<p><strong>ವಿಜಯನಗರ ಉಕ್ಕು ಕಾರ್ಖಾನೆ: ಕೇಂದ್ರದ ಅನಿಶ್ಚಿಯ, ನಿಧಾನ ಧೋರಣೆಗೆ ಸಚಿವ ಕೃಷ್ಣ ವಿಷಾದ</strong></p><p>ಬೆಂಗಳೂರು, ಫೆ. 4– ನಾಲ್ಕು ವರ್ಷಗಳ ಹಿಂದೆ ಅಬ್ಬರದಿಂದ ಅನುಮತಿ ದೊರಕಿಸಿಕೊಂಡ ವಿಜಯನಗರ ಉಕ್ಕಿನ ಕಾರ್ಖಾನೆಯ ‘ತೀರಾ ನಿಧಾನ ಹಾಗೂ ವೇದನಾಪೂರ್ಣ ಪ್ರಗತಿ’ಗೆ ಕಾರಣವಾದ ಕೇಂದ್ರ ಉಕ್ಕು ಇಲಾಖೆಯ ಧೋರಣೆಯ ಬಗ್ಗೆ ರಾಜ್ಯ ಕೈಗಾರಿಕಾ ಮಂತ್ರಿಯವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. </p><p>‘ಈ ಅವಧಿಯಲ್ಲಿ ನಿರ್ಮಾಣ ವೆಚ್ಚ ದ್ವಿಗುಣಗೊಂಡಿದೆ; ತೈಲ ಬಿಕ್ಕಟ್ಟಿನಂಥ ಸಮಸ್ಯೆಗಳು ಉದ್ಭವಿಸಿವೆ. ನಿಧಾನ ಧೋರಣೆಯಿಂದಾಗಿ ಹೀಗೆ ಕಳೆದುಹೋದ ಅಮೂಲ್ಯ ಸಮಯದ ಬಗ್ಗೆ ಯೋಚಿಸುವಾಗ ತೀರಾ ನೋವು ಆಗುತ್ತದೆ’ ಎಂದು ಸಚಿವ ಎಸ್.ಎಂ. ಕೃಷ್ಣ ಅವರು ಹೇಳಿದರು. </p>.<p><strong>ಖ್ಯಾತ ಅಣು ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ನಿಧನ</strong></p><p>ಕೋಲ್ಕತ್ತ, ಫೆ. 4– ವಿಶ್ವವಿಖ್ಯಾತ ವಿಜ್ಞಾನಿಗಳಾದ ರಾಷ್ಟ್ರೀಯ ಪ್ರೊಫೆಸರ್ ಸತ್ಯೇಂದ್ರನಾಥ್ ಬೋಸ್ ಅವರು ಇಂದು ಬೆಳಿಗ್ಗೆ ಇಲ್ಲಿ ನಿಧನ ಹೊಂದಿದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. </p><p>ಖ್ಯಾತ ಭೌತ ವಿಜ್ಞಾನಿಗಳಾದ ಸತ್ಯಬೋಸ್ ಅವರು, ‘ಕ್ವಾಂಟಮ್ ಸ್ಟ್ಯಾಟಿಕ್ಸ್’ ಸಿದ್ಧಾಂತದ ಕರ್ತವ್ಯಗಳು, ಸಿದ್ಧಾಂತದ ಸುವರ್ಣ ಮಹೋತ್ಸವದ ಅಂಗವಾಗಿ ಜನವರಿ 10ರಂದು ನಡೆದ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮ್ಮೇಳನದಲ್ಲಿ ಬೋಸ್ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯನಗರ ಉಕ್ಕು ಕಾರ್ಖಾನೆ: ಕೇಂದ್ರದ ಅನಿಶ್ಚಿಯ, ನಿಧಾನ ಧೋರಣೆಗೆ ಸಚಿವ ಕೃಷ್ಣ ವಿಷಾದ</strong></p><p>ಬೆಂಗಳೂರು, ಫೆ. 4– ನಾಲ್ಕು ವರ್ಷಗಳ ಹಿಂದೆ ಅಬ್ಬರದಿಂದ ಅನುಮತಿ ದೊರಕಿಸಿಕೊಂಡ ವಿಜಯನಗರ ಉಕ್ಕಿನ ಕಾರ್ಖಾನೆಯ ‘ತೀರಾ ನಿಧಾನ ಹಾಗೂ ವೇದನಾಪೂರ್ಣ ಪ್ರಗತಿ’ಗೆ ಕಾರಣವಾದ ಕೇಂದ್ರ ಉಕ್ಕು ಇಲಾಖೆಯ ಧೋರಣೆಯ ಬಗ್ಗೆ ರಾಜ್ಯ ಕೈಗಾರಿಕಾ ಮಂತ್ರಿಯವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. </p><p>‘ಈ ಅವಧಿಯಲ್ಲಿ ನಿರ್ಮಾಣ ವೆಚ್ಚ ದ್ವಿಗುಣಗೊಂಡಿದೆ; ತೈಲ ಬಿಕ್ಕಟ್ಟಿನಂಥ ಸಮಸ್ಯೆಗಳು ಉದ್ಭವಿಸಿವೆ. ನಿಧಾನ ಧೋರಣೆಯಿಂದಾಗಿ ಹೀಗೆ ಕಳೆದುಹೋದ ಅಮೂಲ್ಯ ಸಮಯದ ಬಗ್ಗೆ ಯೋಚಿಸುವಾಗ ತೀರಾ ನೋವು ಆಗುತ್ತದೆ’ ಎಂದು ಸಚಿವ ಎಸ್.ಎಂ. ಕೃಷ್ಣ ಅವರು ಹೇಳಿದರು. </p>.<p><strong>ಖ್ಯಾತ ಅಣು ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್ ನಿಧನ</strong></p><p>ಕೋಲ್ಕತ್ತ, ಫೆ. 4– ವಿಶ್ವವಿಖ್ಯಾತ ವಿಜ್ಞಾನಿಗಳಾದ ರಾಷ್ಟ್ರೀಯ ಪ್ರೊಫೆಸರ್ ಸತ್ಯೇಂದ್ರನಾಥ್ ಬೋಸ್ ಅವರು ಇಂದು ಬೆಳಿಗ್ಗೆ ಇಲ್ಲಿ ನಿಧನ ಹೊಂದಿದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. </p><p>ಖ್ಯಾತ ಭೌತ ವಿಜ್ಞಾನಿಗಳಾದ ಸತ್ಯಬೋಸ್ ಅವರು, ‘ಕ್ವಾಂಟಮ್ ಸ್ಟ್ಯಾಟಿಕ್ಸ್’ ಸಿದ್ಧಾಂತದ ಕರ್ತವ್ಯಗಳು, ಸಿದ್ಧಾಂತದ ಸುವರ್ಣ ಮಹೋತ್ಸವದ ಅಂಗವಾಗಿ ಜನವರಿ 10ರಂದು ನಡೆದ ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮ್ಮೇಳನದಲ್ಲಿ ಬೋಸ್ ಅವರನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>