<p><strong>ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಸಂಬಂಧ ಪೋಷಕರ ವರಮಾನದ ಮಿತಿ</strong></p>.<p><strong>ಬೆಂಗಳೂರು, ಜ. 11– </strong>ಕಾಲೇಜುಗಳು, ಪಾಲಿಟೆಕ್ನಿಕ್ಗಳು ಮತ್ತು ಹೈಯರ್ ಸೆಕೆಂಡರಿ 11ನೇ ತರಗತಿಗಳಲ್ಲಿ ಫ್ರೀಷಿಪ್ ನೀಡಲು ತಂದೆ ತಾಯಿಗಳ ವಾರ್ಷಿಕ ವರಮಾನದ ಮಿತಿ 2,400 ರೂ. ಇದ್ದುದ್ದನ್ನು ಸರ್ಕಾರ 3,600ಕ್ಕೆ ಹೆಚ್ಚಿಸಿದೆ.</p>.<p>ಕಾಲೇಜುಗಳು, ಪಾಲಿಟೆಕ್ನಿಕ್ಗಳು ಮತ್ತು ಹೈಯರ್ ಸೆಕೆಂಡರಿ 11ನೇ ತರಗತಿಗಳಲ್ಲಿ ನೀಡಲಾಗುವ ಒಟ್ಟು ಫ್ರೀಷಿಪ್ಗಳಲ್ಲಿ ಅರ್ಧದಷ್ಟನ್ನು ವಾರ್ಷಿಕ 1,800 ರೂ.ಗಿಂತ ಕಡಿಮೆ ಆದಾಯವಿರುವವರ ಮಕ್ಕಳಿಗೆ ಪೂರ್ಣ ಫ್ರೀಷಿಪ್ ಆಗಿ ನೀಡಲಾಗುವುದು.</p>.<p><strong>ಒಂದು ತಿಂಗಳಲ್ಲಿ ಚಿಲ್ಲರೆ ನಾಣ್ಯದ ಅಭಾವ ಸುಧಾರಣೆ</strong></p>.<p><strong>ಬೆಂಗಳೂರು, ಜ. 11–</strong> ದೇಶದ ನಾನಾ ಕಡೆಗಳಲ್ಲಿ ಕಂಡುಬರುತ್ತಿರುವ ಚಿಲ್ಲರೆ ನಾಣ್ಯಗಳ ಅಭಾವ ಪರಿಸ್ಥಿತಿ ಇನ್ನು ಒಂದು ತಿಂಗಳಲ್ಲಿ ಕೆಲ ಮಟ್ಟಿಗೆ ಸುಧಾರಿಸುವ ಸೂಚನೆಗಳಿವೆ.</p>.<p>ಹಲವು ಬಗೆಯ ನಾಣ್ಯಗಳನ್ನು ಲೋಹದ ಆಸೆಗಾಗಿ ಕೆಲವರು ಕರಗಿಸಲಾರಂಭಿಸಿದ್ದೇ ನಾಣ್ಯದ ಅಭಾವಕ್ಕೆ ಕಾರಣವೆಂದು ಹೇಳಲಾಗಿದೆ. ಪರಿಸ್ಥಿತಿಯನ್ನು ಗಮನಿಸಿ ಟಂಕಸಾಲೆ ಸಾಕಷ್ಟು ನಾಣ್ಯಗಳನ್ನು ಬಿಡುಗಡೆ ಮಾಡುವ ಪ್ರಯತ್ನ ಕೈಗೊಂಡಿದೆಯೆಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಸಂಬಂಧ ಪೋಷಕರ ವರಮಾನದ ಮಿತಿ</strong></p>.<p><strong>ಬೆಂಗಳೂರು, ಜ. 11– </strong>ಕಾಲೇಜುಗಳು, ಪಾಲಿಟೆಕ್ನಿಕ್ಗಳು ಮತ್ತು ಹೈಯರ್ ಸೆಕೆಂಡರಿ 11ನೇ ತರಗತಿಗಳಲ್ಲಿ ಫ್ರೀಷಿಪ್ ನೀಡಲು ತಂದೆ ತಾಯಿಗಳ ವಾರ್ಷಿಕ ವರಮಾನದ ಮಿತಿ 2,400 ರೂ. ಇದ್ದುದ್ದನ್ನು ಸರ್ಕಾರ 3,600ಕ್ಕೆ ಹೆಚ್ಚಿಸಿದೆ.</p>.<p>ಕಾಲೇಜುಗಳು, ಪಾಲಿಟೆಕ್ನಿಕ್ಗಳು ಮತ್ತು ಹೈಯರ್ ಸೆಕೆಂಡರಿ 11ನೇ ತರಗತಿಗಳಲ್ಲಿ ನೀಡಲಾಗುವ ಒಟ್ಟು ಫ್ರೀಷಿಪ್ಗಳಲ್ಲಿ ಅರ್ಧದಷ್ಟನ್ನು ವಾರ್ಷಿಕ 1,800 ರೂ.ಗಿಂತ ಕಡಿಮೆ ಆದಾಯವಿರುವವರ ಮಕ್ಕಳಿಗೆ ಪೂರ್ಣ ಫ್ರೀಷಿಪ್ ಆಗಿ ನೀಡಲಾಗುವುದು.</p>.<p><strong>ಒಂದು ತಿಂಗಳಲ್ಲಿ ಚಿಲ್ಲರೆ ನಾಣ್ಯದ ಅಭಾವ ಸುಧಾರಣೆ</strong></p>.<p><strong>ಬೆಂಗಳೂರು, ಜ. 11–</strong> ದೇಶದ ನಾನಾ ಕಡೆಗಳಲ್ಲಿ ಕಂಡುಬರುತ್ತಿರುವ ಚಿಲ್ಲರೆ ನಾಣ್ಯಗಳ ಅಭಾವ ಪರಿಸ್ಥಿತಿ ಇನ್ನು ಒಂದು ತಿಂಗಳಲ್ಲಿ ಕೆಲ ಮಟ್ಟಿಗೆ ಸುಧಾರಿಸುವ ಸೂಚನೆಗಳಿವೆ.</p>.<p>ಹಲವು ಬಗೆಯ ನಾಣ್ಯಗಳನ್ನು ಲೋಹದ ಆಸೆಗಾಗಿ ಕೆಲವರು ಕರಗಿಸಲಾರಂಭಿಸಿದ್ದೇ ನಾಣ್ಯದ ಅಭಾವಕ್ಕೆ ಕಾರಣವೆಂದು ಹೇಳಲಾಗಿದೆ. ಪರಿಸ್ಥಿತಿಯನ್ನು ಗಮನಿಸಿ ಟಂಕಸಾಲೆ ಸಾಕಷ್ಟು ನಾಣ್ಯಗಳನ್ನು ಬಿಡುಗಡೆ ಮಾಡುವ ಪ್ರಯತ್ನ ಕೈಗೊಂಡಿದೆಯೆಂದು ತಿಳಿದುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>