ಈಚಿನ ಚುನಾವಣೆಗಳ ನಂತರ ಚಂಡೀಗಡದ ಖಾಸಗಿ ಉಗ್ರಾಣವೊಂದರಲ್ಲಿ ಗುರುತಿಸಿದ ಸಾವಿರಾರು ಮತಚೀಟಿಗಳು ಕಂಡುಬಂದಿವೆ. ಅದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂಬುದು ವಿರೋಧ ಪಕ್ಷದ ಒತ್ತಾಯವಾಗಿತ್ತು. ಜನಸಂಘದ ಸದಸ್ಯರು ಕೈಯಲ್ಲಿ ಒಂದು ಹಿಡಿ ಮತಪತ್ರಗಳನ್ನು ಹಿಡಿದು ಕೈಬೀಸುತ್ತಾ ಸರ್ಕಾರದಿಂದ ತೃಪ್ತಿಕರ ವಿವರಣೆ ಬಯಸಿದರು.