<p><strong>ಭೂ ಕಕ್ಷೆಗೆ ಯಶಸ್ವಿಯಾಗಿ ಅಪೋಲೊ–7</strong></p>.<p><strong>ಕೇಪ್ ಕೆನಡಿ (ಪ್ಲಾರಿಡ),</strong> ಅ. 11– ಚಂದ್ರ ಗ್ರಹಕ್ಕೆ ಮಾನವರನ್ನು ಕಳಿಸುವ ಯತ್ನದ ಪೂರ್ವ ಪ್ರಯೋಗವಾಗಿ ಅಮೆರಿಕದ ಅಪೋಲೊ –7 ಇಂದು ಯಶಸ್ವಿಯಾಗಿ ಭೂ ಕಕ್ಷೆಯನ್ನು ಪ್ರವೇಶಿಸಿತು.</p>.<p><strong>ಅಧ್ಯಕ್ಷರು, ಸಭಾಪತಿಗಳ ಅವಿರೋಧ ಆಯ್ಕೆ ಸಂಪ್ರದಾಯ ಅನುಷ್ಠಾನಕ್ಕೆ ಶಿಫಾರಸು</strong></p>.<p><strong>ಬೆಂಗಳೂರು,</strong> ಅ. 11– ಸಂಸತ್, ಶಾಸನ ಸಭೆಗಳ ಅಧ್ಯಕ್ಷರು ಮತ್ತು ಸಭಾಪತಿಗಳಿಗೆ ಚುನಾವಣೆಯ ಸಮಯದಲ್ಲಿ ಅವಿರೋಧ ಆಯ್ಕೆಗೆ ಅವಕಾಶವಾಗುವಂತೆ, ನಿರ್ದಿಷ್ಟ ಕ್ಷೇತ್ರಗಳನ್ನು ಒದಗಿಸುವ ಸಂಪ್ರದಾಯ ಆರಂಭಿಸುವ ಸೂಚನೆಯನ್ನು<br />ತಿರುವನಂತಪುರದಲ್ಲಿ ಜರುಗಿದ ಅಧ್ಯಕ್ಷರು ಮತ್ತು ಸಭಾಪತಿಗಳ ಸಮ್ಮೇಳನ ನೀಡಿದೆ.</p>.<p><strong>ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ತ್ರಿಪಕ್ಷ ಗೋಷ್ಠಿ: ಷೇಖ್ ಕರೆ</strong></p>.<p><strong>ಶ್ರೀನಗರ, </strong>ಅ. 11– ವಿಶ್ವಸಂಸ್ಥೆ ರಕ್ಷಣೆಯ ಆಶ್ವಾಸನೆಯೊಂದಿಗೆ ಸ್ವತಂತ್ರ ಕಾಶ್ಮೀರ ಸ್ಥಾಪನೆಯನ್ನು ಪರಿಶೀಲಿಸುವಂತೆ ಷೇಖ್ ಅಬ್ದುಲ್ಲಾ ಅವರು ಇಂದು ಇಲ್ಲಿ 5 ದಿನಗಳ ರಾಜ್ಯ ಜನತಾ ಸಮ್ಮೇಳನದಲ್ಲಿ ಭಾಗವಹಿಸಿರುವ ಪ್ರತಿನಿಧಿಗಳಿಗೆ ಸಲಹೆ ಮಾಡಿದರು.</p>.<p><strong>ಭಗತ್ಸಿಂಗ್ ಗೌರವಾರ್ಥ 20 ಪೈಸೆ ಅಂಚೆ ಚೀಟಿ</strong></p>.<p><strong>ನವದೆಹಲಿ</strong>, ಅ. 11– ಸರ್ದಾರ್ ಭಗತ್ಸಿಂಗ್ ಅವರ ಗೌರವಾರ್ಥ ಈ ತಿಂಗಳ 19 ರಂದು ಇಪ್ಪತ್ತು ಪೈಸೆಯ ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೂ ಕಕ್ಷೆಗೆ ಯಶಸ್ವಿಯಾಗಿ ಅಪೋಲೊ–7</strong></p>.