<p><strong>* ‘ಒಮ್ಮತವಿದ್ದರೆ ನಿಮ್ನ ವರ್ಗದವರೂ ಮುಖ್ಯಮಂತ್ರಿ ಆಗಲು ಸಾಧ್ಯವಿತ್ತು’</strong></p>.<p>ಬೆಂಗಳೂರು, ಏ. 14– ರಾಜ್ಯದ ಹರಿಜನ– ಗಿರಿಜನ ಶಾಸಕರಲ್ಲಿ ಒಮ್ಮತವಿಲ್ಲವೆಂದು ಕಾರ್ಮಿಕ ಖಾತೆ ರಾಜ್ಯ ಸಚಿವ ಕೆ. ಶ್ರೀರಾಮುಲು ಅವರು ಇಂದು ಇಲ್ಲಿ ವಿಷಾದ ವ್ಯಕ್ತಪಡಿಸಿದರು.</p>.<p>ರಾಜ್ಯದಲ್ಲಿರುವ 32 ಹರಿಜನ– ಗಿರಿಜನ ಶಾಸಕರು ಒಟ್ಟಾಗಿ ಒಂದೇ ಅಭಿಪ್ರಾಯ ಉಳ್ಳವರಾಗಿದ್ದಿದ್ದರೆ ಅವರಲ್ಲೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇತ್ತೆಂದು ಅವರು ಅಭಿಪ್ರಾಯಪಟ್ಟರು.</p>.<p>ಎಚ್.ಎ.ಎಲ್ ಹಿಂದುಳಿದ ಮತ್ತು ದಲಿತ ಕಲ್ಯಾಣ ಸಮಿತಿ ಆಶ್ರಯದಲ್ಲಿ ಪುರಭವನದಲ್ಲಿ ಆಚರಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ 84ನೇ ಜನ್ಮ ದಿನೋತ್ಸವ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಅವರು ಬಿಡುಗಡೆ ಮಾಡಿದರು.</p>.<p>‘ಇಷ್ಟು ಮಂದಿ ಶಾಸಕರಲ್ಲಿಯೇ ನಾಲ್ಕು– ಐದು ಗುಂಪುಗಳಾಗಿವೆ’ ಎಂದು ವಿಷಾದಿಸಿದ ಸಚಿವರು, ‘ನಾನು ಟೀಕೆ ಮಾಡುತ್ತಿದ್ದೇನೆ ಎಂದು ತಪ್ಪಾಗಿ ಭಾವಿಸಬಾರದು. ಮಂತ್ರಿಯಾಗಿದ್ದೇನೆ ಎಂದು ನಾನು ಈ ಮಾತುಗಳನ್ನು ಹೇಳುತ್ತಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>* ‘ಒಮ್ಮತವಿದ್ದರೆ ನಿಮ್ನ ವರ್ಗದವರೂ ಮುಖ್ಯಮಂತ್ರಿ ಆಗಲು ಸಾಧ್ಯವಿತ್ತು’</strong></p>.<p>ಬೆಂಗಳೂರು, ಏ. 14– ರಾಜ್ಯದ ಹರಿಜನ– ಗಿರಿಜನ ಶಾಸಕರಲ್ಲಿ ಒಮ್ಮತವಿಲ್ಲವೆಂದು ಕಾರ್ಮಿಕ ಖಾತೆ ರಾಜ್ಯ ಸಚಿವ ಕೆ. ಶ್ರೀರಾಮುಲು ಅವರು ಇಂದು ಇಲ್ಲಿ ವಿಷಾದ ವ್ಯಕ್ತಪಡಿಸಿದರು.</p>.<p>ರಾಜ್ಯದಲ್ಲಿರುವ 32 ಹರಿಜನ– ಗಿರಿಜನ ಶಾಸಕರು ಒಟ್ಟಾಗಿ ಒಂದೇ ಅಭಿಪ್ರಾಯ ಉಳ್ಳವರಾಗಿದ್ದಿದ್ದರೆ ಅವರಲ್ಲೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗುವ ಸಾಧ್ಯತೆ ಇತ್ತೆಂದು ಅವರು ಅಭಿಪ್ರಾಯಪಟ್ಟರು.</p>.<p>ಎಚ್.ಎ.ಎಲ್ ಹಿಂದುಳಿದ ಮತ್ತು ದಲಿತ ಕಲ್ಯಾಣ ಸಮಿತಿ ಆಶ್ರಯದಲ್ಲಿ ಪುರಭವನದಲ್ಲಿ ಆಚರಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ 84ನೇ ಜನ್ಮ ದಿನೋತ್ಸವ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಅವರು ಬಿಡುಗಡೆ ಮಾಡಿದರು.</p>.<p>‘ಇಷ್ಟು ಮಂದಿ ಶಾಸಕರಲ್ಲಿಯೇ ನಾಲ್ಕು– ಐದು ಗುಂಪುಗಳಾಗಿವೆ’ ಎಂದು ವಿಷಾದಿಸಿದ ಸಚಿವರು, ‘ನಾನು ಟೀಕೆ ಮಾಡುತ್ತಿದ್ದೇನೆ ಎಂದು ತಪ್ಪಾಗಿ ಭಾವಿಸಬಾರದು. ಮಂತ್ರಿಯಾಗಿದ್ದೇನೆ ಎಂದು ನಾನು ಈ ಮಾತುಗಳನ್ನು ಹೇಳುತ್ತಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>