<p><strong>ನಗರದಲ್ಲಿ ಸಾರ್ವಜನಿಕ ಬಳಕೆಯ ಗಣಕಯಂತ್ರ</strong></p>.<p><strong>ಬೆಂಗಳೂರು, ಜ. 15–</strong> ಭಾರತದಲ್ಲಿಯೇ ಪ್ರಥಮವಾದ ಸಾರ್ವಜನಿಕ ಬಳಕೆಯ ಗಣಕಯಂತ್ರವನ್ನು (ಕಂಪ್ಯೂಟರ್) ಬೆಂಗಳೂರಿನಲ್ಲಿ ಸ್ಥಾಪಿಸುವ ಸಂಭವವಿದೆ.</p>.<p>ಸರ್ಕಾರ, ವಿಶ್ವವಿದ್ಯಾಲಯ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳು ಬಳಸಬಹುದಾದ ಗಣಕಯಂತ್ರ ಸ್ಥಾಪನೆಗೆ ಬೆಂಗಳೂರು ಸೂಕ್ತ ಪ್ರದೇಶವಾಗಿದ್ದು, ಇಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಬಹುದೆಂದು ದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಡೈರೆಕ್ಟರ್ ಜನರಲ್ ಡಾ. ಆತ್ಮಾರಾಂ ಅವರು ನಿನ್ನೆ ಇಲ್ಲಿ ತಿಳಿಸಿದರು.</p>.<p><strong>‘ಕಾಶ್ಮೀರ’ ಚರ್ಚೆಯ ಪಾಕ್ ಯತ್ನಕ್ಕೆ ಯಶಸ್ವೀ ವಿರೋಧ</strong></p>.<p><strong>ಸಿಂಗಪುರ, ಜ. 15– </strong>ಕಾಮನ್ವೆಲ್ತ್ ಸಮ್ಮೇಳನದ ಬೆಳಗಿನ ಅಧಿವೇಶನದಲ್ಲಿ ಇಂದು ಕಾಶ್ಮೀರ ಸಮಸ್ಯೆಯನ್ನು ಚರ್ಚಿಸಲೆಳಸಿದ ಪಾಕಿಸ್ತಾನದ ವಾಣಿಜ್ಯ ಸಚಿವ ಅಹ್ಸಾನುಲ್ ಹಕ್ರ ಪ್ರಯತ್ನವನ್ನು ಭಾರತದ ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಇಂದು ಯಶಸ್ವಿಯಾಗಿ ವಿರೋಧಿಸಿದರು.</p>.<p>ಅವರ ವಿರೋಧವನ್ನು ಒಪ್ಪಿಕೊಂಡ ಸಮ್ಮೇಳನದ ಅಧ್ಯಕ್ಷ ಸಿಂಗಪುರದ ಪ್ರಧಾನಿ ಲೀ ಕ್ವಾನ್ ಯೆನ್ ಅವರು, ಕಾಶ್ಮೀರವು ಅಂತರರಾಷ್ಟ್ರೀಯ ಸಮಸ್ಯೆಯೆಂದು ವಾದಿಸಲು ಹೊರಟ ಪಾಕ್ ಸಚಿವರಿಗೆ ಮುಂದುವರಿಯಲು ಬಿಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಗರದಲ್ಲಿ ಸಾರ್ವಜನಿಕ ಬಳಕೆಯ ಗಣಕಯಂತ್ರ</strong></p>.<p><strong>ಬೆಂಗಳೂರು, ಜ. 15–</strong> ಭಾರತದಲ್ಲಿಯೇ ಪ್ರಥಮವಾದ ಸಾರ್ವಜನಿಕ ಬಳಕೆಯ ಗಣಕಯಂತ್ರವನ್ನು (ಕಂಪ್ಯೂಟರ್) ಬೆಂಗಳೂರಿನಲ್ಲಿ ಸ್ಥಾಪಿಸುವ ಸಂಭವವಿದೆ.</p>.<p>ಸರ್ಕಾರ, ವಿಶ್ವವಿದ್ಯಾಲಯ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳು ಬಳಸಬಹುದಾದ ಗಣಕಯಂತ್ರ ಸ್ಥಾಪನೆಗೆ ಬೆಂಗಳೂರು ಸೂಕ್ತ ಪ್ರದೇಶವಾಗಿದ್ದು, ಇಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಬಹುದೆಂದು ದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಡೈರೆಕ್ಟರ್ ಜನರಲ್ ಡಾ. ಆತ್ಮಾರಾಂ ಅವರು ನಿನ್ನೆ ಇಲ್ಲಿ ತಿಳಿಸಿದರು.</p>.<p><strong>‘ಕಾಶ್ಮೀರ’ ಚರ್ಚೆಯ ಪಾಕ್ ಯತ್ನಕ್ಕೆ ಯಶಸ್ವೀ ವಿರೋಧ</strong></p>.<p><strong>ಸಿಂಗಪುರ, ಜ. 15– </strong>ಕಾಮನ್ವೆಲ್ತ್ ಸಮ್ಮೇಳನದ ಬೆಳಗಿನ ಅಧಿವೇಶನದಲ್ಲಿ ಇಂದು ಕಾಶ್ಮೀರ ಸಮಸ್ಯೆಯನ್ನು ಚರ್ಚಿಸಲೆಳಸಿದ ಪಾಕಿಸ್ತಾನದ ವಾಣಿಜ್ಯ ಸಚಿವ ಅಹ್ಸಾನುಲ್ ಹಕ್ರ ಪ್ರಯತ್ನವನ್ನು ಭಾರತದ ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಇಂದು ಯಶಸ್ವಿಯಾಗಿ ವಿರೋಧಿಸಿದರು.</p>.<p>ಅವರ ವಿರೋಧವನ್ನು ಒಪ್ಪಿಕೊಂಡ ಸಮ್ಮೇಳನದ ಅಧ್ಯಕ್ಷ ಸಿಂಗಪುರದ ಪ್ರಧಾನಿ ಲೀ ಕ್ವಾನ್ ಯೆನ್ ಅವರು, ಕಾಶ್ಮೀರವು ಅಂತರರಾಷ್ಟ್ರೀಯ ಸಮಸ್ಯೆಯೆಂದು ವಾದಿಸಲು ಹೊರಟ ಪಾಕ್ ಸಚಿವರಿಗೆ ಮುಂದುವರಿಯಲು ಬಿಡಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>