ವಿಜಯನಗರ ಉಕ್ಕು ಕಾರ್ಖಾನೆ: ಕೇಂದ್ರದ ಅನಿಶ್ಚಿಯ, ನಿಧಾನ ಧೋರಣೆಗೆ ಸಚಿವ ಕೃಷ್ಣ ವಿಷಾದ
ಬೆಂಗಳೂರು, ಫೆ. 4– ನಾಲ್ಕು ವರ್ಷಗಳ ಹಿಂದೆ ಅಬ್ಬರದಿಂದ ಅನುಮತಿ ದೊರಕಿಸಿಕೊಂಡ ವಿಜಯನಗರ ಉಕ್ಕಿನ ಕಾರ್ಖಾನೆಯ ‘ತೀರಾ ನಿಧಾನ ಹಾಗೂ ವೇದನಾಪೂರ್ಣ ಪ್ರಗತಿ’ಗೆ ಕಾರಣವಾದ ಕೇಂದ್ರ ಉಕ್ಕು ಇಲಾಖೆಯ ಧೋರಣೆಯ ಬಗ್ಗೆ ರಾಜ್ಯ ಕೈಗಾರಿಕಾ ಮಂತ್ರಿಯವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
‘ಈ ಅವಧಿಯಲ್ಲಿ ನಿರ್ಮಾಣ ವೆಚ್ಚ ದ್ವಿಗುಣಗೊಂಡಿದೆ; ತೈಲ ಬಿಕ್ಕಟ್ಟಿನಂಥ ಸಮಸ್ಯೆಗಳು ಉದ್ಭವಿಸಿವೆ. ನಿಧಾನ ಧೋರಣೆಯಿಂದಾಗಿ ಹೀಗೆ ಕಳೆದುಹೋದ ಅಮೂಲ್ಯ ಸಮಯದ ಬಗ್ಗೆ ಯೋಚಿಸುವಾಗ ತೀರಾ ನೋವು ಆಗುತ್ತದೆ’ ಎಂದು ಸಚಿವ ಎಸ್.ಎಂ. ಕೃಷ್ಣ ಅವರು ಹೇಳಿದರು.