<p><strong>ಅನ್ನ ಸಮಸ್ಯೆ; ಧಾನ್ಯ ಉಳಿಕೆ ಕುರಿತು ಮುನ್ಷಿ</strong></p><p>ಮುಂಬೈ, ಜುಲೈ 23– ಆಹಾರ ಧಾನ್ಯ ಶೇಖರಣೆಗೆಂದು ಹೆಚ್ಚುವರಿ ಸಂಸ್ಥಾನಗಳು ಯಾವ ಪ್ರಯತ್ನವನ್ನೂ ಮಾಡಿಲ್ಲವೆಂದು ಭಾರತ ಸರ್ಕಾರದ ಆಹಾರ ಶಾಖೆ ಸಚಿವ ಕೆ.ಎಂ. ಮುನ್ಷಿ ಅವರು ಇಂದು ದೂರಿದರು.</p><p>ಮದರಾಸ್, ಮುಂಬಯಿ, ಪಶ್ಚಿಮ ಬಂಗಾಳ ಮತ್ತು ಹೈದರಾಬಾದ್ ಸಂಸ್ಥಾನಗಳು ಆಹಾರ ಸಂಗ್ರಹಣೆ ಮಾಡುತ್ತಿದ್ದರೂ ಉತ್ತರ ಪ್ರದೇಶ, ಮಧ್ಯಪ್ರದೇಶ, ಪೂರ್ವ ಪಂಜಾಬ್ ಮತ್ತು ಪೆಪ್ಸು ಯೂನಿಯನ್ಗಳಂಥ ಹೆಚ್ಚುವರಿ ಪ್ರದೇಶಗಳು ಸುಮ್ಮನೆ ಬರಿಯ ಹೆಸರಿಗೆ ಮಾತ್ರ ಶೇಖರಣಾ ಕಾರ್ಯ ನಡೆಸುತ್ತಿವೆ ಎಂದು ನುಡಿದರು. </p> <p><strong>ರೇಷನ್ ಪದಾರ್ಥಗಳ ಬೆಲೆ ಹೆಚ್ಚಿಸುವ ಸರ್ಕಾರದ ಸನ್ನಾಹಕ್ಕೆ ಸೋಷಲಿಸ್ಟರ ತೀವ್ರ ಖಂಡನೆ</strong></p><p>ಬೆಂಗಳೂರು, ಜುಲೈ 23– ಸೋಷಲಿಸ್ಟ್ ಪಾರ್ಟಿಯ ನಗರ ಶಾಖೆಯ ಸರ್ವ ಸದಸ್ಯರ ಸಭೆ ಇಂದು ಮಧ್ಯಾಹ್ನ ಆರ್ಯ ವಿದ್ಯಾಶಾಲೆಯಲ್ಲಿ ನಡೆದು, ರೇಷನ್ ಪದಾರ್ಥಗಳ ಬೆಲೆ ಹೆಚ್ಚು ಮಾಡುವ ಸರ್ಕಾರದ ನಿರೀಕ್ಷಿತ ಸನ್ನಾಹವನ್ನು ತೀವ್ರವಾಗಿ ಖಂಡಿಸಿ ನಿರ್ಣಯ ಅಂಗೀಕರಿಸಿತು.</p>.<p>ಮೈಸೂರು ಸೋಷಲಿಸ್ಟ್ ಪಾರ್ಟಿ ಅಧ್ಯಕ್ಷ ಸಿ.ಜಿ.ಕೆ. ರೆಡ್ಡಿ ಅಧ್ಯಕ್ಷತೆವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅನ್ನ ಸಮಸ್ಯೆ; ಧಾನ್ಯ ಉಳಿಕೆ ಕುರಿತು ಮುನ್ಷಿ</strong></p><p>ಮುಂಬೈ, ಜುಲೈ 23– ಆಹಾರ ಧಾನ್ಯ ಶೇಖರಣೆಗೆಂದು ಹೆಚ್ಚುವರಿ ಸಂಸ್ಥಾನಗಳು ಯಾವ ಪ್ರಯತ್ನವನ್ನೂ ಮಾಡಿಲ್ಲವೆಂದು ಭಾರತ ಸರ್ಕಾರದ ಆಹಾರ ಶಾಖೆ ಸಚಿವ ಕೆ.ಎಂ. ಮುನ್ಷಿ ಅವರು ಇಂದು ದೂರಿದರು.</p><p>ಮದರಾಸ್, ಮುಂಬಯಿ, ಪಶ್ಚಿಮ ಬಂಗಾಳ ಮತ್ತು ಹೈದರಾಬಾದ್ ಸಂಸ್ಥಾನಗಳು ಆಹಾರ ಸಂಗ್ರಹಣೆ ಮಾಡುತ್ತಿದ್ದರೂ ಉತ್ತರ ಪ್ರದೇಶ, ಮಧ್ಯಪ್ರದೇಶ, ಪೂರ್ವ ಪಂಜಾಬ್ ಮತ್ತು ಪೆಪ್ಸು ಯೂನಿಯನ್ಗಳಂಥ ಹೆಚ್ಚುವರಿ ಪ್ರದೇಶಗಳು ಸುಮ್ಮನೆ ಬರಿಯ ಹೆಸರಿಗೆ ಮಾತ್ರ ಶೇಖರಣಾ ಕಾರ್ಯ ನಡೆಸುತ್ತಿವೆ ಎಂದು ನುಡಿದರು. </p> <p><strong>ರೇಷನ್ ಪದಾರ್ಥಗಳ ಬೆಲೆ ಹೆಚ್ಚಿಸುವ ಸರ್ಕಾರದ ಸನ್ನಾಹಕ್ಕೆ ಸೋಷಲಿಸ್ಟರ ತೀವ್ರ ಖಂಡನೆ</strong></p><p>ಬೆಂಗಳೂರು, ಜುಲೈ 23– ಸೋಷಲಿಸ್ಟ್ ಪಾರ್ಟಿಯ ನಗರ ಶಾಖೆಯ ಸರ್ವ ಸದಸ್ಯರ ಸಭೆ ಇಂದು ಮಧ್ಯಾಹ್ನ ಆರ್ಯ ವಿದ್ಯಾಶಾಲೆಯಲ್ಲಿ ನಡೆದು, ರೇಷನ್ ಪದಾರ್ಥಗಳ ಬೆಲೆ ಹೆಚ್ಚು ಮಾಡುವ ಸರ್ಕಾರದ ನಿರೀಕ್ಷಿತ ಸನ್ನಾಹವನ್ನು ತೀವ್ರವಾಗಿ ಖಂಡಿಸಿ ನಿರ್ಣಯ ಅಂಗೀಕರಿಸಿತು.</p>.<p>ಮೈಸೂರು ಸೋಷಲಿಸ್ಟ್ ಪಾರ್ಟಿ ಅಧ್ಯಕ್ಷ ಸಿ.ಜಿ.ಕೆ. ರೆಡ್ಡಿ ಅಧ್ಯಕ್ಷತೆವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>