<p><strong>ಕೇಪ್ ಕೆನಡಿ (ಪ್ಲಾರಿಡ),</strong> ಅ. 11– ಚಂದ್ರ ಗ್ರಹಕ್ಕೆ ಮಾನವರನ್ನು ಕಳಿಸುವ ಯತ್ನದ ಪೂರ್ವ ಪ್ರಯೋಗವಾಗಿ ಅಮೆರಿಕದ ಅಪೋಲೊ –7 ಇಂದು ಯಶಸ್ವಿಯಾಗಿ ಭೂ ಕಕ್ಷೆಯನ್ನು ಪ್ರವೇಶಿಸಿತು.</p>.<p><strong>ಅಧ್ಯಕ್ಷರು, ಸಭಾಪತಿಗಳ ಅವಿರೋಧ ಆಯ್ಕೆ ಸಂಪ್ರದಾಯ ಅನುಷ್ಠಾನಕ್ಕೆ ಶಿಫಾರಸು</strong></p>.<p><strong>ಬೆಂಗಳೂರು,</strong> ಅ. 11– ಸಂಸತ್, ಶಾಸನ ಸಭೆಗಳ ಅಧ್ಯಕ್ಷರು ಮತ್ತು ಸಭಾಪತಿಗಳಿಗೆ ಚುನಾವಣೆಯ ಸಮಯದಲ್ಲಿ ಅವಿರೋಧ ಆಯ್ಕೆಗೆ ಅವಕಾಶವಾಗುವಂತೆ, ನಿರ್ದಿಷ್ಟ ಕ್ಷೇತ್ರಗಳನ್ನು ಒದಗಿಸುವ ಸಂಪ್ರದಾಯ ಆರಂಭಿಸುವ ಸೂಚನೆಯನ್ನು<br />ತಿರುವನಂತಪುರದಲ್ಲಿ ಜರುಗಿದ ಅಧ್ಯಕ್ಷರು ಮತ್ತು ಸಭಾಪತಿಗಳ ಸಮ್ಮೇಳನ ನೀಡಿದೆ.</p>.<p><strong>ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ತ್ರಿಪಕ್ಷ ಗೋಷ್ಠಿ: ಷೇಖ್ ಕರೆ</strong></p>.<p><strong>ಶ್ರೀನಗರ, </strong>ಅ. 11– ವಿಶ್ವಸಂಸ್ಥೆ ರಕ್ಷಣೆಯ ಆಶ್ವಾಸನೆಯೊಂದಿಗೆ ಸ್ವತಂತ್ರ ಕಾಶ್ಮೀರ ಸ್ಥಾಪನೆಯನ್ನು ಪರಿಶೀಲಿಸುವಂತೆ ಷೇಖ್ ಅಬ್ದುಲ್ಲಾ ಅವರು ಇಂದು ಇಲ್ಲಿ 5 ದಿನಗಳ ರಾಜ್ಯ ಜನತಾ ಸಮ್ಮೇಳನದಲ್ಲಿ ಭಾಗವಹಿಸಿರುವ ಪ್ರತಿನಿಧಿಗಳಿಗೆ ಸಲಹೆ ಮಾಡಿದರು.</p>.<p><strong>ಭಗತ್ಸಿಂಗ್ ಗೌರವಾರ್ಥ 20 ಪೈಸೆ ಅಂಚೆ ಚೀಟಿ</strong></p>.<p><strong>ನವದೆಹಲಿ</strong>, ಅ. 11– ಸರ್ದಾರ್ ಭಗತ್ಸಿಂಗ್ ಅವರ ಗೌರವಾರ್ಥ ಈ ತಿಂಗಳ 19 ರಂದು ಇಪ್ಪತ್ತು ಪೈಸೆಯ ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>