<p><strong>1,000 ಕೋಟಿ ರೂ.ಗಳ ಚಲಾವಣೆ ಸ್ತಂಭನಕ್ಕೆ ಕೇಂದ್ರದ ಆಲೋಚನೆ</strong></p><p>ನವದೆಹಲಿ, ಜುಲೈ 9– ರಾಷ್ಟ್ರವನ್ನು ಆವರಿಸಿರುವ ಹಣದುಬ್ಬರವನ್ನು ನಿಗ್ರಹಿಸಲು ಕೇಂದ್ರ ಸರ್ಕಾರವು ಒಂದು ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಚಲಾವಣೆಯಿಂದ ತಡೆದಿಡಲು ನಾನಾ ಕ್ರಮಗಳನ್ನು ಕುರಿತು ಆಲೋಚಿಸುತ್ತಿರುವುದಾಗಿ ಗೊತ್ತಾಗಿದೆ.</p><p>ವೇತನಗಳನ್ನು ಆಧರಿಸಿರುವ ವರ್ಗಗಳಿಗೆ ಅನ್ವಯಿಸಿರುವ ಕಡ್ಡಾಯ ಠೇವಣಿ ಹಾಗೂ ಕಂಪನಿಗಳ ಮೇಲೆ ವಿಧಿಸಿರುವ ಡಿವಿಡೆಂಡ್ ಸ್ತಂಭನಗಳಿಂದ 500 ಕೋಟಿ ರೂ.ಗಳು ಚಲಾವಣೆಯಲ್ಲಿಲ್ಲದೆ ಕೂಡಿಕೊಳ್ಳುವು<br>ದೆಂದು ಅಂದಾಜು ಮಾಡಲಾಗಿದೆ. ಇನ್ನೂ 500 ಕೋಟಿ ರೂ.ಗಳನ್ನು ಇದೇ ರೀತಿ ತಡೆಹಿಡಿಯಲು ಕ್ರಮಗಳು ಸಿದ್ಧಗೊಳ್ಳುತ್ತಿವೆ.</p><p><strong>ಜೆ.ಪಿ. ಆಗಲಿ, ಯಾರೇ ಆಗಲಿ; ಗಲಭೆ ಎದ್ದರೆ ಸೂಕ್ತ ಕ್ರಮ: ಗಫೂರ್</strong></p><p>ಪಟನಾ, ಜುಲೈ 9– ‘ಬಿಹಾರದಲ್ಲಿ ಅರಾಜಕತೆ ಮೂಡಿಸಲು ಯತ್ನಿಸುವವರು ಜಯಪ್ರಕಾಶ ನಾರಾಯಣರೇ ಆಗಿರಲಿ, ಅವರಿಗಿಂತ ದೊಡ್ಡವರೇ ಆಗಿರಲಿಸುಮ್ಮನೆ ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಅಬ್ದುಲ್ ಗಫೂರ್ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.</p><p>ಜಯಪ್ರಕಾಶ ನಾರಾಯಣರು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹಾಳುಗೆಡವಲು ಯತ್ನಿಸಿದರೆ ಅವರಿಗೆ ‘ಸರಿಯಾದ ಜಾಗ’ ತೋರಿಸಲಾಗುವುದು ಎಂದು ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>1,000 ಕೋಟಿ ರೂ.ಗಳ ಚಲಾವಣೆ ಸ್ತಂಭನಕ್ಕೆ ಕೇಂದ್ರದ ಆಲೋಚನೆ</strong></p><p>ನವದೆಹಲಿ, ಜುಲೈ 9– ರಾಷ್ಟ್ರವನ್ನು ಆವರಿಸಿರುವ ಹಣದುಬ್ಬರವನ್ನು ನಿಗ್ರಹಿಸಲು ಕೇಂದ್ರ ಸರ್ಕಾರವು ಒಂದು ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಚಲಾವಣೆಯಿಂದ ತಡೆದಿಡಲು ನಾನಾ ಕ್ರಮಗಳನ್ನು ಕುರಿತು ಆಲೋಚಿಸುತ್ತಿರುವುದಾಗಿ ಗೊತ್ತಾಗಿದೆ.</p><p>ವೇತನಗಳನ್ನು ಆಧರಿಸಿರುವ ವರ್ಗಗಳಿಗೆ ಅನ್ವಯಿಸಿರುವ ಕಡ್ಡಾಯ ಠೇವಣಿ ಹಾಗೂ ಕಂಪನಿಗಳ ಮೇಲೆ ವಿಧಿಸಿರುವ ಡಿವಿಡೆಂಡ್ ಸ್ತಂಭನಗಳಿಂದ 500 ಕೋಟಿ ರೂ.ಗಳು ಚಲಾವಣೆಯಲ್ಲಿಲ್ಲದೆ ಕೂಡಿಕೊಳ್ಳುವು<br>ದೆಂದು ಅಂದಾಜು ಮಾಡಲಾಗಿದೆ. ಇನ್ನೂ 500 ಕೋಟಿ ರೂ.ಗಳನ್ನು ಇದೇ ರೀತಿ ತಡೆಹಿಡಿಯಲು ಕ್ರಮಗಳು ಸಿದ್ಧಗೊಳ್ಳುತ್ತಿವೆ.</p><p><strong>ಜೆ.ಪಿ. ಆಗಲಿ, ಯಾರೇ ಆಗಲಿ; ಗಲಭೆ ಎದ್ದರೆ ಸೂಕ್ತ ಕ್ರಮ: ಗಫೂರ್</strong></p><p>ಪಟನಾ, ಜುಲೈ 9– ‘ಬಿಹಾರದಲ್ಲಿ ಅರಾಜಕತೆ ಮೂಡಿಸಲು ಯತ್ನಿಸುವವರು ಜಯಪ್ರಕಾಶ ನಾರಾಯಣರೇ ಆಗಿರಲಿ, ಅವರಿಗಿಂತ ದೊಡ್ಡವರೇ ಆಗಿರಲಿಸುಮ್ಮನೆ ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಅಬ್ದುಲ್ ಗಫೂರ್ ಅವರು ಇಂದು ವಿಧಾನಸಭೆಯಲ್ಲಿ ಹೇಳಿದರು.</p><p>ಜಯಪ್ರಕಾಶ ನಾರಾಯಣರು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹಾಳುಗೆಡವಲು ಯತ್ನಿಸಿದರೆ ಅವರಿಗೆ ‘ಸರಿಯಾದ ಜಾಗ’ ತೋರಿಸಲಾಗುವುದು ಎಂದು ಅವರು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>