<p><strong>ನದಿಯಲ್ಲಿ ತೆಪ್ಪ ಮುಳುಗಿ ಏಳು ಮಂದಿ ಜಲಸಮಾಧಿ</strong></p>.<p>ಬೀದರ್, ನ. 1– ಕರ್ನಾಟಕ–ಆಂಧ್ರ ಗಡಿ ಗ್ರಾಮ ಕಾರಾಮುಂಗಿ ಬಳಿ ಮಾಂಜ್ರಾ ನದಿಯಲ್ಲಿ ತೆಪ್ಪ ಮುಳುಗಿ ಒಂದೇ ಕುಟುಂಬಕ್ಕೆ ಸೇರಿದ ಏಳು ಜನರು ನೀರುಪಾಲಾಗಿದ್ದಾರೆ. ನಿನ್ನೆ ಮಧ್ಯಾಹ್ನ ನಡೆದ ದುರಂತದಲ್ಲಿ ಒಟ್ಟು 9 ಮಂದಿ ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದು, ಇಬ್ಬರು ಈಜಿ ಪಾರಾಗಿದ್ದಾರೆ.</p>.<p>ಮೃತಪಟ್ಟವರಲ್ಲಿ ಮಾಣಿಕಪ್ಪ ಎಂಬುವರು ಜಿಲ್ಲೆಯ ಬಸವಕಲ್ಯಾಣದ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ತೆಪ್ಪದಲ್ಲಿದ್ದ ಗೋವಿಂದ, ನರಸಿಂಗ್ ಈಜಿ ದಡ ಸೇರಿದ್ದಾರೆ.</p>.<p><strong>ಕಲ್ಕತ್ತ ಈಗ ಕೊಲ್ಕತ</strong></p>.<p>ಕೊಲ್ಕತ, ಜ. 1– ಪಶ್ಚಿಮ ಬಂಗಾಳದ ರಾಜಧಾನಿ ‘ಕಲ್ಕತ್ತ’ದ ಹೆಸರನ್ನು ಇಂದಿನಿಂದ ಅಧಿಕೃತವಾಗಿ ‘ಕೊಲ್ಕತ’ ಎಂದು ಬದಲಾಯಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನದಿಯಲ್ಲಿ ತೆಪ್ಪ ಮುಳುಗಿ ಏಳು ಮಂದಿ ಜಲಸಮಾಧಿ</strong></p>.<p>ಬೀದರ್, ನ. 1– ಕರ್ನಾಟಕ–ಆಂಧ್ರ ಗಡಿ ಗ್ರಾಮ ಕಾರಾಮುಂಗಿ ಬಳಿ ಮಾಂಜ್ರಾ ನದಿಯಲ್ಲಿ ತೆಪ್ಪ ಮುಳುಗಿ ಒಂದೇ ಕುಟುಂಬಕ್ಕೆ ಸೇರಿದ ಏಳು ಜನರು ನೀರುಪಾಲಾಗಿದ್ದಾರೆ. ನಿನ್ನೆ ಮಧ್ಯಾಹ್ನ ನಡೆದ ದುರಂತದಲ್ಲಿ ಒಟ್ಟು 9 ಮಂದಿ ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದು, ಇಬ್ಬರು ಈಜಿ ಪಾರಾಗಿದ್ದಾರೆ.</p>.<p>ಮೃತಪಟ್ಟವರಲ್ಲಿ ಮಾಣಿಕಪ್ಪ ಎಂಬುವರು ಜಿಲ್ಲೆಯ ಬಸವಕಲ್ಯಾಣದ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ತೆಪ್ಪದಲ್ಲಿದ್ದ ಗೋವಿಂದ, ನರಸಿಂಗ್ ಈಜಿ ದಡ ಸೇರಿದ್ದಾರೆ.</p>.<p><strong>ಕಲ್ಕತ್ತ ಈಗ ಕೊಲ್ಕತ</strong></p>.<p>ಕೊಲ್ಕತ, ಜ. 1– ಪಶ್ಚಿಮ ಬಂಗಾಳದ ರಾಜಧಾನಿ ‘ಕಲ್ಕತ್ತ’ದ ಹೆಸರನ್ನು ಇಂದಿನಿಂದ ಅಧಿಕೃತವಾಗಿ ‘ಕೊಲ್ಕತ’ ಎಂದು ಬದಲಾಯಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>