಿಗೆಲ್ಲ ಕಿರಿಯ’ ಅನ್ನುವಂತಾಗಿದೆಯೆಂದು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>