<p><strong>ಮೂವರು ಸಚಿವರಿರುವ ಅರಸು ಸಂಪುಟದಿಂದ ಪ್ರಮಾಣ ಸ್ವೀಕಾರ<br />ಬೆಂಗಳೂರು, ಮಾರ್ಚ್ 20–</strong> ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರ ಮೂವರು ಸದಸ್ಯರ ಸಚಿವ ಸಂಪುಟ ಇಂದು ಮಧ್ಯಾಹ್ನ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ 359 ದಿನಗಳ ನಂತರ ಕರ್ನಾಟಕದಲ್ಲಿ ಮತ್ತೆ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದಿತು.</p>.<p>ರಾಷ್ಟ್ರಪತಿಗಳು ತಮ್ಮ ಆಡಳಿತವನ್ನು ರದ್ದುಪಡಿಸಿ ಆಜ್ಞೆ ಹೊರಡಿಸಿದರು. ಸಂವಿಧಾನ ರೀತ್ಯ ಮತ್ತೊಂದು ಪ್ರಕಟಣೆಯ ಮೂಲಕ ನೂತನ ವಿಧಾನಸಭೆಯೂ ಅಸ್ತಿತ್ವಕ್ಕೆ ಬಂದಿತು. ಜೊತೆಗೆ ಮಂತ್ರಿಮಂಡಲದ ಪ್ರಮಾಣವಚನವೂ ನಡೆದು ಸರ್ಕಾರವೂ ಸ್ಥಾಪಿತವಾಯಿತು.</p>.<p>ಕಾನೂನಿನ ದೃಷ್ಟಿಯಲ್ಲಿ ಈ ಮೂರು ಘಟನೆಗಳು ಏಕಕಾಲದಲ್ಲಿ ಒಂದಾದ ಮೇಲೆ ಇನ್ನೊಂದು ನಡೆದ ಘಟನೆಗಳು.</p>.<p>ರಾಜಭವನದ ಹುಲ್ಲಿನ ಮೈದಾನದಲ್ಲಿ ಹಾಕಲಾಗಿದ್ದ ಭಾರಿ ಷಾಮಿಯಾನದಲ್ಲಿ ರಾಜ್ಯಪಾಲ ಶ್ರೀ ಸುಖಾಡಿಯಾ ಅವರು ಮುಖ್ಯಮಂತ್ರಿ ಹಾಗೂ ಇತರ ಇಬ್ಬರು ಸಚಿವರಿಗೆ ಪ್ರತಿಜ್ಞೆ ಮಾಡಿಸಿದರು.</p>.<p>ಕನ್ನಡದಲ್ಲಿ ಪ್ರತಿಜ್ಞಾವಿಧಿಯನ್ನು ಹಿಂದಿಯಲ್ಲಿ ಬರೆದುಕೊಂಡು ರಾಜ್ಯಪಾಲರು ಸ್ಪಷ್ಟವಾಗಿ ಓದಿದರು. </p>.<p>ಸ್ಪಷ್ಟ ಹಾಗೂ ಸರಿಯಾದ ಉಚ್ಚಾರಣೆಯಿಂದ ಕನ್ನಡದಲ್ಲಿ ಪ್ರತಿಜ್ಞೆ ಮಾಡಿಸಿದ ರಾಜ್ಯಪಾಲರನ್ನು ಅನೇಕರು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂವರು ಸಚಿವರಿರುವ ಅರಸು ಸಂಪುಟದಿಂದ ಪ್ರಮಾಣ ಸ್ವೀಕಾರ<br />ಬೆಂಗಳೂರು, ಮಾರ್ಚ್ 20–</strong> ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರ ಮೂವರು ಸದಸ್ಯರ ಸಚಿವ ಸಂಪುಟ ಇಂದು ಮಧ್ಯಾಹ್ನ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ 359 ದಿನಗಳ ನಂತರ ಕರ್ನಾಟಕದಲ್ಲಿ ಮತ್ತೆ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದಿತು.</p>.<p>ರಾಷ್ಟ್ರಪತಿಗಳು ತಮ್ಮ ಆಡಳಿತವನ್ನು ರದ್ದುಪಡಿಸಿ ಆಜ್ಞೆ ಹೊರಡಿಸಿದರು. ಸಂವಿಧಾನ ರೀತ್ಯ ಮತ್ತೊಂದು ಪ್ರಕಟಣೆಯ ಮೂಲಕ ನೂತನ ವಿಧಾನಸಭೆಯೂ ಅಸ್ತಿತ್ವಕ್ಕೆ ಬಂದಿತು. ಜೊತೆಗೆ ಮಂತ್ರಿಮಂಡಲದ ಪ್ರಮಾಣವಚನವೂ ನಡೆದು ಸರ್ಕಾರವೂ ಸ್ಥಾಪಿತವಾಯಿತು.</p>.<p>ಕಾನೂನಿನ ದೃಷ್ಟಿಯಲ್ಲಿ ಈ ಮೂರು ಘಟನೆಗಳು ಏಕಕಾಲದಲ್ಲಿ ಒಂದಾದ ಮೇಲೆ ಇನ್ನೊಂದು ನಡೆದ ಘಟನೆಗಳು.</p>.<p>ರಾಜಭವನದ ಹುಲ್ಲಿನ ಮೈದಾನದಲ್ಲಿ ಹಾಕಲಾಗಿದ್ದ ಭಾರಿ ಷಾಮಿಯಾನದಲ್ಲಿ ರಾಜ್ಯಪಾಲ ಶ್ರೀ ಸುಖಾಡಿಯಾ ಅವರು ಮುಖ್ಯಮಂತ್ರಿ ಹಾಗೂ ಇತರ ಇಬ್ಬರು ಸಚಿವರಿಗೆ ಪ್ರತಿಜ್ಞೆ ಮಾಡಿಸಿದರು.</p>.<p>ಕನ್ನಡದಲ್ಲಿ ಪ್ರತಿಜ್ಞಾವಿಧಿಯನ್ನು ಹಿಂದಿಯಲ್ಲಿ ಬರೆದುಕೊಂಡು ರಾಜ್ಯಪಾಲರು ಸ್ಪಷ್ಟವಾಗಿ ಓದಿದರು. </p>.<p>ಸ್ಪಷ್ಟ ಹಾಗೂ ಸರಿಯಾದ ಉಚ್ಚಾರಣೆಯಿಂದ ಕನ್ನಡದಲ್ಲಿ ಪ್ರತಿಜ್ಞೆ ಮಾಡಿಸಿದ ರಾಜ್ಯಪಾಲರನ್ನು ಅನೇಕರು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>